ಜಿಲ್ಲಾ ಸುದ್ದಿ

ಕೊಲೆ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಕಾರಣ : ಡಿಎಸ್‌ಪಿ ಜಾವೀದ ಇನಾಂದಾರ.

Share News

ಹುಣಸಗಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಕಾರಣ : ಡಿಎಸ್‌ಪಿ ಜಾವೀದ ಇನಾಂದಾರ.

ಹುಣಸಗಿ : ಸತ್ಯಮಿಥ್ಯ (ಫೆ -01).

ಪಟ್ಟಣದಲ್ಲಿ ಜನವರಿ 26ರಂದು ನಡೆದ ಕೊಲೆ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಮುಖ್ಯ ಕಾರಣವಾಗಿದೆ ಎಂದು ಸುರಪೂರ ಠಾಣೆಯ ಉಪ ಅಧೀಕ್ಷರಾದ ಜಾವೀದ್ ಇನಾಂದಾರ ತಿಳಿಸಿದ್ದಾರೆ.

ಗುರುವಾರ ಸಾಯಂಕಾಲ ಹುಣಸಗಿ ಸಿಪಿಐ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 26ರಂದು ಬೆಳಗಿನ ಜಾವ ಪಟ್ಟಣದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಮುಖ್ಯವಾಗಿ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎನ್ನುವ ಉದ್ದೇಶದಿಂದ ಪತ್ನಿಯೆ ಪತಿಯನ್ನು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾಳೆ.

ಪಟ್ಟಣದ ಮಾನಪ್ಪ ತಂದೆ ರಂಗಪ್ಪ ಬುಂಕಲದೊಡ್ಡಿ ಇತನ ಹೆಂಡತಿ ಎ1 ಆರೋಪಿ ಲಕ್ಷ್ಮಿ ಇವಳು ಎ2 ಆರೋಪಿ ಮಹ್ಮದಹಕೀಬ ತಂದೆ ಮೈನುದ್ದಿನ್ ಶಿವಣಗಿ ಎಂಬುವವನ ಜೊತೆ ಸುಮಾರು ಒಂದು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಗಂಡ ಮಾನಪ್ಪನಿಗೆ ತಿಳಿದ ಮೇಲೆ ಅವರ ಸಂಬಂಧಕ್ಕೆ ಗಂಡ ಅಡ್ಡಿಯಾಗಿದ್ದ, ಮಹ್ಮದಹಕೀಬ ಪೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಕ್ಷ್ಮಿಗೆ ಸುಮಾರು 10 ಲಕ್ಷ ಹಣವನ್ನು ವಿವಿಧ ಬ್ಯಾಂಕ ಹಾಗೂ ಪೈನಾನ್ಸ್ಗಳಲ್ಲಿ ಸಾಲ ತಗೆದುಕೊಂಡು ಆ ಸಾಲಕ್ಕೆ ಗಂಡ ಮಾನಪ್ಪನನ್ನು ನಾಮಿನಿ ಮಾಡಿದ್ದಳು. ಕೆಲವೊಂದು ಪೈನಾನ್ಸ್ಗಳಲ್ಲಿ ನಾಮಿನಿ ಕೊಟ್ಟವರು ಮೃತರಾದರೆ ಆ ಸಾಲ ಮನ್ನಾ ಅಗುತ್ತದೆ ಎಂಬ ಮಾಹಿತಿಯನ್ನು ಪ್ರಿಯಕರನೊಂದಿಗೆ ಪಡೆದುಕೊಂಡು. ಲಕ್ಷ್ಮಿ ಹಾಗೂ ಮಹ್ಮದಹಕೀಬ ಇಬ್ಬರು ಸೇರಿಕೊಂಡು ತಮ್ಮ ಪ್ರೀತಿಗೆ ಅಡ್ಡವಾಗಿರುವ ಮಾನಪ್ಪನನ್ನು ಕೊಲೆ ಮಾಡಿದರೆ, ತಾವು ನೆಮ್ಮದಿಯಿಂದ ಇರಬಹುದು ಹಾಗೂ ಸಾಲ ಕೂಡ ಮನ್ನಾ ಆಗುತ್ತದೆ ಎಂಬ ದುರುದ್ದೇಶವನ್ನು ಇಟ್ಟುಕೊಂಡು ಪ್ರಿಯಕರನ ಸಹಾಯದಿಂದ ಜನವರಿ 25 ಶನಿವಾರದಂದು ರಾತ್ರಿ ಗಂಡನಿಗೆ ಊಟದಲ್ಲಿ ನಿದ್ದೆ ಗುಳಿಗೆ ಹಾಕಿ ಮಲಗಿಸಿ, ರಾತ್ರಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಲಾಗಿದೆ. ಕೊಲೆ ನಂತರ ಎ2 ಆರೋಪಿ ಮಹ್ಮದಹಕೀಬ ಮೃತನ ಬಟ್ಟೆಯನ್ನು ಕೆಳೆದು ಪಟ್ಟಣದ ಹೊರವಲಯದ ಕಾಲುವೆಗೆ ಎಸೆದು ಪರಾರಿಯಾಗಿದ್ದಾನೆ. ಮೃತನ ಪತ್ನಿ ಲಕ್ಷ್ಮಿ ಮುಂಜಾನೆ ಜನರನ್ನು ಮರಳು ಮಾಡಲು ನನ್ನ ಗಂಡನಿಗೆ ಹೃದಯಾಘಾತವಾಗಿದೆ ಎಂದು ನಾಟಕವಾಡಿದ್ದಾಳೆ. ಮೃತರ ಕುಟುಂಬಸ್ಥರು ಮೃತ ದೇಹದ ಮೇಲಾಗಿರುವ ಗಾಯಗಳನ್ನು ಗಮನಿಸಿ, ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಹುಣಸಗಿ ಠಾಣೆ ಗುನ್ನೆ ನಂ.19/2025 ಕಲಂ.103 ಸಂಗಡ 3(5)ಬಿಎನ್‌ಎಸ್-2023 & ಕಲಂ.3(2)(ವಿ) ಎಸ್‌ಸಿ/ಎಸ್‌ಟಿ ಪಿಎ ಆ್ಯಕ್ಟ್ 1989 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನಮ್ಮ ಸಿಬ್ಬಂದಿಗಳು 24ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿಲಾಗಿದೆ ಎಂದು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.

ಪ್ರಕರಣವನ್ನು ತಗೆದುಕೊಂಡ ಪೊಲಿಸ್ ಇಲಾಖೆಯು ಯಾದಗಿರಿ ಎಸ್‌ಪಿ ಪೃಥ್ವಿಕ್ ಶಂಕರ, ಅಪರ ಎಸ್‌ಪಿ ಧರಣೇಶ ಅವರ ಮಾರ್ಗದರ್ಶನದಲ್ಲಿ ಸುರಪೂರ ಉಪ ಅಧೀಕ್ಷಕರಾದ ಜಾವೀದ್ ಇನಾಂದಾರ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ 24 ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ ಹುಣಸಗಿ ಸಿಪಿಐ ಸಚಿನ ಚಲವಾದಿ, ಪಿಎಸ್‌ಐ ಚಂದ್ರಶೇಖರ ನಾರಾಯಣಪೂರ ಹಾಗೂ ಸಿಬ್ಬಂದಿಗಳಾದ ಬಸವರಾಜ ಹೆಚ್‌ಸಿ, ಶಿವರಾಜ ಹೆಚ್‌ಸಿ, ಲಿಂಗಪ್ಪ ಪಿಸಿ, ಶ್ರೀಶೈಲ್‌ಎಎಸ್‌ಐ, ನಾಗರಾಜ ಹೆಚ್‌ಸಿ, ಮಡಿವಾಳಪ್ಪ ಎಎಸ್‌ಐ, ಹಣಮಂತ್ರಾಯ ಪಿಸಿ, ದ್ಯಾಮಣ್ಣ ಪಿಸಿ, ವಾಹನ ಚಾಲಕ ಮಾಂತೇಶ ಎಹೆಚ್‌ಸಿ, ಶಿವು ಎಹೆಚ್‌ಸಿ, ಸಂತೋಷ ಎಹೆಚ್‌ಸಿ ಇವರ ಕಾರ್ಯವನ್ನು ಶ್ಲಾಘನೆ ಮಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಣೆ ಮಾಡಿದ್ದಾರೆ.

ಪೊಲೀಸ್ ಇಲಾಖೆಯ ಈ ಸಾಧನೆಗೆ ಪಟ್ಟಣದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ಶಿವು ರಾಠೋಡ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!