
“ವಕ್ಫ್ ಉಳಿಸಿ ಸಂವಿಧಾನವನ್ನು ಉಳಿಸಿ” ಪ್ರಥಮ ಹಂತದ ವಿಶೇಷ ಅಭಿಯಾನ
ನರಗುಂದ :ಸತ್ಯಮಿಥ್ಯ (ಎ-12)
ಬಿಜೆಪಿಯ ಒಕ್ಕೂಟ ಕೇಂದ್ರ ಸರ್ಕಾರದ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಅಂಜುಮನ್ ಎ ಇಸ್ಲಾಂ ಕಮೀಟಿ ವತಿಯಿಂದ ಪಟ್ಟಣದಲ್ಲಿ “ವಕ್ಫ್ ಉಳಿಸಿ ಸಂವಿಧಾನವನ್ನು ಉಳಿಸಿ” ಎಂದು
ನಿನ್ನೆ ಪ್ರಥಮ ಹಂತದ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದು.
ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ. ನರಗುಂದ ನಗರದ ನಗೀನಾ ಮಸೀದಿಯ ಆವರಣದ ಮುಂಭಾಗದಿಂದ ವಕ್ಫ್ ಮಸೂದೆ ಕಾಯ್ದೆಯನ್ನು “ವಕ್ಫ್ ಉಳಿಸಿ ಸಂವಿಧಾನವನ್ನು ಉಳಿಸಿ ” ಎಂಬ ಈ ಅಭಿಯಾನದ ಮೂಲಕ ವಕ್ಫ್ ಮಸೂದೆ ಕಾಯ್ದೆಯನ್ನು ವಿರೋಧಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿ ಅಧ್ಯಕ್ಷರು ಜನಾಬ್ ಐ.ಪಿ.ಚಂದೂನವರ,ಮುಸ್ಲಿಂ ಸಮುದಾಯದ ಹಿರಿಯರು ಹಾಜಿ ದಾವಲಸಾಬ ಮುಲ್ಲಾ, ಸತ್ತಾರಖಾನ ಪಠಾಣ, ಇಮಾಮಸಾಬ ಬೈರಕದಾರ,ಮಾಬೂಲಿ ಬೈರಕದಾರ,ಕಾಸೀಮಸಾಬ ನಾಲಂಬದ, ಮಹ್ಮದ್ ರಫೀಕ್ ಕರಮಣಿ, ಗುಲ್ಮಾನಭಿ ಅತ್ತಾರ,ಅಲ್ಲಾಸಾಬ್ ಬೈರಕಾದ ಮತ್ತಿತರರು ಹಾಜರಿದ್ದರು.
ವರದಿ : ಮುತ್ತು ಗೋಸಲ್.