
ಸುರಪುರ / ಕುಡಿಯೋ ನೀರಿಗಾಗಿ ಆಹಾಕಾರ
ರಾಯಗೇರಾ: ಸತ್ಯಮಿಥ್ಯ (ಆ-23)
ಸುರಪೂರ ತಾಲ್ಲೂಕಿನ ದೇವತ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ರಾಯಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಗ್ರಾಮ ಪಂಚಾಯಿತಿ ದೇವತ್ಕಲ ಪಿ.ಡಿ.ಓ ಗಮನಕ್ಕೆ ಹಲವು ಬಾರಿ ತಂದರು ಕ್ಯಾರೇ ಎನ್ನುತ್ತಿಲ್ಲ.
ಈ ರಾಯಗೇರಾ ಊರಿನ ಜನರು ಕುಡಿಯುವ ನೀರಿನ ಬೋರ ಮೋಟಾರ್ ಸುಟ್ಟು 7 ದಿನವಾಗಿದೆ ಎಂದು ಸಾರ್ವಜನಿಕರು ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ.
ಈ ರಾಯಗೇರಾ ಗ್ರಾಮದ ಸಮಸ್ಯೆಯ ಬಗ್ಗೆ ನಿರ್ಲಕ್ಷ ತೋರುವ ಅಧಿಕಾರಿಗಳು ಬೇಡ ಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು .
ಇದೇ ಸಂದರ್ಭದಲ್ಲಿ ರಾಯಗೇರಾ ಗ್ರಾಮದ ಜನರು ಮತ್ತು ಈ ಊರಿನ ಯಲ್ಲಪ್ಪ ವಕೀಲರು ಒತ್ತಾಯಿಸಿದರು
ವರದಿ : ಶಿವು ರಾಠೋಡ