ತಾಲೂಕು

ಜಗದಂಬಾ ಕೋ- ಆಫ್ ಕ್ರೆಡಿಟ್ ಸೊಸಾಯಿಟಿ 50 ವರ್ಷದ ಸಾಧನೆ ಗಜೇಂದ್ರಗಡ ಹೆಮ್ಮೆ – ಮಾಜಿ ಸಚಿವ ಕಳಕಪ್ಪ ಬಂಡಿ ಅಭಿಮತ.

Share News

ಜಗದಂಬಾ ಕೋ- ಆಫ್ ಕ್ರೆಡಿಟ್ ಸೊಸಾಯಿಟಿ 50 ವರ್ಷದ ಸಾಧನೆ ಗಜೇಂದ್ರಗಡ ಹೆಮ್ಮೆ – ಮಾಜಿ ಸಚಿವ ಕಳಕಪ್ಪ ಬಂಡಿ ಅಭಿಮತ.

ಗಜೇಂದ್ರಗಡ : ಸತ್ಯಮಿಥ್ಯ ( ಡಿ -30).

ಒಂದು ಮನೆತನ ನಡೆಸುವದು ಕಷ್ಟಸಾಧ್ಯ. ಇಂತಹ ಕಾಲದಲ್ಲಿ ಒಂದು ಹಣಕಾಸು ಸಂಸ್ಥೆ 50 ನೇ ವರ್ಷ ಪೂರೈಸಿ. ಮುಂದುವರೆಯುತ್ತಿರುವದು ನಮ್ಮ ಊರಿನ ಹೆಮ್ಮೆ.ಹಿಂದೆ ಕೆಸಿಸಿ ಬ್ಯಾಂಕ್ ಏರಿಳಿತದ ಸಂದರ್ಭದಲ್ಲಿ ಬಹಳಷ್ಟು ಬ್ಯಾಂಕಗಳು ದಿವಾಳಿಯಾಗಿದ್ದನ್ನು ನಾವೂ ನೋಡಿದ್ದೇವೆ.ದಿವಾಳಿಯಾಗುತ್ತಿರುವ ಈ ಬ್ಯಾಂಕನ್ನು ಸದ್ಯದ ಅಧ್ಯಕ್ಷರು,ನಿರ್ದೇಶಕ ಮಂಡಳಿ ಮತ್ತು ಬ್ಯಾಂಕ್ ಆಡಳಿತ ಮಂಡಳಿಯವರ ಶ್ರಮದ ಫಲವಾಗಿ ಇಂದು 6 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವದು ಹೆಮ್ಮೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ನುಡಿದರು.

ಅವರು ಜಗದಂಬಾ ಕೋ-ಆಫ್ ಕ್ರೆಡಿಟ್ ಸೊಸೈಯಿಟಿಯಲ್ಲಿ ನಡೆದ 50ನೇ ವರ್ಷದ ಸಂಭ್ರಮಾಚಾರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಒಂದು ಸಹಕಾರಿ ಹಣಕಾಸು ಸಂಸ್ಥೆಯನ್ನು ಬೆಳೆಸುವದು ಸುಲಭದ ಕೆಲಸವಲ್ಲ. ಹಿರಿಯರ ಸಹಾಯ ಸಹಕಾರದ ಫಲವಾಗಿ ಸಂಸ್ಥೆಗಳು 50-100 ವರ್ಷಗಳನ್ನು ಪೊರೈಸುತ್ತಿರುತ್ತವೆ. ಅದರ ಗಂಧ ಗಾಳಿ ಗೊತ್ತಿಲ್ಲದವರು ಚುನಾವಣೆ ಸ್ಪರ್ಧೆ ಮಾಡುತ್ತಿರುವದು ಖೇದಕರ ಎಂದರು.

ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಮಾತನಾಡಿ.ರಾಷ್ಟ್ರೀಯ ಬ್ಯಾಂಕಗಳಲ್ಲಿ ವ್ಯವಹಾರ ಮಾಡುವುದರಿಂದ ಬರುವ ಲಾಭ ದೊಡ್ಡ ದೊಡ್ಡ ಉದ್ಯಮಪತಿಗಳಿಗೆ ಸಹಕಾರಿಯಾದರೆ. ಸಹಕಾರಿ ಸಂಸ್ಥೆಗಳಲ್ಲಿ ವ್ಯವಹಾರ ನಡೆಸುವದರಿಂದ ಈ ಸಂಸ್ಥೆಗಳಿಗೆ ಆಗುವ ಲಾಭ ನಮ್ಮ ನಿಮ್ಮೆಲ್ಲರಿಗೆ ಹಂಚಿಕೆಯಾಗುತ್ತದೆ.ಆದ್ದರಿಂದ ಸ್ಥಳೀಯ ಹಣಕಾಸು ಸಂಸ್ಥೆಗಳೊಂದಿಗೆ ಹೆಚ್ಚು ವ್ಯವಹಾರ ನಡೆಸಿ ಎಂದರು.

ಪತ್ರಿಕೆ ಸಂಪಾದಕ ಎನ್.ಆರ್. ಭಾಂಡಗೆ ಮಾತನಾಡಿ. ಇತ್ತೀಚಿಗೆ ಸಾಲ ಮಾಡುವದು ಪ್ಯಾಷನ್ ಆಗಿದೆ ಅವಶ್ಯಕತೆಗಿಂತ ಅನವಶ್ಯಕ ವಿಷಯಗಳಿಗೆ ಸಾಲ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಸಾಲಗಾರರ ಆಯ್ಕೆ ಕೂಡಾ ಸಂಸ್ಥೆಯ ಬೆಳವಣಿಗೆಯಲ್ಲಿ ಅತಿ ಪ್ರಮುಖ ವಿಷಯವಾಗಿರುವುದರಿಂದ ಜಗದಂಬಾ ಬ್ಯಾಂಕ್ ಇಂದು 50 ನೇ ಸಂಭ್ರಮಾಚರಣೆಯಲ್ಲಿ ಬ್ಯಾಂಕಿನ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಶ್ರಮ ಅನನ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾರುತಿ ನಾವಡೆ. ಬ್ಯಾಂಕು ಕಂಡ ಏರಿಳಿತ ಅದನ್ನು ಯಾವ ರೀತಿ ಬಲಪಡಿಸಲಾಯಿತು. ಮುಂದಿನ ಗುರಿಗಳ ಬಗ್ಗೆ ಅತ್ಯಂತ ಅಚ್ಚುಕಟ್ಟಾಗಿ ಹೇಳಿದರು.

ಇದೆ ಸಂದರ್ಭದಲ್ಲಿ ರವಿ ಶಿಂಗ್ರಿ, ನ್ಯಾಯವಾದಿ ಆರ್. ಎಂ. ರಾಯಬಾಗಿ, ಶ್ರೀಧರ್ ಬಾಕಳೆ ಮಾತನಾಡಿದರು.

ಜಗದಂಬಾ ಕೋ -ಆಫ್ ಕ್ರೆಡಿಟ್ ಸೊಸಾಯಿಟಿಗೆ ಭೇಟಿ ನೀಡಿದ ಗದುಗಿನ ಪುಣ್ಯಾಶ್ರಮದ ಪ. ಪೂ. ಕಲ್ಲಯ್ಯಜ್ಜನವರು ಬ್ಯಾಂಕಿನ ಏಳಿಗೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವಿಶ್ವಾನಾಥಸಾ ಮೇಘರಾಜ ವಹಿಸಿಕೊಂಡಿದ್ದರು.ಕುಬೇಂದರಸಾ ಭಾಂಡಗೆ,ಶ್ರೀಮತಿ ಪುಷ್ಪಾ ಕಡಿವಾಳ, ಭಾಸ್ಕರಸಾ ಶಿಂಗ್ರಿ. ಅಜ್ಜಪ್ಪ ವಂದಕುದರಿ, ತಿಮ್ಮಣ್ಣ ವನ್ನಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುರೇಂದ್ರಸಾ ರಾಯಬಾಗಿ ಸ್ವಾಗತಿಸಿದರು ರಾಘವೇಂದ್ರ ಹೊಳಗಿ ನಿರೂಪಿಸಿದರು.ಪ್ರಾರ್ಥನೆ ಜ್ಯೋತಿ ಕಂಚಗಾರ ವೀಣಾ ಅರಸಿದ್ಧಿ ಮತ್ತು ಸಚಿನ್ ಬಿದರಳ್ಳಿ ತಂಡದಿಂದ ಗಾನಸುಧೆ ಕಾರ್ಯಕ್ರಮ ಜರುಗಿತು.

ಗಣಪಥಸಾ ಪವಾರ, ಎಸ್. ಸಿ. ಚೆನ್ನಿ,ಕೆ. ಎಸ್. ಪವಾರ, ಚಂದ್ರಾಸಾ ರಾಯಬಾಗಿ,ಶ್ರೀಮತಿ ವಿದ್ಯಾ ರಾಯಬಾಗಿ,ಶ್ರೀಮತಿ ರುಕ್ಮಿಣಿಬಾಯಿ ಬಾಂಡಗೆ ಸೇರಿದಂತೆ ಬ್ಯಾಂಕಿನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!