ಜಿಲ್ಲಾ ಸುದ್ದಿ

6.7ಕೆ ಜಿ ಗಾಂಜಾ ವಶ – 6 ಜನರ ಬಂಧನ : ಗದಗ ಪೊಲೀಸರ ಯಶಸ್ವಿ ಕಾರ್ಯಾಚರಣೆ.

Share News

ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರ ಯಶಸ್ವಿ ಕಾರ್ಯಾಚರಣೆ , ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 6.7 ಕೆಜಿ ತೂಕದ ಗಾಂಜಾ ಜಪ್ತ 6 ಜನರ ಬಂಧನ.

ಗದಗ : ಸತ್ಯಮಿಥ್ಯ (ಜು-15)

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಮತ್ತು ಇತರೇ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಮಾಡಲು ಮಾನ್ಯ ಗದಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಎಸ್.ನೇಮಗೌಡ ಐಪಿಎಸ್ ಇವರ ಮಾರ್ಗದರ್ಶನದಲ್ಲಿ , ಗದಗ ಉಪ – ವಿಭಾಗದ ಡಿಎಸ್‌ಪಿ ಶ್ರೀ ಮುರ್ತುಜಾ ಖಾದ್ರಿ ಇವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿದ್ದರಾಮೇಶ್ವರ ಗಡೇದ ಪೊಲೀಸ್ ಇನ್ಸಪೆಕ್ಟರ , ಪಿಎಸ್‌ಐಗಳಾದ ಎ.ಆರ್.ರಾಮೇನಹಳ್ಳಿ , ಎಸ್.ಬಿ.ಕವಲೂರ ಮತ್ತು ಸಿಬ್ಬಂದಿಯವರಾದ ಪ್ರಕಾಶ ಗಾಣಗೇರ , ಅಶೋಕ ಬೂದಿಹಾಳ , ಅನೀಲ ಬನ್ನಿಕೊಪ್ಪ , ಗಂಗಾಧರ ಮಜ್ಜಗಿ , ರಾಜಮಹ್ಮದ ಅಲಮದಾರ , ಹೇಮಂತ ಪರಸಣ್ಣವರ , ಲಕ್ಷ್ಮಣ ಪೂಜಾರ , ಪ್ರವೀಣ ಶಾಂತಪ್ಪನವರ , ರವಿ ನಾಯ್ಕರ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಗುರು – ಬೂದಿಹಾಳ , ಸಂಜೀವ ಕೊರಡೂರ ಇವರನ್ನೊಳಗೊಂಡ ತಂಡ ಹಲವು ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿ ಬಂಧಿತರಿಂದ ಸುಮಾರು 6.7 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದು ಅದರ ಅಂದಾಜು ಮೌಲ್ಯ 6 ಲಕ್ಷ 70 ಸಾವಿರ ರೂ.ಗಳಾಗಬಹುದು . ಈ ಬಗ್ಗೆ ಗದಗ ಗ್ರಾಮೀಣ

ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 148/2025 ಕಲಂ 20 ( ಎ ) ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿರುತ್ತದೆ . ಬಂಧಿತರ ಹೆಸರು ವಿಳಾಸ ಈ ಕೆಳಗಿನಂತಿರುತ್ತದೆ .

1 ] ಬಾಪು ತಂದೆ ಪುಣಜಪ್ಪ ಹರಣಸಿಕಾರಿ ವಯಾ- 48 ವರ್ಷ ಸಾ : ಕೋಟುಮಚಗಿ

2 ] ಚಂದಪ್ಪ ತಂದೆ ಪಣಜಪ್ಪ ಹರಣಸಿಕಾರಿ ವಯಾ- 48 ವರ್ಷ ಸಾ : ಕೋಟುಮಚಗಿ

3 ] ಗಾಯತ್ರಿ ಕೋಂ ಮಾರುತಿ ಕಾಳೆ ವಯಾ -35 ವರ್ಷ ಸಾ : ನರಸಾಪೂರ ಹಾಲಿ ವಸ್ತಿ ಬಿಂಕದಕಟ್ಟಿ

4 ] ಮಾರುತಿ ತಂದೆ ಶೇಖಪ್ಪ ಕಾಳೆ ವಯಾ -39 ವರ್ಷ ಸಾ : ಬೆಟಗೇರಿ ಕನ್ಯಾಳ ಅಗಸಿ

5 ) ಗೋಪಾಲ ತಂದೆ ರಾಮಚಂದ್ರ ಬಸವಾ ವಯಾ -57 ವರ್ಷ ಸಾ : ಬೆಟಗೇರಿ ಹೊಸಪೇಟೆ ಚೌಕ್‌ ಹಾಲಿ ವಸ್ತಿ ಅಳವಂಡಿ ತಾ : ಜಿ : ಕೊಪ್ಪಳ

6 ] ಕಲ್ಯಾಣಬಾಬು ತಂದೆ ಚಿನ್ನನಾಗು ಶಿಕಾರಿ ಜನಾಂಗ ವಯಾ -23 ವರ್ಷ ಸಾ : ಬುಡ್ಡಪ್ಪನಗರ ಅನಂತಮರ

ಟೌನ್ ಆಂಧ್ರಪ್ರದೇಶ ರಾಜ್ಯ ಈ ಮೇಲಿನ 6 ಜನ ಆರೋಪತರನ್ನು ಚಾಣಾಕ್ಷತನದಿಂದ ಬಂಧಿಸಿ ಸುಮಾರು 6 ಲಕ್ಷ 70 ಸಾವಿರ ರೂ . ಮೌಲ್ಯದ 6.7 ಕೆಜಿ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ವಶಕ್ಕೆ ನೀಡಿರುತ್ತಾರೆ .

ಗಾಂಜಾ ಪೂರೈಕೆ ಆಗುತ್ತಿರುವದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದೆ . ಒಟ್ಟಾರೆಯಾಗಿ , ಆರೋಪಿತರಿಂದ ಒಂದು ಬೈಕ್ , 6 ಮೊಬೈಲ್ ಫೋನುಗಳು , 1 ಸಾವಿರ ರೂ.ನಗದು ಹಣ ವಶಪಡಿಸಿಕೊಂಡು ಅವಿರತವಾಗಿ ಇಲಾಖೆಯ ಲಭ್ಯ ತಂತ್ರಾಂಶ ಮತ್ತು ತಮ್ಮ ಕೌಶಲ್ಯದಿಂದ ಈ

ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅಕ್ರಮ ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರಿಗೆ ಗದಗ ಜಿಲ್ಲೆಯ ಎಸ್.ಪಿ.ಸಾಹೇಬರಾದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ರೀ ಬಿ.ಎಸ್.ನೇಮಗೌಡ ಐಪಿಎಸ್ ಇವರು ಶ್ಲಾಘಿಸಿದ್ದಾರೆ.

ವರದಿ:ಮುತ್ತು ಗೋಸಲ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!