ಜಿಲ್ಲಾ ಸುದ್ದಿ

ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ವೀರರನ್ನು ನೆನಯಬೇಕು – ಡಾಕ್ಟರ್ ಮಾರ್ತಾಂಡಪ್ಪ ಡಿ.ಎಚ್.

Share News

ಸ್ವಾತಂತ್ರ್ಯಕ್ಕಾಗಿ  ಪ್ರಾಣತೆತ್ತ ವೀರರನ್ನು ನೆನಯಬೇಕು – ಡಾಕ್ಟರ್ ಮಾರ್ತಾಂಡಪ್ಪ ಡಿಎಚ್ 

ಹುಬ್ಬಳ್ಳಿ:ಸತ್ಯಮಿಥ್ಯ (ಆಗಸ್ಟ್ -15).

ಪ್ರತಿ ವರ್ಷ ಸ್ವತಂತ್ರ ಸಿಕ್ಕ ದಿನವನ್ನು ಭಾರತೀಯರಾದ ನಾವು ಹೆಮ್ಮೆಯಿಂದ ನೆನಪಿಡಬೇಕು.ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ  ಬಲಿದಾನ ಮಾಡಿದ ಎಲ್ಲ ವೀರರನ್ನು ನೆನೆದು ಅವರಿಗೆ ನಮನ ಸಲ್ಲಿಸಬೇಕಾಗಿದೆ ಎಂದು ಖ್ಯಾತ ಮಕ್ಕಳ ತಜ್ಞರಾದ ಡಾಕ್ಟರ್ ಮಾರ್ತಾಂಡಪ್ಪ ಡಿ.ಎಚ್ ಹೇಳಿದರು.

78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘ ದ ವತಿಯಿಂದ ಅದ್ದೂರಿಯಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ವೇಳೆ ಖ್ಯಾತ ಮಕ್ಕಳ ತಜ್ಞರಾದ ಡಾಕ್ಟರ್ ಮಾರ್ತಾಂಡಪ್ಪ ಡಿಎಚ್ ಇವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರೋತ್ಸವದ ಮಹತ್ವವನ್ನು ತಿಳಿಸಿದರು.

ಈ ವೇಳೆ ರಾಜ್ಯ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್ ಶಿವಶಿಂಪರ , ಅಧ್ಯಕ್ಷರಾದ ರಮೇಶ್, ಕಾರ್ಯದರ್ಶಿಗಳಾದ ಬಸವರಾಜ್, ಖಜಾಂಚಿಗಳಾದ ಕಾರ್ತಿಕ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು ಈ ವೇಳೆ ಸಂಘದ ವತಿಯಿಂದ ಡಾ. ಮಾರ್ತಾಂಡಪ್ಪ ಡಿಎಚ್ ಅವರನ್ನು ಸನ್ಮಾನಿಸಲಾಯಿತು.

ವರದಿ : ಸಂ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!