ಶಿಕ್ಷಕರ ದಿನಾಚರಣೆ ನೆಚ್ಚಿನ ಗುರುಗಳಿಗೆ ಶುಭಕೋರಿದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರೇಣುಕಾ ಏವೂರ.
ವಿದ್ಯಾರ್ಥಿ ಜೀವನ ಮೆಲಕು.

ಶಿಕ್ಷಕರ ದಿನಾಚರಣೆ ನೆಚ್ಚಿನ ಗುರುಗಳಿಗೆ ಶುಭಕೋರಿದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರೇಣುಕಾ ಏವೂರ.
ವಿದ್ಯಾರ್ಥಿ ಜೀವನ ಮೆಲಕು.
ಗಜೇಂದ್ರಗಡ : ಸತ್ಯಮಿಥ್ಯ (ಸ -07).
ನಗರದ ಎಸ್.ಎಮ್. ಭೂಮರಡ್ಡಿ ಕಾಲೇಜಿಗೆ ಸಪ್ಟಂಬರ್ 5 ಗುರುವಾರ ಭೇಟಿ ನೀಡಿದ ಕನಸು ಸೇವಾ ಫೌಂಡೇಶನ್ ಮತ್ತು ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ಘಟಕದ ಅಧ್ಯಕ್ಷರಾಗಿರುವ ರೇಣುಕಾ ಏವೂರರವರು ತಮಗೆ ವಿಧ್ಯೆ ಕಲಿಸಿದ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ವಿದ್ಯಾರ್ಥಿ ಜೀವನ, ಅಂದಿನಿ ಗುರು- ಶಿಷ್ಯರ ನಡುವಿನ ಅವಿನಾಭಾವ ಸಂಬಂಧಗಳು ಕುರಿತು ಸೇರಿದಂತೆ ಅನೇಕ ವಿಷಯಗಳನ್ನು ಮೆಲಕು ಹಾಕಿದರು.
ಗುರುವೃಂದಕೂಡಾ ಅತ್ಯಂತ ಪ್ರೀತಿಯಿಂದ ಕೇಕ್ ಕತ್ತರಿಸುವ ಮೂಲಕ ಪರಸ್ಪರ ಸಂತೋಷ ಹಂಚಿಕೊಂಡರು. ಈ ಸಂದರ್ಭದಲ್ಲಿ ಗುರುಗಳ ಮಾರ್ಗದರ್ಶನ ಮತ್ತು ಹಾರೈಕೆ ತೆಗೆದುಕೊಂಡು ಮುನ್ನಡೆದ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಕಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಚ್. ಎಂ. ಕರಿಪುಟ್ಟನವರ,ಎಂ. ವಿ.ನಾಡಿಗೇರ, ಸಿ. ಎಸ್. ಮೂರಶಿಳ್ಳಿನ, ಎಸ್.ಎಸ್. ನರೇಗಲ್, ಎನ್. ಎನ್. ವಾಲಿಕಾರ, ಆರ್. ಎಸ್. ರಾಠೋಡ್, ಡಿ.ಎಸ್. ಭಜಂತ್ರಿ, ಲಕ್ಷ್ಮೀದೇವಿ.ಎಂ, ಎಸ್.ಸಿ. ಹೂಗಾರ , ಎಸ್.ಎಸ್. ಗೂಳರೆಡ್ಡಿ, ಪ್ರಭಾವತಿ ಜಾಲವಾದಿ, ಶಂಕರ ಇಂಜನಿ, ಶಂಕರ್ ಏವೂರ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ.