ಸ್ಥಳೀಯ ಸುದ್ದಿಗಳು

ವಿಜೃಂಭಣೆಯಿಂದ ನೆರವೇರಿದ ವಿಶ್ವಕರ್ಮ ಜಯಂತಿ

Share News

ವಿಜೃಂಭಣೆಯಿಂದ ನೆರವೇರಿದ ವಿಶ್ವಕರ್ಮ ಜಯಂತಿ

ಕೊಪ್ಪಳ:ಸತ್ಯಮಿಥ್ಯ (ಸೆ -18).

ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಗ್ರಾಮ ದೇವತೆಯ ದೇವಸ್ಥಾನದಲ್ಲಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಭಗವಾನ್ ವಿಶ್ವಕರ್ಮರ ಜನ್ಮದಿನ ಆಚರಣೆ ಮಾಡಲಾಯಿತು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಬಡಿಗೇರ್ ಮಾತನಾಡಿ ಭಗವಾನ್ ವಿಶ್ವಕರ್ಮರ ಜನ್ಮದಿನದ ಆಚರಣೆಯು ಹಿಂದೂ ಧರ್ಮದಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ, ವಿಶೇಷವಾಗಿ ಎಂಜಿನಿಯರ್‌ಗಳು, ಕುಶಲಕರ್ಮಿಗಳು, ಕಾರ್ಮಿಕರು, ಕಾರ್ಖಾನೆಯ ಕೆಲಸಗಾರರು, ಬಡಗಿಗಳು, ವಾಸ್ತುಶಿಲ್ಪಿಗಳು ಮತ್ತು ಶಿಲ್ಪಿಗಳಿಗೆ. ಭಗವಾನ್ ವಿಶ್ವಕರ್ಮನನ್ನು ಗೌರವಿಸಲು ಮತ್ತು ಅವರ ವೃತ್ತಿಗಳು, ವ್ಯವಹಾರಗಳು ಮತ್ತು ಪ್ರಯತ್ನಗಳಲ್ಲಿ ಯಶಸ್ಸಿಗೆ ಅವರ ಆಶೀರ್ವಾದವನ್ನು ಪಡೆಯಲು ಇದು ನಿರ್ಣಾಯಕ ದಿನವಾಗಿದೆ. ಈ ಮಂಗಳಕರ ಸಂದರ್ಭವು ಮೆಚ್ಚುಗೆ ಮತ್ತು ಕೃತಜ್ಞತೆಯ ಸಮಯವಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಜನರು ನಮ್ಮ ಜಗತ್ತನ್ನು ರೂಪಿಸುವ ದೈವಿಕ ಕರಕುಶಲತೆಯನ್ನು ಅಂಗೀಕರಿಸುತ್ತಾರೆ ಅಂತಹ ವಿಶ್ವಕರ್ಮರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಗಂಗಾಧರ ಬಡಿಗೇರ, ಉಪಾಧ್ಯಕ್ಷರಾದ ಮೌನೇಶ್ ಬಿ ಪತ್ತಾರ, ಪ್ರಧಾನ ಕಾರ್ಯದರ್ಶಿ ಆನಂದ್ ವಿ ಬಡಿಗೇರ್, ಮುದುಕಪ್ಪ ವಿ ಬಡಿಗೇರ್, ರಮೇಶ್ ಎಸ್ ಬಡಿಗೇರ್, ಮರಿಯಪ್ಪ ಬಡಿಗೇರ್, ಆನಂದ್ ಡಿ ಬಡಿಗೇರ್, ಮೋಹನ್ ,ಗಣೇಶ್, ವಿಶ್ವಕರ್ಮ ಸಮಾಜದ ಗುರು ಹಿರಿಯರು ಯುವಕರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಇತರರು ಇದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!