ವಾಣಿಜ್ಯ ಆಹಾರ ಮೇಳಗಳು ವಿದ್ಯಾರ್ಥಿಗಳಿಗೆ ದಾರಿದೀಪ: ಪ್ರೊ. ವಿಜಯಕುಮಾರ ಮಾಲಗಿತ್ತಿ
ವಿಭಿನ್ನ ವಿಚಾರ ಬದುಕಿಗೆ ಆಸರೆ. ಆಹಾರದಲ್ಲಿ ಆರೋಗ್ಯ ಮೇಳದ ಗುರಿ.

ವಾಣಿಜ್ಯ ಆಹಾರ ಮೇಳಗಳು ವಿದ್ಯಾರ್ಥಿಗಳಿಗೆ ದಾರಿದೀಪ: ಪ್ರೊ. ವಿಜಯಕುಮಾರ ಮಾಲಗಿತ್ತಿ
ಚಿತ್ರ : ವಿದ್ಯಾರ್ಥಿನಿಯರೊಂದಿಗೆ ಉಪನ್ಯಾಸಕಿಯರು.
ಗಜೇಂದ್ರಗಡ: ಸತ್ಯಮಿಥ್ಯ (ಜ -03).
ನಗರದ ಜಗದ್ಗುರು ತೋಂಟದಾರ್ಯ ಪಿ.ಯು. ಕಾಲೇಜಿನಲ್ಲಿ ಡಿಸೇಂಬರ್ 2 ಗುರುವಾರ “ಆಹಾರ ಮೇಳ – 2025” ಯಶಸ್ವಿಯಾಗಿ ಜರುಗಿತು.
ಚಿತ್ರ : ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೊ.ವಿಜಯಕುಮಾರ ಮಾಲಗಿತ್ತಿ “ಮೇಳಗಳು ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆಗಳ ಮಹತ್ವ ತಿಳಿಸುತ್ತವೆ ಗ್ರಾಹಕರ ಆಕರ್ಷಣೆ, ಸ್ಥಳದ ಆಯ್ಕೆ ಹಾಗೂ ಗ್ರಾಹಕ – ಮಾಲೀಕರ ಸಂಬಂಧ ಹೇಗಿರಬೇಕು ಎನ್ನುವುದನ್ನು ಇಂತಹ ವಿದ್ಯಾರ್ಥಿಸ್ನೇಹಿ ಮೇಳಗಳ ಮೂಲಕ ಎಲ್ಲರೂ ಕಲಿಯಬಹುದು ಎಂದರು.
ಚಿತ್ರ:ಆರೋಗ್ಯಕರ ಅಡುಗೆ ತಯಾರಿಯಲ್ಲಿ ತಂಡ
ಒಟ್ಟು 9 ತಂಡಗಳ 34 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಲಘು ಆರೋಗ್ಯಕರ ಆಹಾರ ಸಾಮಾಗ್ರಿಗಳನ್ನು ತಂದು ವಿದ್ಯಾರ್ಥಿಗಳೇ ಆಹಾರ ಸಿದ್ದಪಡಿಸಿ ಉಪನ್ಯಾಸಕರ ಸಹಾಯದೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಚಿತ್ರ : ಯುವ ಪೀಳಿಗೆಯ ನೆಚ್ಚಿನ ಆಹಾರ ಪಾನಿಪುರಿ
ಕಾಲೇಜಿನ ಪ್ರಾಂಶುಪಾಲರಾದ ಸಂಗಮೇಶ ಬಾಗೂರ, ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಅಭಿಲಾಷಾ ಗಂಜಿಹಾಳ, ಅಶೋಕ ಅಂಗಡಿ, ಶೃತಿ ನಡಕಟ್ಟಿನ, ಆನಂದ ಜೂಚನಿ, ಶರಣು ಅಂಗಡಿ, ಮಲ್ಲನಗೌಡ ಗೌಡರ, ಪ್ರಶಾಂತ, ಸಿದ್ರಾಮೇಶ ಕರಬಾಶೆಟ್ಟರ, ಹನಮಂತ ನಡಕಟ್ಟಿನ, ಕವಿತಾ ಪಾಟೀಲ, ಸುಶೀಲಾ ಮುಂಡರಗಿ, ಫಾತಿಮಾ ವಣಗೇರಿ, ಕರುಣಾ ಜಕ್ಕಲಿ, ಮಾಧುರಿ ನಾಡಗೇರಿ, ಶಿವಕುಮಾರ ಕೊಸಗಿ, ಪ್ರವೀಣ ಚಿತ್ರಗಾರ, ಈರಣ್ಣ ಹಾಗೂ ಮಹಾವಿದ್ಯಾಲಯದ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು
ಚಿತ್ರ:ಜ್ಯುಸ್ ತಯಾರ?
ಚಿತ್ರ : ಅಡುಗೆ ತಯಾರ ಮಾಡೀವಿ ರುಚಿ ನೋಡಕ್ ಬ್ರರ್ರಿ!
ವರದಿ : ಚನ್ನು. ಎಸ್.