ಜಿಲ್ಲಾ ಸುದ್ದಿ

ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ಸರಣಿಗಳ್ಳತನ: ಸಾರ್ವಜನಿಕರಲ್ಲಿ ಆತಂಕ!

Share News

ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ಸರಣಿಗಳ್ಳತನ: ಸಾರ್ವಜನಿಕರಲ್ಲಿ ಆತಂಕ!

ಗದಗ: ಸತ್ಯಮಿಥ್ಯ (ಜು-02)

ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ಸರಣಿಗಳ್ಳತನ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಛಬ್ಬಿ, ಬೆಳ್ಳಟ್ಟಿ, ಬನ್ನಿಕೊಪ್ಪ, ಗ್ರಾಮಗಳಲ್ಲಿ ಜರುಗಿದೆ.

ಛಬ್ಬಿ ಗ್ರಾಮದಲ್ಲಿ ಕಳ್ಳರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕೃಷ್ಣ ಲಮಾಣಿ ಎಂಬುವವರ ಮನೆ ಬೀಗ ಮುರಿದು ಒಳ ಹೊಕ್ಕು ಅಲ್ವೇರಾದಲ್ಲಿದ್ದ 6000 ನಗದು ಕಳ್ಳತನ ಮಾಡಿದ್ದು, 50 ಗ್ರಾಂ ಬಂಗಾರದ ಆಭರಣಗಳನ್ನು ದೋಚಿ ಪರಾರಿ ಆಗಿದ್ದಾರೆ.

ಕೆಲವು ಮನೆಯಲ್ಲಿ ಕಳ್ಳತನ ಮುಂದಾಗಿದ್ದಾಗ ಸಿಸಿ ಟಿವಿ ನೋಡಿ ಕಳ್ಳರು ಓಡಿ ಹೋಗಿದ್ದಾರೆ. ಇವೆಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ.

ಕಳ್ಳರ ಹಾವಳಿಗೆ ಸುತ್ತಮುತ್ತಲಿನ ಪ್ರದೇಶದ ಜನರು ಬೆಚ್ಚಿ ಬಿದ್ದಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಶಿರಹಟ್ಟಿ ಪಿಎಸ್ ಐ ಚನ್ನಯ್ಯ ದೇವೂರು ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದರು, ಶಿರಹಟ್ಟಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವರದಿ – ಮುತ್ತು ಗೋಸಲ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!