
ಗದಗ:ಗಜಾನನ ಮಹಾಮಂಡಳಿಯ ವತಿಯಿಂದ ಪ್ರಶಸ್ತಿ ವಿತರಣಾ ಸಮಾರಂಭ.
ಗದಗ:ಸತ್ಯಮಿಥ್ಯ(ಸ-15)
ಗದಗ-ಬೆಟಗೇರಿ ಸಾರ್ವಜನಿಕ ಮಹಾ ಮಂಡಳಿಯ ವತಿಯಿಂದ 2024 ನೇ ಸಾಲಿನ ಗಣೇಶ ಮೂರ್ತಿ ಅಲಂಕಾರ/ ದೃಶ್ಯಾವಳಿ ಸಾಂಸ್ಕೃತಿಕ ವಿಭಾಗದ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ಸೆ-15 ರಂದು ಮುಂಜಾನೆ 10:30 ಗಂಟೆಗೆ ನಗರದ ನಾಮಜೋಶಿ ರಸ್ತೆಯಲ್ಲಿರುವ ತರುಣ ಗಜಾನನ ವ್ಯಾಪಾರಸ್ಥರ ಸಂಘದ ಗಣೇಶ ಪ್ರತಿಷ್ಠಾಪನೆಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ಜರುಗಿತು.
ಪ್ರಶಸ್ತಿ ವಿತರಣೆಯನ್ನು ಮಹಾ ಮಂಡಳಿಯ ಅಧ್ಯಕ್ಷರಾದ ರಾಜಣ್ಣ ಮಲ್ಲಾಡದ ಅವರು ಹಾಗೂ ಸಂಘದ ಪದಾಧಿಕಾರಿಗಳಿಂದ ಪ್ರಶಸ್ತಿ ವಿತರಣೆಯು ಜರುಗಿತು.
ಗಣೇಶ ಮೂರ್ತಿಯ:
ಪ್ರಥಮ ಸ್ಥಾನವನ್ನು ‘ನವ ಚೇತನ ಯುವಕ ಸಂಘ’ ಜವಳ ಗಲ್ಲಿ ಆಝಾದ್ ರಸ್ತೆ, ದ್ವಿತೀಯ ಸ್ಥಾನವನ್ನು ‘ಜೈ ಹನುಮಾನ್ ಯುವಕ ಸಂಘ’ ವಿವೇಕಾನಂದ ನಗರ ತೃತೀಯ ಸ್ಥಾನವನ್ನು ‘ಸೋಮೇಶ್ವರ ಯುವಕ ಸಂಘ’ ಕರಿದೇವರ ಗುಡಿಯ ಹತ್ತಿರ, ಪಡೆದುಕೊಂಡಿದ್ದಾರೆ.
ಅಲಂಕಾರ/ ದೃಶ್ಯಾವಳಿ:
ಪ್ರಥಮ ಸ್ಥಾನವನ್ನು ಮುರುಗಿ ಬಸವೇಶ್ವರ ಯುವಕ ಸಂಘ ನೇಕಾರ ಕಾಲೋನಿ ನರಸಾಪುರ್ ದೃಶ್ಯಾವಳಿ ಸಂತ ಶಿಶುನಾಳ ಶರೀಫ,
ದ್ವಿತೀಯ ಸ್ಥಾನವನ್ನು ಚಂದ್ರೋದಯ ಗಜಾನನ ಸಂಘ ನೇಕಾರ್ ಕಾಲೋನಿ ದೃಶ್ಯಾವಳಿ ಪಾಂಡುರಂಗ, ತೃತೀಯ ಸ್ಥಾನವನ್ನು ಬಾಲ ಗಜಾನನ ಉತ್ಸವ ಸಮಿತಿ ನೇಕಾರ ನಗರ ದೃಶ್ಯಾವಳಿ ಭಕ್ತ ಪ್ರಹ್ಲಾದ, ಪಡೆದುಕೊಂಡಿದ್ದಾರೆ.
ಅಲಂಕಾರ/ ಸಾಂಸ್ಕೃತಿಕ ಕಾರ್ಯಕ್ರಮ:
ಪ್ರಥಮ ಸ್ಥಾನವನ್ನು ನವ ಭಾರತ ಯುವಕ ಸಂಘ ಹುಚ್ಚನಗೌಡ್ರು ಓಣಿ ಸಾಂಸ್ಕೃತಿಕ ವಿಭಾಗ, ಹುಡ್ಕೊ ಕಾ ರಾಜಾ ಸುವರ್ಣ ಮಹೋತ್ಸವ ಗಾರ್ಡನ್ ಅಲಂಕಾರ ಹಾಗೂ ಸಾಂಸ್ಕೃತಿಕ ಗದಗ ಕಾ ರಾಜ ತರುಣ ಯುವಕ ಸಂಘ ಗ್ರೀನ್ ಮಾರ್ಕೆಟ್ ಗದಗ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೌರವಾಧ್ಯಕ್ಷರಾದ ಕಿಶನ್ ಮೆರವಾಡೆ ಕಾರ್ಯಾಧ್ಯಕ್ಷರಾದ ಅನಿಲ್ ಅಬ್ಬಿಗೇರಿ ಸಂಘದ ಮಾರ್ಗದರ್ಶಕರಾದ ರಾಜು ಖಾನಪ್ಪನವರ್ ಅಜ್ಜಣ್ಣ ಮಲ್ಲಾಡದ ರಾಜು ಮುಧೋಳ್ ರಘು ಪವಾರ್ ಗದಗ್ ಬೆಟಗೇರಿ ಅವಳಿ ನಗರದ ಪ್ರತಿಷ್ಠಾಪನ ಮಾಡುವ ಎಲ್ಲ ಮಂಡಳಿಯ ಪದಾಧಿಕಾರಿಗಳು ಹಿತೈಷಿಗಳು ಹಿರಿಯರು ಯುವಕರು ಉಪಸ್ಥಿತರಿದ್ದರು
ವರದಿ:ಮುತ್ತು ಗೋಸಲ್