ವರದಿ ಫಲಶ್ರುತಿ : ವಿದ್ಯುತ್ ತಂತಿಗಳನ್ನು ಸ್ಥಳಾಂತರಿಲು ಜೆಸ್ಕಾಂ ಇಲಾಖೆಗೆ ಪಟ್ಟಣ ಪಂಚಾಯತಿ ಮನವಿ – ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳು.

ವರದಿ ಫಲಶ್ರುತಿ : ವಿದ್ಯುತ್ ತಂತಿಗಳನ್ನು ಸ್ಥಳಾಂತರಿಲು ಜೆಸ್ಕಾಂ ಇಲಾಖೆಗೆ ಪಟ್ಟಣ ಪಂಚಾಯತಿ ಮನವಿ – ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳು.
ಕುಕನೂರು : ಸತ್ಯಮಿಥ್ಯ (ಅ -04)
ಕುಕನೂರು ಪಟ್ಟಣದ 15ನೇ ವಾರ್ಡ್ ಜವಳ ಕಾಲೋನಿಯ ಮನೆಗಳ ಮೇಲೆ 11ಕೆ.ವಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಇಲ್ಲಿನ ನಿವಾಸಿಗಳು ಜೀವ ಭಯದಿಂದ ವಾಸಿಸುವಂತಾಗಿದೆ ಎಂದು ಕಳೆದ ವಾರ ಸುದ್ದಿ ಪ್ರಕಟಿಸಿತ್ತು.
ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪಟ್ಟಣ ಪಂಚಾಯತಿ ಅಧಿಕಾರಿಗಳು ನಮಗೆ ಸಂಬಂಧವಿಲ್ಲಾ ಎಂದು ಹೇಳಿಕೆ ನೀಡಿದರು ಎಂದು ನಿವಾಸಿಗಳ ಹೇಳಿಕೆಗೆ ಪ್ರತಿಕ್ರೀಯೇ ನೀಡಿ ನಾನು ಈ ಕುರಿತು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ದಿ.25/09/24ರಂದು ಉಲ್ಲೇಖ ಬಂದಿದೆ.
ಉಲ್ಲೇಖ ಕುರಿತಂತೆ ಜವಳ ಕಾಲೋನಿಯಲ್ಲಿ ಮನೆಗಳು ನಿರ್ಮಾಣಕ್ಕಿಂತ ಮೊದಲು 11ಕೆ.ವಿ ವಿದ್ಯುತ್ ತಂತಿಗಳನ್ನು ಹಾಕಲಾಗಿದ್ದು, ಪಟ್ಟಣ ಪಂಚಾಯತಿಯಿಂದ ಕಂಬಗಳನ್ನು ಸ್ಥಳಾಂತರಗೊಳಿಸಲು ಮರು ಅರ್ಜಿ ಸಲ್ಲಿಸಿದಲ್ಲಿ ಕಂಪನಿ ನಿಯಮಾನುಸಾರ ಅಂದಾಜು ಪತ್ರಿಕೆಯನ್ನು ತಯಾರಿಸಿಕೊಡಲಾಗುವುದು ಎಂದು ಜೆಸ್ಕಾಂ ಇಲಾಖೆಯವರು ತಿಳಿಸಿದ್ದಾರೆ.
ನಮ್ಮ ಪಟ್ಟಣ ಪಂಚಾಯತಿ ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ನಂತರದ ದಿನಗಳಲ್ಲಿ ಕಾರ್ಯ ಕೈಗೊಳ್ಳಲಾಗುವುದು ಎಂದು ಪಟ್ಟಅದರಂತೆಣ ಪಂಚಾಯಿತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ತಿಳಿಸಿದರು.
ವರದಿ : ಚನ್ನಯ್ಯ ಹಿರೇಮಠ.