ತಾಲೂಕು

ಶಿಕ್ಷಕರ ದಿನಾಚರಣೆ ನೆಚ್ಚಿನ ಗುರುಗಳಿಗೆ ಶುಭಕೋರಿದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರೇಣುಕಾ ಏವೂರ.

ವಿದ್ಯಾರ್ಥಿ ಜೀವನ ಮೆಲಕು.

Share News

ಶಿಕ್ಷಕರ ದಿನಾಚರಣೆ ನೆಚ್ಚಿನ ಗುರುಗಳಿಗೆ ಶುಭಕೋರಿದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರೇಣುಕಾ ಏವೂರ.

ವಿದ್ಯಾರ್ಥಿ ಜೀವನ ಮೆಲಕು.

ಗಜೇಂದ್ರಗಡ : ಸತ್ಯಮಿಥ್ಯ (ಸ -07).

ನಗರದ ಎಸ್.ಎಮ್. ಭೂಮರಡ್ಡಿ ಕಾಲೇಜಿಗೆ ಸಪ್ಟಂಬರ್ 5 ಗುರುವಾರ  ಭೇಟಿ ನೀಡಿದ ಕನಸು ಸೇವಾ ಫೌಂಡೇಶನ್ ಮತ್ತು ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ಘಟಕದ ಅಧ್ಯಕ್ಷರಾಗಿರುವ ರೇಣುಕಾ ಏವೂರರವರು ತಮಗೆ ವಿಧ್ಯೆ ಕಲಿಸಿದ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ವಿದ್ಯಾರ್ಥಿ ಜೀವನ, ಅಂದಿನಿ ಗುರು- ಶಿಷ್ಯರ ನಡುವಿನ ಅವಿನಾಭಾವ ಸಂಬಂಧಗಳು ಕುರಿತು ಸೇರಿದಂತೆ ಅನೇಕ ವಿಷಯಗಳನ್ನು ಮೆಲಕು ಹಾಕಿದರು.

ಗುರುವೃಂದಕೂಡಾ ಅತ್ಯಂತ ಪ್ರೀತಿಯಿಂದ ಕೇಕ್ ಕತ್ತರಿಸುವ ಮೂಲಕ ಪರಸ್ಪರ ಸಂತೋಷ ಹಂಚಿಕೊಂಡರು. ಈ ಸಂದರ್ಭದಲ್ಲಿ ಗುರುಗಳ ಮಾರ್ಗದರ್ಶನ ಮತ್ತು ಹಾರೈಕೆ ತೆಗೆದುಕೊಂಡು ಮುನ್ನಡೆದ ಮಕ್ಕಳು ಜೀವನದಲ್ಲಿ ಯಶಸ್ಸನ್ನು ಕಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಚ್. ಎಂ. ಕರಿಪುಟ್ಟನವರ,ಎಂ. ವಿ.ನಾಡಿಗೇರ, ಸಿ. ಎಸ್. ಮೂರಶಿಳ್ಳಿನ, ಎಸ್.ಎಸ್. ನರೇಗಲ್, ಎನ್. ಎನ್. ವಾಲಿಕಾರ, ಆರ್. ಎಸ್. ರಾಠೋಡ್, ಡಿ.ಎಸ್. ಭಜಂತ್ರಿ, ಲಕ್ಷ್ಮೀದೇವಿ.ಎಂ, ಎಸ್.ಸಿ. ಹೂಗಾರ , ಎಸ್.ಎಸ್. ಗೂಳರೆಡ್ಡಿ, ಪ್ರಭಾವತಿ ಜಾಲವಾದಿ, ಶಂಕರ ಇಂಜನಿ, ಶಂಕರ್ ಏವೂರ ಸೇರಿದಂತೆ ಅನೇಕರು ಇದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!