
ಪಟ್ಟಣದ ವಿವಿಧೆಡೆ ನಾಡಪ್ರಭು ಕೆಂಪೇಗೌಡ ಜಯಂತಿ
ಯಾದಗಿರಿ :ಸತ್ಯಮಿಥ್ಯ (ಜೂ -28)
ಹುಣಸಗಿ ಪಟ್ಟಣದ ತಾಲೂಕು ಆಡಳಿತ ಕಚೇರಿ, ಬಾಲಕರ ಪ್ರೌಢಶಾಲೆ, ಪೋಲಿಸ್ ಠಾಣೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ತಾಲೂಕು ಪಂಚಾಯತ ಕಾರ್ಯಾಲಯ, ಪಟ್ಟಣ ಪಂಚಾಯತ ಕಾರ್ಯಾಲಯ ಹಾಗೂ ಖಾಸಗಿ ಶಾಲೆಗಳಲ್ಲಿ ಬೆಂದಕಾಳೂರಿನ ನಾಡಪ್ರಭು ಕೆಂಪೇಗೌಡ ಅವರ 515 ನೇ ಜಯಂತಿಯನ್ನು ಆಚರಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ, ಸುರಪುರ ನ್ಯಾಯಾಧೀಶರಾದ ಮಾರುತಿ ಕೆ. ವಕೀಲರ ಸಂಘದ ಅಧ್ಯಕ್ಷರಾದ ರಮಾನಂದ ಕವಲಿ, ತಾಲೂಕು ಪಂಚಾಯತ ಕಾರ್ಯಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಸ್ವಾಮಿ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಆರ್.ವಿ ನಾಯಕ, ಹಾಗೂ ತಹಸೀಲ ಕಾರ್ಯಾಲಯದ ಸಿಬ್ಬಂಧಿಗಳಾದ, ವೆಂಕಟೇಶ, ಅರವಿಂದ, ಶ್ರೀಶೈಲ, ಆರ್.ಬಿ. ಹಿರೇಮಠ, ಬಸವರಾಜ ಕುಪ್ಪಿ, ಸುಲೋಚನಾ, ಕವಿತಾ ಹಾಗೂ ಆಯಾ ತಾಲೂಕು ಕಚೇರಿಯ ಸಿಬ್ಬಂಧಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮಾಜದ ಮುಖಂಡರುಗಳಾದ ರುದ್ರಗೌಡ ಮೇಟಿ, ಸಿದ್ದನಗೌಡ ಪೋಲಿಸ್ ಪಾಟೀಲ್, ಶಾಂತಗೌಡ ಹೆಬ್ಬಾಳ, ಶಿವಪುತ್ರ ಗುಂಡಲಗೇರಾ, ಅಮರೇಶ ಬಿರಾದಾರ, ಬಾಪುಗೌಡ ಮೇಟಿ, ಅಮರೇಶ ಇದ್ದರು.
ವರದಿ : ಶಿವು ರಾಠೋಡ