ಸ್ಥಳೀಯ ಸುದ್ದಿಗಳು

ಕೊಪ್ಪಳ ಜಿಲ್ಲಾ ಕುಳುವ ಮಹಾಸಂಘದ (ರಿ) ಪದಾಧಿಕಾರಿಗಳು ಆಯ್ಕೆ.

Share News

ಕೊಪ್ಪಳ ಜಿಲ್ಲಾ ಕುಳುವ ಮಹಾಸಂಘದ (ರಿ) ಪದಾಧಿಕಾರಿಗಳು ಆಯ್ಕೆ.

ಕೊಪ್ಪಳ : ಸತ್ಯಮಿಥ್ಯ (ಆಗಸ್ಟ್ 30)

ಕುಳುವ ಮಹಾಸಂಘ (ರಿ) ಕೊಪ್ಪಳ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲ್ಲಾಯಿತು.ನಗರದ ಪ್ರವಾಸಿ ಮಂದಿರದಲ್ಲಿ ಕುಳುವ ಮಹಾಸಭಾ(ರಿ) ಕೊಪ್ಪಳ ಕೊಡುವ ಮಹಾಸಭಾದ ಪದಾಧಿಕಾರಿಗಳು ಸಭೆಯನ್ನು ಸೇರಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ಆಯ್ಕೆ ಮಾಡಿದರು.

ಕಾನೂನು ಸಲಹೆಗಾರರಾಗಿ ರಾಮಣ್ಣ ಭಜಂತ್ರಿ ಮಾಜಿ.ಜಿ.ಪ.ಅಧ್ಯಕ್ಷರು ಮತ್ತು ಅಧ್ಯಕ್ಷರನ್ನು ದ್ಯಾಮಣ್ಣ ಭಜಂತ್ರಿ ಗೌರವ ಅಧ್ಯಕ್ಷರನ್ನು ಪರಶುರಾಮ ಭಜಂತ್ರಿ ಉಪಾಧ್ಯಕ್ಷರಾಗಿ ಶಂಕ್ರಪ್ಪ ಭಜಂತ್ರಿ

ವಿರೂಪಾಕ್ಷಪ್ಪ ಭಜಂತ್ರಿ ಸಂಘಟನೆ ಕಾರ್ಯದರ್ಶಿ ವಿಜಯಕುಮಾರ್ ಭಜಂತ್ರಿಪ್ರಧಾನ ಕಾರ್ಯದರ್ಶಿ ಲೋಕೇಶ್ ಭಜಂತ್ರಿ ಇನ್ನೂ ಉಳಿದ ಸದಸ್ಯರಗಳನಾಗಿ ಬಸವರಾಜ್ ಕಿತ್ತೂರು ,ಮಾರುತಿ ಭಜಂತ್ರಿ, ಯಲ್ಲಪ್ಪ ಭಜಂತ್ರಿ ,ರಮೇಶ್ ಭಜಂತ್ರಿ,ಮಂಜುನಾಥ ಭಜಂತ್ರಿ, ದುರ್ಗೇಶ್ ಭಜಂತ್ರಿ ,ನಾಗರಾಜ್ ಭಜಂತ್ರಿ ,ಬಸವರಾಜ್ ಭಜಂತ್ರಿ ಅಯ್ಕೆ ಮಾಡಲಾಯಿತು

ಈ ವೇಳೆ ಪರಶುರಾಮ ಭಜಂತ್ರಿ ಮಾತನಾಡಿ ಸಂಘದ ನಿಷ್ಠೆ ಸಮಾಜ ಬಗ್ಗೆ ಕಾಳಜಿ ವಹಿಸಬೇಕು, ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ

ಕಂಬಣ್ಣ ಭಜಂತ್ರಿ ಇವರು ಅಧ್ಯಕ್ಷರಾಗಿ 3 ವರ್ಷ ಸಮಾಜದ ಕೆಲಸ ಮಾಡಿ ಪ್ರತಿ ಒಂದು ತಾಲ್ಲೂಕು ಹಳ್ಳಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಆದರೆ ಹಲವಾರು ಕಾರಣದಿಂದಾಗಿ ಅಧ್ಯಕ್ಷರಸ್ಥಾಕ್ಕೆ ರಾಜಿನಾಮೆ ನೀಡಿದ್ದು , ನಗರದ ಪ್ರವಾಸಿ ಮಂದಿರದಲ್ಲಿ ಎಲ್ಲಾ ತಾಲೂಕಿನ ಸಮಾಜದ ಪ್ರಮುಖ ನಾಯಕರಗಳ ನಡುವೆ ಚರ್ಚೇ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಪದಾಧಿಕಾರಿಗಳು ಸಮಾಜದ ಸಮಸ್ಯೆಗಳನ್ನು ಹಾಗೂ ಸಮಾಜದ ಪರ ಕಾಳಜಿಯನ್ನು ವಹಿಸುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಈ ವೇಳೆ ಸಮಾಜದ ಯುವ ಮಿತ್ರರು ಪದಾಧಿಕಾರಿಗಳು ಆಯ್ಕೆ ಕಾರ್ಯಕ್ರಮ ಪಾಲ್ಗೊಂಡಿದ್ದರು.

ವರದಿ :ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!