ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ – ತಹಸೀಲ್ದಾರಗೆ ಮನವಿ.
ಐಸಿಡಿಎಸ್ ಕೆಲಸ ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ ಅಂಗನವಾಡಿ ಕಾರ್ಯಕರ್ತೆಯರ ಮನವಿ.

ಐಸಿಡಿಎಸ್ ಕೆಲಸ ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ ಅಂಗನವಾಡಿ ಕಾರ್ಯಕರ್ತೆಯರ ಮನವಿ.
ಗಜೇಂದ್ರಗಡ:ಸತ್ಯಮಿಥ್ಯ (ಜೂ-13)
ನಿನ್ನೆ ಗಜೇಂದ್ರಗಡ ನಗರದ ತಹಶಿಲ್ದಾರರ ಕಚೇರಿ ಎದುರು ಐಸಿಡಿಎಸ್ ಕೆಲಸ ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ಸಿರಸ್ತೆದಾರರ ಮೂಲಕ ಮಾನ್ಯ ತಹಶಿಲ್ದಾರರಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ನೀಲಮ್ಮ ಹಿರೇಮಠ ಅವರು ಮಾತನಾಡಿ BLO ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಅನಧಿಕೃತವಾಗಿ ಹಚ್ಚುತ್ತಿದ್ದು. ಅಂಗನವಾಡಿ ಕಾರ್ಯಕರ್ತರು ಐಸಿಡಿಎಸ್ ಯೋಜನೆಯ ಜಾರಿಗಾಗಿ ಸುಮಾರು 24-25 ಹಂತದ ಕಾರ್ಯಕ್ರಮಗಳನ್ನು ನಿಭಾಯಿಸುತ್ತೇವೆ ಅವುಗಳಿಗೆ ಸಮಯ ಸಿಗುತ್ತಿಲ್ಲ ಹಾಗಾಗಿ BLO ಕೆಲಸಗಳಿಗೆ ನಮ್ಮನ್ನು ನೇಮಿಸುವುದು ಸರಿಯಲ್ಲಾ. ಐಸಿಡಿಯಸ್ ಅಲ್ಲದ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಮನವಿಯ ಮೂಲಕ ಮಾನ್ಯ ತಹಶಿಲ್ದಾರರ ಅವರಿಗೆ ಒತ್ತಾಯಿಸಿದರು.
ನಂತರ ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ರಾಥೋಡ್ ಮಾತನಾಡಿ ಐಸಿಡಿಎಸ್ ಯೋಜನೆ, ಅದರ ಉದ್ದೇಶ ತಾಯಿ ಮತ್ತು ಮಗುವಿನ ಆರೈಕೆ ಕೆಲಸ ಅದನ್ನು ಬಿಟ್ಟು ಐಸಿಡಿಎಸ್ ಅಲ್ಲದ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತರನ್ನ ನೇಮಿಸುತ್ತಿರುವುದು ಅವೈಜ್ಞಾನಿಕ ನಿಯಮವಾಗಿದ್ದು ಯಾವುದೇ ಕಾರಣಕ್ಕೂ ಐಸಿಡಿಎಸ್ ಅಲ್ಲದ ಕೆಲಸಗಳಿಗೆ ನೇಮಿಸಬಾರದು. ಮಹಿಳೆಯರ ಮತ್ತು ಮಗುವಿನ ಆರೈಕೆ, ಪೌಷ್ಟಿಕಾಂಶ, ಘೋಷಣೆ ಯೋಜನೆಗಳ ಜಾರಿ ಹೀಗೆ ಈಗಾಗಲೇ ಅನೇಕ ಕೆಲಸಗಳಿಗೆ ಸಮಯದ ಅಭಾವವಿದೆ ಮತ್ತು ಕೆಲಸ ಬಾಕಿ ಉಳಿಯುತ್ತಿದ್ದು ಅವುಗಳನ್ನು ಸರಿದೂಗಿಸಲು ಐಸಿಡಿಎಸ್ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಲು ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾಗಿ ತರಬೇತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಮುಂದಾಗಬೇಕು. ಅದನ್ನು ಬಿಟ್ಟು ಅದನ್ನು ಬಿಟ್ಟು ಬೇರೆ ಕೆಲಸಗಳಿಗೆ ನೇಮಿಸುವುದು ಸರಿಯಲ್ಲ ಮತ್ತು ಐಸಿಡಿಯಸ್ ಯೋಜನೆಗೆ ಮಾಡುವ ಮೋಸ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಜಿಲ್ಲಾಧ್ಯಕ್ಷ ಚಂದ್ರು ರಾಥೋಡ್, ಸಿಐಟಿಯು ಜಿಲ್ಲಾ ಮುಖಂಡರಾದ ಮೈಬು ಹವಾಲ್ದಾರ್, ಅಂಗನವಾಡಿ ಮುಖಂಡರಾದ ಸುಮ್ನೆ ಮಾತಾಡಬೇಡ ಸುನಿತಾ, ಪವಿತ್ರ, ಸವಿತಾ ರಾಠೋಡ,
ರಂಜಿತಾ ಕುಲಕರ್ಣಿ, ರತ್ನಾ ವಾಲಿ, ದೀಪಾ ಬಡಿಗೇರ್, ಸುನೀತಾ ಅಜಮೀರ್, ಶಂಕ್ರಮ್ಮ ಸಿಂಹಾಸನದ, ಗೀತಾ ಕಡಬಲಕಟ್ಟಿ, ಖಾಜಾಬಿ ಕುಸುಗಲ್, ದಾನಮ್ಮ ಹಿರೇಮಠ್, ವಿಜಯಲಕ್ಷ್ಮಿ ಪತ್ತಾರ್, ರಾಚಮ್ಮ ಗದಗಿನಮಠ, ಮಲ್ಲಮ್ಮ ವಿಭೂತಿ, ಮಹಾದೇವಿ, ಕಸ್ತೂರಿ ಹುಬ್ಬಳಿ, ಸಾವಿತ್ರಿ ಸುಬೇದಾರ್, ಮಂಜುಳಾ ಹಡಪದ, ಸಿದ್ರಾಮವ್ವ ಹಿರೇಮಠ, ಶಾಂತ ಸೋಬಾನದ್, ಲಕ್ಷ್ಮಿಬಾಯಿ ರಾಠೋಡ, ಶಾವಕ್ಕ ಗುರಿಕಾರ್, ಲಕ್ಷ್ಮಿ ಬಂಕದ್, ಪರವಿನ ಬಾನು ಮದಗಾರ, ಶಾರದಾ ಮಂತಾ, ಲಲಿತಾ ಮಾರನಬಸರಿ, ಪವಿತ್ರ ಚಳಗೇರಿ, ಶಾಂತ ಸೋಬಾನದ ಹಾಗೂ ಇತರರು ಹಾಜರಿದ್ದರು.
ವರದಿ : ಚನ್ನು. ಎಸ್.