ತಾಲೂಕು

ದಿ ಲಕ್ಷ್ಮೀ ಅರ್ಬನ್ ಕೊ – ಆಪರೇಟಿವ್ಹ ಬ್ಯಾಂಕಿನ ನವಿಕೃತ ಕಚೇರಿ ಉದ್ಘಾಟನೆ ಕಾರ್ಯಕ್ರಮ.

Share News

ದಿ ಲಕ್ಷ್ಮೀ ಅರ್ಬನ್ ಕೊ – ಆಪರೇಟಿವ್ಹ ಬ್ಯಾಂಕಿನ ನವಿಕೃತ ಕಚೇರಿ ಉದ್ಘಾಟನೆ ಕಾರ್ಯಕ್ರಮ.
Oplus_131072

75 ತುಂಬಿರುವ ವಯೋವೃದ್ಧರಿಗೆ ಸನ್ಮಾನ ಕಾರ್ಯಕ್ರಮ.

ಗಜೇಂದ್ರಗಡ : (ನ -19).

1913 ರಲ್ಲಿ ಸ್ಥಾಪನೆಯಾದ ನಗರದ ದಿ ಲಕ್ಷ್ಮೀ ಅರ್ಬನ್ ಕೊ – ಆಪರೇಟಿವ್ಹ ಬ್ಯಾಂಕಿಗೆ ಈಗ 112ನೇ ವರ್ಷದ ಸಂಭ್ರಮ.ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಈ ಬ್ಯಾಂಕನಲ್ಲಿ ದೊರಕುತ್ತಿರುವುದರಿಂದ ಗದಗ ಜಿಲ್ಲೆಗೆ ಮಾದರಿ ಹಣಕಾಸು ಸಂಸ್ಥೆಯಾಗಿ ಹೊರಹೋಮ್ಮತ್ತಿದೆ.

Oplus_131072

ನವಂಬರ್ 23 ರಂದು ದಿ ಲಕ್ಷ್ಮೀ ಅರ್ಬನ್ ಕೊ – ಆಪರೇಟಿವ್ಹ ಬ್ಯಾಂಕಿನ ಮುಖ್ಯ ಕಚೇರಿಯ ಮೊದಲನೇ ಮಹಡಿಯ ಮತ್ತು ನವಿಕೃತ ಕಚೇರಿ ಉದ್ಘಾಟನೆ ಹಾಗೂ ಬ್ಯಾಂಕಿನ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

Oplus_131072

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಾಲಕೇರಿ ಶ್ರೀಮ ನಿ ಪ್ರ ಮುಪ್ಪಿನ ಬಸಲಿಂಗ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಡಾ. ಎಚ್.ಕೆ.ಪಾಟೀಲ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್, ಮಾಜಿ ಸಚಿವ ಕಳಕಪ್ಪ ಬಂಡಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ  ಶ್ರೀಮತಿ ಎಸ್ ಎಸ್ ಕಬಾಡೆ ಉಪ ನಿಬಂಧಕರು ಸಹಕಾರ ಸಂಘಗಳು ಗದಗ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಪುಷ್ಪ ಕಡಿವಾಳ ಉಪಸ್ಥಿತರಾಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಚೇರ್ಮನ್ನರಾದ ಸಿಎ ಸುರೇಶ ಕಾಳಪ್ಪ ಚೆನ್ನಿ ವಹಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸಿದ್ದಪ್ಪ ಬಂಡಿ, ನಿರ್ದೇಶಕರಾದ ಪರಣ್ಣ ಕಡ್ಡಿ, ಬಿ.ವಿ.ಕಂಬಳ್ಯಾಳ, ವಿರೇಶ ನಂದಿಹಾಳ,  ಸುಹಾಸ್ಕುಮಾರ್ ಪಟ್ಟೇದ, ಕಲ್ಲಪ್ಪ ಸಜ್ಜನರ, ಪವಾಡಪ್ಪ ಮ್ಯಾಗೇರಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!