
ನಿನ್ನೆಯ ಘಟನೆಗೆ ಸ್ಪಷ್ಟನೆ ನೀಡಿದ ಪುರಸಭೆ ಯೋಜನಾಧಿಕಾರಿ-ಬಿ. ಮಲ್ಲಿಕಾರ್ಜುನ.
ಗಜೇಂದ್ರಗಡ- ಸತ್ಯಮಿಥ್ಯ (ಮಾ-27).
ನಿನ್ನೆ ಸತ್ಯಮಿಥ್ಯ ಪತ್ರಿಕೆ ವೆಬ್ ಪೋರ್ಟಲನಲ್ಲಿ ಪುರಸಭೆ ಆಡಳಿತ ವ್ಯವಸ್ಥೆ ವಿರುದ್ದ ಪ್ರತಿಭಟನೆ-ಉತಾರ ನೀಡಲು ದುಡ್ಡು ತೆಗೆದುಕೊಂಡಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡ ಅಧಿಕಾರಿ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿಟ್ಟು ಅದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ ಯೋಜನಾಧಿಕಾರಿ ಮಲ್ಲಿಕಾರ್ಜುನ. ಬಿ. ಸ್ಪಷ್ಟನೆ ನೀಡಿದ್ದಾರೆ.
ದಿನಾಂಕ 26/3/2025ರಂದು ನಡೆದ ಘಟನೆ ಬಗ್ಗೆ ಸ್ಪಷ್ಟನೆ –
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 26/3/2025 ರಂದು ಪುರಸಭೆ ಮುಂಭಾಗದಲ್ಲಿ ನಡೆದ ಮುಷ್ಕರದಲ್ಲಿ ಅಶೋಕ ವನ್ನಾಲರವರು ನನನ್ನು ಕರೆಯಿಸಿ ಮುಷ್ಕರದಲ್ಲಿ ಪ್ರಶ್ನೆ ಕೇಳಿದಾಗ ಅವರು ಕೇಳಿದ ಪ್ರಶ್ನೆ, ನನಗೆ ಸರಿಯಾಗಿ ಅರ್ಥವಾಗದ ಕಾರಣ ಹಣವನ್ನು ಹಿಂದುರುಗಿಸಿದೆ ಎಂದು ಹೇಳಿಕೆ ನೀಡಿದ್ದು. ಆದರೆ ಸದರಿ ಫಲಾನುಭವಿಯು ಹೊಸದಾಗಿ ಬಂದ 18ಹಕ್ಕು ಪತ್ರದಲ್ಲಿ ಅವರ ಹೆಸರು ಇರುತ್ತದೆ, ಆದ್ದರಿಂದ ಸದರಿಯವರಿಗೆ ದೂರವಾಣಿ ಮೂಲಕ ಕಚೇರಿಗೆ ಕರೆಯಿಸಿಕೊಂಡು ಅವರ ದಾಖಲಾತಿಗಳನ್ನು ಪಡೆವಾಗ.ಸದರಿ ಪಲಾನುಭವಿಯು ದಾಖಲಾತಿ ನೀಡುವ ಸಮಯದಲ್ಲಿ ಹಣವನ್ನು
ದಾಖಲಾತಿಗಳ ಜೊತೆಗೆ ಕವರನಲಿ ಹಣ ಇರಿಸಿರುತ್ತಾರೆ, ಪುನ ನಾನು ಸದರಿ ಭಾವಚಿತ್ರಗಳನ್ನು ಹಕ್ಕು ಪತ್ರಕ್ಕೆ ಹೆಚ್ಚಲು ತೆಗೆದಾಗ ಅದರಲ್ಲಿರುವ ಹಣವನ್ನು ನೋಡಿ ಅಶೋಕ ವನ್ನಾಲ ರವರ ಜೊತೆ ಮಾತಾಡಿ ಫಲಾನುಭವಿಯನ್ನು ಕರೆಯಿಸಿ ಅವರಿಗೆ ಯಾರಿಗೂ ಹಣದನ್ನು ನೀಡಬೇಡಿ ಮಾನ್ಯ ಶಾಸಕರು ಫಲಾನುಭವಿಯ ಹತ್ತಿರ ಹಣವನ್ನು ಪಡೆದು ಕೊಳ್ಳಬಾರದೆಂದು ತಿಳಿಸಿರುತ್ತಾರೆ’ ಎಂದು ಹೇಳಿ ಅವರಿಗೆ ಹಣವನ್ನು ವಾಪಸ್ಸು, ನೀಡಿರುತ್ತೇನೆ, ನಾನು ಯಾವ ಫಲಾನುಭವಿಯಿಂದ ಹಣವನ್ನು ಪಡೆದಿರುವುದಿಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ.
ವರದಿ : ಚನ್ನು.ಎಸ್.