ತಾಲೂಕು

ಶಿರೂರು ಪುರ್ನವಸತಿಯಲ್ಲಿ ಅವೈಜ್ಞಾನಿಕ ಕಾಮಗಾರಿ – ಮಳೆಯಿಂದ ಜಲಾವೃತವಾದ ನಾಲ್ಕು ದೇವಸ್ಥಾನಗಳು – ಗ್ರಾಮಸ್ಥರ ಪ್ರತಿಭಟನೆ.

Share News

ಶಿರೂರು ಪುರ್ನವಸತಿಯಲ್ಲಿ ಅವೈಜ್ಞಾನಿಕ ಕಾಮಗಾರಿ – ಮಳೆಯಿಂದ ಜಲಾವೃತವಾದ ನಾಲ್ಕು ದೇವಸ್ಥಾನಗಳು – ಗ್ರಾಮಸ್ಥರ ಪ್ರತಿಭಟನೆ 

ಕುಕನೂರು : ಸತ್ಯಮಿಥ್ಯ (ಆಗಸ್ಟ್ -19)

ತಾಲೂಕಿನ ಶಿರೂರು ಗ್ರಾಮದ ಪುರ್ನವಸತಿ ಗ್ರಾಮದಲ್ಲಿ ಕೆಬಿಜೆಎನ್ ಅಧಿಕಾರಿಗಳು, ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಗ್ರಾಮದ ನಾಲ್ಕು ದೇವಸ್ಥಾನಗಳು ಮಳೆಯಿಂದ ಮುಳುಗಡೆಯಾಗಿವೆ ಎಂದು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಮಾತನಾಡಿ, ನಮ್ಮ ಗ್ರಾಮದ ಪುನರ್ ವಸತಿ ಕಾಮಗಾರಿಯಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅರೆಬರೆ ಕಾಮಗಾರಿಯನ್ನು ಮಾಡಿದ್ದಾರೆ ಇದರಿಂದ ಕಲ್ಲಿನಾಥೇಶ್ವರ, ದುರ್ಗಾದೇವಿ, ದ್ಯಾಮವ್ವ ಹಾಗೂ ಮಾರುತಿ ದೇವಸ್ಥಾನಗಳಿಗೆ ಮಳೆ ನೀರು ನುಗ್ಗಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಇಂತಹ ಸಮಸ್ಯೆಗಳು ಆಗುತ್ತಿದ್ದರು ನಮಗೂ, ಇದಕ್ಕೂ ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದರು.

ಮನವಲಿಕೆ; ಶಿರೂರು ಗ್ರಾಮದ ನಿವಾಸಿಯೊಬ್ಬರು ಚರಂಡಿ ಮಾಡಲು ತಕರಾರು ತೆಗೆದಿದ್ದರು, ಅದನ್ನು ಗಮನಹರಿಸಿ ಮಳೆ ನೀರನ್ನು ಸರಾಗವಾಗಿ ಹರಿದು ಹೋಗಲು ತಹಶೀಲ್ದಾರ್ ಎಚ್.ಪ್ರಾಣೇಶ, ಮುಖಂಡ ದೇವಪ್ಪ ಅರಕೇರಿ, ಪೋಲಿಸ್ ಅಧಿಕಾರಿಗಳು ನೀರು ಹರಿದು ಹೋಗುವಂತೆ ಮನವಲಿಸಿದರು.

ಜಮೀನಿಗೆ ನುಗ್ಗಿದ ಚರಂಡಿ ನೀರು: ಶಿರೂರು ಗ್ರಾಮದ ರೈತ ರಮೇಶ ವಾಲ್ಮೀಕಿ ಅವರ ಜಮೀನಿನ ಹತ್ತಿರ ಚರಂಡಿ ಕಾಮಗಾರಿಯನ್ನು ಅರೆಬರೆ ಮಾಡಿದ್ದರಿಂದ ಪ್ರತಿವರ್ಷ ಮಳೆಬಂದAತಹ ನೀರು ಜಮೀನಿಗೆ ಹರಿದು ಬರುತ್ತದೆ. ಇದರಿಂದ ರೈತ ರಮೇಶ ಅವರು ಜಮೀನು ಬಿತ್ತನೆ ಮಾಡುವದನ್ನೆ ಬಿಟ್ಟಿದ್ದರು. ಇದರ ಬಗ್ಗೆ ಎಇಇ ಅಧಿಕಾರಿ ರಾಘವೇಂದ್ರ ಜೋಶಿ ಅವರಿಗೆ ಅನೇಕ ಬಾರಿ ಹೇಳಿದರು ಕ್ಯಾರೆ ಎಂದಿಲ್ಲ. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಮೆಕ್ಕೆಜೋಳ ನೀರಿನಲ್ಲಿ ಮುಳುಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ಈಶಪ್ಪ ದೊಡ್ಡಮನಿ, ಗ್ರಾ.ಪಂ ಸದಸ್ಯ ವಿರೇಂದ್ರ ಮಾದಿನೂರು, ಮಲ್ಲಪ್ಪ ಬಂಗಾರಿ, ಮಂಜುನಾಥ ವಾಲ್ಮೀಕಿ, ಈರಪ್ಪ, ಶರಣಪ್ಪ, ಈರಪ್ಪ, ಶರಣಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!