
ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೮ ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ.
ಗಜೇಂದ್ರಗಡ:ಸತ್ಯಮಿಥ್ಯ (ಆಗಸ್ಟ್ -15)
ನಗರ ಸಮೀಪದ ಸೈನಿಕ ನಗರದಲ್ಲಿನ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೮ ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಸತ್ಯ ಮಿಥ್ಯ ಪತ್ರಿಕೆಯ ಸಂಪಾದಕರಾದ ಚನ್ನು ಸಮಗಂಡಿ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ದೇಶ ಪ್ರೇಮಗಳನ್ನು ಬೆಳೆಸುವಂತಹ ಕಾರ್ಯ ಸಂಸ್ಥೆ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ನೋಡುತ್ತಾ ಇದ್ದರೆ ದೇಶಾಭಿಮಾನ ದುಪ್ಪಟ್ಟಾಗುತ್ತಿದೆ.ಚಿಕ್ಕಮಕ್ಕಳಿರುವಾಗಲೇ ದೇಶಪ್ರೇಮಿಗಳ ವೇಷಭೂಷಣ ಮತ್ತು ಅವರ ಆದರ್ಶಗಳನ್ನು ಬಿತ್ತುವ ಕೆಲಸವನ್ನು ಅಕ್ಷಾ ಪೌಡೇಷನ್ ಮಾಡುತ್ತಿದೆ.ಶಿಕ್ಷಕರ ಮತ್ತು ಪಾಲಕರ ಸಹಕಾರದಿಂದ ಮಕ್ಕಳ ಭವಿಷ್ಯ ರೂಪಾಗೊಳ್ಳುತ್ತದೆ ಎಂದರು.
ಬಳಿಕ ಪರಿಸರವಾದಿಗಳು, ಪತ್ರಕರ್ತರು ಆದ ಚಂದ್ರು ರಾಠೋಡ ಮಾತನಾಡಿ ಮಕ್ಕಳ ಬೆಳವಣಿಗೆಗೆ ಶಿಕ್ಷಣ ಸಂಸ್ಥೆಗಳು ಎಷ್ಟು ಮುಖ್ಯವೋ ಅಷ್ಟೇ ಜವಾಬ್ದಾರಿ ಪಾಲಕರ ಮೇಲೆ ಇರುತ್ತದೆ ಅದರಲ್ಲೂ ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎನ್ನುವಂತ ಇಂದಿನ ಕಾರ್ಯಕ್ರಮಕ್ಕೆ ಮುದ್ದು ಮಕ್ಕಳ ತಾಯಂದಿರು ತಮ್ಮ ಮಕ್ಕಳನ್ನು ದೇಶದ ಸ್ವತಂತ್ರಕ್ಕಾಗಿ ಮಡಿದ ಮಹನೀಯರ ವೇಶ ಭೂಷಣಗಳನ್ನು ತೊಡಿಸಿದ್ದು ಆಧುನಿಕ ತಂತ್ರಜ್ಞಾನ ಯುಗದ ಭರಾಟೆಯಲ್ಲಿಯೂ ಕೂಡ ಮುದ್ದು ಮಕ್ಕಳನ್ನ ತಯಾರು ಮಾಡಿದ್ದು ನೋಡಿದರೆ ಮುಂದಿನ ದಿನಗಳಲ್ಲಿ ದೇಶಕ್ಕೆ ಉತ್ತಮ ಪ್ರಜೆಗಳನ್ನು ಆಗಿಸುವ ನಿಟ್ಟಿನಲ್ಲಿ ಸಂಸ್ಥೆಯು ಶ್ರಮಿಸಬೇಕಿದೆ ಎಂದರು.
ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಚೇರಮನ್ ರಾದ ಶಿತಲ್ ಓಲೇಕಾರ ಮಾತನಾಡಿ ನಮ್ಮ ನೂತನ ಶಾಲೆಯ ಮೊದಲನೆಯ ಕಾರ್ಯಕ್ರಮ 78 ನೇ ಸ್ವಾತಂತ್ರ್ಯ ದಿನಾಚರಣೆ ಆಗಿದ್ದು ಇದನ್ನು ಆಚರಿಸಲು ಹೆಮ್ಮೆ ಅನಿಸುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ದೇಶದ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಗತ್ಯತೆ ಇದೆ. ಶಾಲೆಗಳಲ್ಲಿ ದೇಶ ಮತ್ತು ದೇಶಾಭಿಮಾನ ಮೂಡಿಸುವಂತಹ ಕಾರ್ಯಕ್ರಮಗಳು ಶೈಕ್ಷಣಿಕ ವರ್ಷದುದ್ದಕ್ಕೂ ನಡೆಯಬೇಕಿದೆ ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಶ್ರಮಿಸುತ್ತಿದೆ ಇದಕ್ಕೆ ಪಾಲಕರು, ವಿದ್ಯಾರ್ಥಿಗಳು , ಶಿಕ್ಷಕರ ಸಹಕಾರ ಅತ್ಯವಶ್ಯಕ ಇದ್ದು ಮುಂದಿನ ದಿನಗಳಲ್ಲಿ ಇಂತಹ ಅನೇಕ ಮಾದರಿ ಕಾರ್ಯಕ್ರಮಗಳನ್ನ ಮಾಡುವ ಉದ್ದೇಶಗಳನ್ನು ಹೊಂದಿದ್ದೆವೆ ಎಂದರು.
ಇನ್ನೂ ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಯೋದರು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಮುದ್ದು ಮಕ್ಕಳ ತೊಟ್ಟು ಅವರ ಘೋಷವಾಕ್ಯಗಳನ್ನ ಅವರ ತೊದಲು ನುಡಿಗಳಲ್ಲಿ ಹೇಳಿರುವುದು ಕಾರ್ಯಕ್ರಮದಲ್ಲಿ ನೆರೆದ ಜನತೆಯ ಮನ ಗೆದ್ದಿತು.
ಇನ್ನೂ ದೇಶಾಭಿಮಾನ ಮೂಡಿಸುವಂತ ಗೀತೆಗಳಿಗೆ ಮಕ್ಕಳು ಹೆಜ್ಜೆ ಹಾಕಿದ್ದು ನೋಡುಗರ ಕಣ್ಮನ ಸೆಳೆಯಿತು.
ಇನ್ನೂ ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದುಗಲ್ , ಅನುಷಾ ತಳವಾರ , ಆಸ್ಮಾ ನದಾಫ್ , ಮೇಘ ಕಾಟವ , ಸಾವಿತ್ರಿ ಹಾವೇರಿ , ರೇಣುಕಾ ಕೊಪ್ಪದ , ರವಿ ಚಂದ್ರ ನಿಡಗುಂದಿ , ಕಿರಣ ನಿಡಗುಂದಿ , ಸಂಗಮೇಶ ರೇವಡಿ ಸೇರಿದಂತೆ ಪಾಲಕರು ಮುದ್ದು ಮಕ್ಕಳು ಇದ್ದರು.
ವರದಿ : ಸುರೇಶ ಬಂಡಾರಿ.