ಪ್ರತಿಭಾ ಕಾರಂಜಿ ಕಲೋತ್ಸವ ಗ್ರಾಮದಲ್ಲಿ ಹಬ್ಬದ ವಾತಾವರಣ:ಜಸ್ವಂತ ರಾಜ ಜೈನ್
ಕಲೋತ್ಸವದಲ್ಲಿ ಮಕ್ಕಳ ವೇಷಭೂಷಣ ಅದ್ಭುತ.

ಪ್ರತಿಭಾ ಕಾರಂಜಿ ಕಲೋತ್ಸವ ಗ್ರಾಮದಲ್ಲಿ ಹಬ್ಬದ ವಾತಾವರಣ:ಜಸ್ವಂತ ರಾಜ ಜೈನ್
ಕೊಪ್ಪಳ:ಸತ್ಯಮಿಥ್ಯ (ಸ-12)
ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಅಬ್ದುಲ್ ಕಲಾಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲ್ಲೋತ್ಸವ ಕಾರ್ಯಕ್ರಮದ ಉದ್ಘಾಟನೆಯ ಕಾರ್ಯಕ್ರಮ ಜರುಗಿತು.
ಉದ್ಘಾಟಕರಾಗಿ ಯಲಬುರ್ಗಾ ಮತ್ತು ಕುಕನೂರು ತಾಲೂಕ ಅನುದಾನ ರಹಿತ ಶಾಲಾ ಒಕ್ಕೂಟದ ಅಧ್ಯಕ್ಷರಾದ ಜಸ್ವಂತ್ ರಾಜ್ ಜೈನ್ ಆಗಮಿಸಿದ್ದರು. ನಂತರ ಮಾತನಾಡುತ್ತ.ಇವತ್ತಿನ ಪ್ರತಿಭಾ ಕಾರಂಜಿ ನೋಡಲು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ . ಪ್ರತಿಭಾಕಾರಂಜಿ ಕಾರ್ಯಕ್ರಮ ಮೂಲಕ ಉತ್ತಮವಾದ ಸಂಸ್ಕೃತಿ, ಕಲೆ, ಆಚರಣೆಗಳನ್ನು ಉಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಈ ವೇದಿಕೆಯನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಪು ನೀಡಲು ಸಲಹೆ ನೀಡಿದರು.ಫಲಿತಾಂಶ ಹೇಗೆ ಬರಲಿ ನಿಮ್ಮ ಪ್ರತಿಭೆ ಪಕ್ವವಾಗಲಿ .ಮಂಗಳೂರು ಗ್ರಾಮದ ವೈಶಿಷ್ಟ ಪೂರ್ಣ ಅರ್ಥ ಕಲ್ಪಿಸಿದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಎಂಜಿಒ ಅಧ್ಯಕ್ಷರಾದ ಮಹೇಶ ಸಬರದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ. ಈ ಮಣ್ಣಿನ ಕಣಕಣದಲ್ಲಿ ಕಲೆ, ಸಂಸ್ಕೃತಿಯೊಂದಿಗೆ ಪ್ರತಿಭೆಯ ಅನಾವರಣಗೊಳ್ಳುತ್ತದೆ. ಅನೇಕ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದದ್ದು ನಮ್ಮ ಕಂಣ್ಣಮುಂದಿವೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನು ರವಿ ಡಿ. ಮಳಗಿ ಸಿಆರ್ಪಿ ನೆರವೇರಿಸಿದರು.
ವಿಶೇಷವಾಗಿ ಕಾರ್ಯಕ್ರಮದಲ್ಲಿ ಗದುಗಿನ ಪುಣ್ಯಶ್ರಮದ ಡಾ. ಪುಟ್ಟರಾಜ ಗವಾಯಿಗಳವರ ವೇಷ ಭೂಷಣ ತೊಟ್ಟ ವಿದ್ಯಾರ್ಥಿ ಮತ್ತು ಸರಸ್ವತಿ ವೇಷವನ್ನು ಧರಿಸಿದ ವಿದ್ಯಾರ್ಥಿ ಎಲ್ಲರ ಗಮನವನ್ನು ಸೆಳೆದರು.
ಸಂದರ್ಭದಲ್ಲಿ ನಿವೃತ್ತಿ ಶಿಕ್ಷಕರಿಗೂ, ವರ್ಗಾವಣೆಗೊಂಡ ಹಾಗೂ ನೂತನವಾಗಿ ಆಗಮಿಸಿದ ಶಿಕ್ಷಕರಿಗೆ , ನಿರ್ಣಾಯಕರಿಗೂ, ದಾನಿಗಳಿಗೂ ಮುಖ್ಯ ಅತಿಥಿಗಳಿಗೂ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಆಟದ ನೆರವೇರಿಸಿದರು, ಸ್ವಾಗತ ಕಾರ್ಯಕ್ರಮವನ್ನು ಮಾರುತಿ ಹಾದಿಮನಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಂಶುದ್ದೀನ್. ಎಮ್. ಖಾಜಿ, ಸಕ್ರಪ್ಪ ಚಿನ್ನೂರು ಗ್ರಾ, ಪಂ, ಅಧ್ಯಕ್ಷರು, ಅನ್ನಪೂರ್ಣ ಸುರೇಶ್ ಮೇಗಳೆಶಿ ಗ್ರಾಂ,ಪಂ ಉಪಾಧ್ಯಕ್ಷರು, ಶರಣಪ್ಪ ಎಮ್ಮಿ ಗ್ರಾ. ಪಂ. ಸದಸ್ಯರು, ರವಿ ಡಿ. ಮಳಗಿ ಸಿ ಆರ್ ಪಿ ಮಂಗಳೂರು,ಮಹೇಶ್ ಸಬರದ, ಬಸವರಾಜ ಮೇಟಿ, ಪೀರ್ ಸಾಬ್ ದಪೇದಾರ, ಸುರೇಶ ಮಾದನೂರು, ಸುರೇಶ ಮಡಿವಾಳರ, ಮಹಾವೀರ ಕಲಬಾವಿ, ನಾಗರಾಜು ಅಂಜನಾದ್ರಿ, ಬಸವರಾಜ ಬಿಲ್ಲರ್, ದೇವೇಂದ್ರಪ್ಪ ಬಗನಾಳ, ಮಂಜುನಾಥಯ್ಯ ತೆಗ್ಗಿನಮಠ, ದೇವೇಂದ್ರಪ್ಪ ತಳವಾರ್, ಬಸಿರುದ್ದೀನ್ ಖಾಜಿ, ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಕಿಯರು ಮತ್ತು ಗ್ರಾಮದ ಗುರು ಹಿರಿಯರು ಶಾಲಾ ವಿದ್ಯಾರ್ಥಿಗಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.