
ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಮಳಿಗೆಗಳ ಟೆಂಡರ್ ಕಂ. ಬಹಿರಂಗ ಹರಾಜು.
ಕುಕನೂರು: ಸತ್ಯಮಿಥ್ಯ ( ಜುಲೈ -25).
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ 5 ವಾಣಿಜ್ಯ ಮಳಿಗೆಗಳ ಟೆಂಡರ್ ಕಂ. ಬಹಿರಂಗ ಹರಾಜು ಪ್ರಕ್ರಿಯೇ ದಿ.25.07.24 ರ ಗುರುವಾರದಂದು ಜರುಗಿತು.
ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಗುರುರಾಜ ಎಸ್ ಗುಡಿಯವರ ಸಮ್ಮಖದಲ್ಲಿ ಬೆಳಗ್ಗೆ 11.30ಕ್ಕೆ ಪ್ರಾರಂಭವಾದ ಹರಾಜು ಪ್ರಕ್ರೀಯೆಯಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಈಗಿರುವ ವ್ಯಾಪಾರಸ್ಥರು ಸೇರಿದಂತೆ, ವಿವಿಧ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಾಲ್ಗೋಂಡಿದ್ದರು.
ಒಟ್ಟು ಆರು ಮಳಿಗೆಯ ಹರಾಜು ಪ್ರಕ್ರೀಯೇ5 ವರ್ಷದ ಅವಧಿಗೆ ನಡೆಯಿತು. ಮಳಿಗೆ ಸಂಖ್ಯೆ 3, ಕೇವಲ ಒಬ್ಬರೇ ಭಾಗವಹಿಸಿದ್ದು ಸಮಿತಿಯ ತಿಂಗಳು ನಿಗದಿ ದರ 4382 ಆಗಿದ್ದರೇ 4500ರೂ ಗಳಿಗೆ ಅಂದಾನಗೌಡ ಇವರಿಗೆ ಹರಾಜು ಹಂಚಿಕೆಯಾಯಿತು.
ಇದರಂತೆ ಮಳಿಗೆ ಸಂಖ್ಯೆ 4 ಕ್ಕೆ ಇಬ್ಬರು ಭಾಗವಹಿಸಿದ್ದು, ಸಮಿತಿಯ ತಿಂಗಳು ನಿಗದಿ ದರ 4382 ರೂ ಆಗಿದ್ದರೇ 7100 ರೂಗಳಿಗೆ ತೋಟಯ್ಯ ಶಶಿಮಠ ಇವರಿಗೆ ಹಂಚಿಕೆಯಾಯಿತು.
ಮಳಿಗೆ ಸಂಖ್ಯೆ 5ಕ್ಕೆ ಐದು ಜನ ಭಾಗವಹಿಸಿದ್ದು, ಸಮಿತಿಯ ನಿಗದಿ ದರ 4431ರೂ ಆಗಿದ್ದರೇ, 11500ರೂಪಾಯಿಗಳಿಗೆ ಕನಕಪ್ಪ ಬ್ಯಾಡರ್ ಇವರಿಗೆ ಹಂಚಿಕೆಯಾಯಿತು.
ಮಳಿಗೆಸಂಖ್ಯೆ 6 ಎಸ್ ಸಿ ಮೀಸಲಿದ್ದು, ಇದರಲ್ಲಿ 5 ಜನ ಭಾಗವಹಿಸಿದ್ದು ಸಮಿತಿಯ ನಿಗದಿ ದರ 4431ರೂ.ಆಗಿದ್ದರೇ 9500 ರೂಗಳಿಗೆ ಪರಶುರಾಮ ಅಂಬಲಿಯವರಿಗೆ ಹಂಚಿಕೆಯಾಯಿತು.
ಮಳಿಗೆ ಸಂಖ್ಯೆ 7ಕ್ಕೆ 3 ಜನ ಭಾಗವಹಿಸಿದ್ದು ಸಮಿತಿಯ ನಿಗದಿ ದರ 4431ಆಗಿದ್ದರೇ, 8800ರೂಗೆ ಮಹ್ಮದ್ ಮುಸ್ತಫ್ ಸಂಗಟಿಯವರಿಗೆ ಹಂಚಿಕೆಯಾಯಿತು.
ಮಳಿಗೆ ಸಂಖ್ಯೆ 5ಕ್ಕೆ 5 ಜನ ಭಾಗವಹಿಸಿದ್ದು ಸಮಿತಿಯ ನಿಗದಿ 4016 ರೂ ಆಗಿದ್ದರೇ 10000ರೂಗಳಿಗೆ ಪ್ರಕಾಶ ದಿವಟರ್ ಇವರಿಗೆ ಹಂಚಿಕೆಯಾಯಿತು.
ಈ ಬಹಿರಂಗ ಹರಾಜು ಪ್ರಕ್ರಿಯೇಯಲ್ಲಿ ಭಾಗವಹಿಸಿದ ಎಲ್ಲರಿಗೂ ಮಾರುಕಟ್ಟೆಯ ಮೇಲ್ವಿಚಾರಕ ಶ್ರೀಸಿಂಗ್ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಯ ಶಶಿಧರ, ಸುಭಾಸ, ಶಿವಬಸವಸ್ವಾಮಿ, ಶರಣಮ್ಮ ದಿವಟರ್ ಇನ್ನಿತರ ವ್ಯಾಪಾರಸ್ಥರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.