
ಕೃಷ್ಣ ರಾಧೆಯ ವೇಷಭೂಷಣದಲ್ಲಿ ಮಡಿಕೆ ಒಡೆದು ಸಂಭ್ರಮಿಸಿದ ಮಕ್ಕಳು.
ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ.
ಗಜೇಂದ್ರಗಡ:ಸತ್ಯಮಿಥ್ಯ (ಆ-25)
ನಗರ ಸಮೀಪದ ಸೈನಿಕ ನಗರದ ಹತ್ತಿರವಿರುವ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ವಿಶೇಷ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಜನ್ಮಾಷ್ಟಮಿಯ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಹೂವಿನ ಅಲಂಕಾರಗೊಂಡ ತೊಟ್ಟಿಲು ಸಿದ್ದಗೊಳಿಸಿ, ನಂತರ ಮುದ್ದು ಮಕ್ಕಳು ಮಡಿಕೆ ಒಡೆದೆ ಮಕ್ಕಳು ಸಂಭ್ರಮಿಸಿದರು.
ಇನ್ನೂ ಶಾಲೆಯಲ್ಲಿನ ನರ್ಸರಿ, ಎಲ್ ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಹಾಗೂ ಪಾಲಕರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಹತ್ತಾರು ಮಂದಿ ಪುಟಾಣಿಗಳು ಕೃಷ್ಣನ ವೇಷದಲ್ಲಿ ಮಿಂಚಿದ್ರೆ. ಪುಟಾಣಿ ಬಾಲಕಿಯರು ಸಹ ಕೃಷ್ಣನಿಗೆ ಸಾಥ್ ನೀಡಲು ರಾಧೆಯ ವೇಷದಲ್ಲಿ ಬಂದಿದ್ರು.
ಶಾಲೆಯಲ್ಲಿ ಕಾರ್ಯಕ್ರಮ ಆರಂಭವಾಗುತ್ತಿದ್ದ ಹಾಗೆ ಒಬ್ಬರೇ ಆಗಿ ಕೃಷ್ಣ ಮತ್ತು ರಾಧೆ ಜೋಡಿ ಜೋಡಿಯಾಗಿ ಬಂದು ನೃತ್ಯ ಮಾಡಿದ್ರು. ರಾಧೆ ಬೆಣ್ಣೆಯನ್ನ ತೆಗೆದುಕೊಂಡು ಬರುವಾಗ ದಾರಿ ಮದ್ಯೆದಲ್ಲಿ ಬಂದ ಕಳ್ಳ ಕೃಷ್ಣ ಬೆಣ್ಣೆಯನ್ನ ತಿನ್ನೋದ್ದಕ್ಕೆ ಹರಸಾಹಸ ಪಡುತ್ತಾನೆ. ಇನ್ನು ರಾಧೆ ಬೆಣ್ಣೆ ಬಿಟ್ಟು ಸ್ವಲ್ಪ ದೂರು ಹೋಗುತ್ತಿದ್ದ ಹಾಗೆ ಕೃಷ್ಣ ಮಡಿಕೆಯಿಂದ ಕದ್ದು ಬೆಣ್ಣೆಯನ್ನ ತಿನ್ನುತ್ತಾನೆ. ಕೃಷ್ಣ ವೇಷದಲ್ಲಿ ಮಕ್ಕಳು ಥೇಟ್ ಕೃಷ್ಣನೇ ಕಣ್ಣ ಮುಂದೆ ಬಂದಿರುವ ರೀತಿಯಲ್ಲಿ ನೃತ್ಯ ಮೂಲಕ ತೋರಿಸಿದ್ರು. ಇನ್ನು ಪುಟಾಣಿಗಳು ಕೃಷ್ಣ ರಾಧೆಯ ವೇಷದಲ್ಲಿ ಬಂದು ಮಿಂಚಿದ್ದನ್ನ ಕಂಡು ಪೋಷಕರ ದಿಲ್ ಖುಷ್ ಆಗಿದೆ.
*ಮಡಿಕೆ ಹೊಡೆದು ಚಿಣ್ಣರ ಸಂಭ್ರಮ:*
ಮಕ್ಕಳ ವೇಷ ಭೂಷಣ ಹೇಗಿತ್ತು ಅಂದ್ರೆ ಪುಟಾಣಿ ಹುಡುಗರು ಪಂಚೆ ಹಾಕಿ ತಲೆ ಮೇಲೆ ಕೀರಿಟ ನವೀಲು ಗರಿಯನ್ನು ಹಾಕಿಕೊಂಡಿದ್ರು. ಇನ್ನು ಕೈಯಲ್ಲಿ ಕೊಳಲು ಹಿಡಿದುಕೊಂಡು ಉದುತ್ತ ಕುಳಿತುಕೊಂಡಿದ್ರು. ಇನ್ನು ಕಂದಮ್ಮ ಬಾಲಕಿಯರು ಲಂಗ ದಾವಣಿ ಹಾಕಿಕೊಂಡು ಥೇಟ್ ರಾಧೆಯ ತರಹ ಮಿಂಚಿದ್ರು. ಮಕ್ಕಳ ವೇಷ ಭೂಷಣ ನೋಡಿ ದಂಗಾಗಿದ್ರು. ಇನ್ನು ಕೃಷ್ಣ ರಾಧೆಯ ವೇಷದಲ್ಲಿ ಬಂದ ಮಕ್ಕಳ ನೃತ್ಯ ಮುಗಿದ ಬಳಿಕ ಶಾಲೆಯ ಆವರಣದಲ್ಲಿ ಮೊಸರು ಮಡಕೆಯುವ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮಕ್ಕಳು ಡ್ಯಾನ್ಸ್ ಮುಗಿಸಿಕೊಂಡು ಮೊಸರು ಮಡಕೆಯನ್ನ ಹೊಡೆಯೋದ್ದಕ್ಕೆ ಓಡೋಡಿ ಬಂದ್ರು. ಕೈಯಲ್ಲಿದ್ದ ಕೊಳಲನ್ನ ಹಿಡಿದುಕೊಂಡು ಮೊಸರು ಮಡಕೆಯನ್ನ ಹೊಡೆಯೋದ್ದಕ್ಕೆ ನಾ ಮುಂದೆ ತಾ ಮುಂದೆ ಪೈಪೋಟಿ ನಡೆಸಿದ್ರು. ಕೊನೆಗೆ ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಬಂದಿದ್ದ ಪುಟಾಣಿಗಳು ಸಾಮೂಹಿಕವಾಗಿ ಮೊಸರು ಮಡಕೆಯನ್ನ ಹೊಡೆಯುವ ಮೂಲಕ ಸಂಭ್ರಮಿಸಿದ್ರು. ಇನ್ನು ಪುಟಾಣಿಗಳು ಇರುವ ಕಾರಣಕ್ಕೆ ಮಡಕೆಯಲ್ಲಿ ಮೊಸರಿನ ಬದಲಿಗೆ ಚಾಕೊಲೇಟ್ ಹಾಕಲಾಗಿತ್ತು. ಹೀಗಾಗಿ ಮಡಕೆ ಹೊಡೆದ ಕೂಡ್ಲೆ ಪುಟಾಣಿಗಳು ಚಾಕೊಲೇಟ್ ಗಾಗಿ ಪೈಪೋಟಿ ನಡೆಸಿದ್ರು.
ಕಾರ್ಯಕ್ರಮವನ್ನು ಸಮಾಜಸೇವಕ ದೇವರಾಜ ದಿವಾಣದ ಉದ್ಘಾಟಿಸಿ ಮಾತನಾಡಿ ಪಾಲಕರು ಮಕ್ಕಳನ್ನು ಇಂತಹ ಐತಿಹಾಸಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರನ್ನು ತಯಾರು ಮಾಡಿದ್ದು ಶ್ಲಾಘನೀಯ, ಮಕ್ಕಳಿಗೆ ಶ್ರೀಕೃಷ್ಣನ ಇತಿಹಾಸ ತಿಳಿಯಲು ಇಂತಹ ಕಾರ್ಯಕ್ರಮಗಳು ಸಾಕ್ಷ್ಯವಾಗಿವೆ ಎಂದರು.
ಬಳಿಕ ಗಾಯಕ ನಾಗರಾಜ ಹುಣಸಿಕಟ್ಟಿ ಶ್ರೀಕೃಷ್ಣ ಬಗ್ಗೆಯ ಸಾರವನ್ನು ತಿಳಿಸಿ, ಶ್ರೀಕೃಷ್ಣ ಸ್ತುತಿಸುವ ಗೀತೆ ಹಾಡಿದರು.
ಬಳಿಕ ಶಾಲೆಯ ಚೇರ್ಮನ್ ಸೀತಲ ಓಲೇಕಾರ ಮಾತನಾಡಿ ನಮ್ಮ ಶಾಲೆಯ ಮಕ್ಕಳನ್ನು ನೋಡುತ್ತಾ ಇದ್ರೆ ಭಗವಂತನೇ ಈ ಮಕ್ಕಳ ಮೂಲಕ ಭೂಮಿಗೆ ಬಂದ ಹಾಗೆ ಇದೆ ಬ್ರಾಸವಾಗುತ್ತಿದೆ. ಎಲ್ಲಾ ಮಕ್ಕಳು ಕೂಡಾ ಅದ್ಭುತವಾಗಿ ಕೃಷ್ಣ ರಾಧೆಯರ ವೇಷ ಧರಿಸಿದ್ದು ಸಂತೋಷವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ನಾಜೀಯಾ ಮುದಗಲ್, ಶಿಕ್ಷಕಿಯರಾದ ಅನುಷಾ ತಳವಾರ, ಎಚ್.ಎಚ್.ಮಾದರ, ಬಾಳಮ್ಮ ಗೌಡರ, ಕೆ.ಎಮ್.ಡೊಳ್ಳಿನ, ರವಿಚಂದ್ರ ನಿಡಗುಂದಿ, ಖ್ಯಾತ ನಿರೂಪಕ ಮುಸ್ತಾಕ ಹುಟಗೂರ, ಪರಿಚಾಲಕಿಯರಾದ ಅಂಜುಮ್, ಮಂಜುಳಾ ಸುಂಕದ, ಸೇರಿದಂತೆ ಮುದ್ದು ವಿದ್ಯಾರ್ಥಿಗಳು ಇದ್ದರು.
ವರದಿ : ಚನ್ನು. ಎಸ್.