ತಾಲೂಕು

ದಿ. ಲಕ್ಷ್ಮಿ ಅರ್ಬನ್ ಕೋ -ಆಫ್ ಬ್ಯಾಂಕ ಚುನಾವಣೆ ಫಲಿತಾಂಶ – ಹಳೆ ಟೀಮ್ ಗೆ ಜೈ ಎಂದ ಮತದಾರ.

Share News

ದಿ. ಲಕ್ಷ್ಮಿ ಅರ್ಬನ್ ಕೋ -ಆಫ್ ಬ್ಯಾಂಕ ಚುನಾವಣೆ ಫಲಿತಾಂಶ – ಹಳೆ ಟೀಮ್ ಗೆ ಜೈ ಎಂದ ಮತದಾರ.

ಗಜೇಂದ್ರಗಡ : ಸತ್ಯಮಿಥ್ಯ (ಡಿ -29).

ಸ್ಥಳೀಯ ದಿ.ಲಕ್ಷ್ಮಿ ಅರ್ಬನ್ ಕೋ -ಆಫ್ ಬ್ಯಾಂಕ ಆಡಳಿತ ಮಂಡಳಿ ಚುನಾವಣೆ ಇಂದು ಬೆಳಿಗ್ಗೆಯಿಂದ ಬಹಳಷ್ಟು ತುರಾತುರಿಯಿಂದ ನಡೆದಿತ್ತು.ಈಗ ಫಲಿತಾಂಶ ಪ್ರಕಟಗೊಂಡಿದ್ದು ಹಳೆಯ ಟೀಮ್ ಗೆ ಮತದಾರ ಪ್ರಭು ಜೈ ಎಂದಿದ್ದಾನೆ.

7 ಸ್ಥಾನಗಳ ಆಯ್ಕೆಗೆ ಜರುಗಿದ ಈ ಚುನಾವಣೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಒಬ್ಬ ಮತದಾರ 7 ಮತಗಳನ್ನು ಹಾಕಬೇಕಾಗಿತ್ತು.

ಸಾಯಂಕಾಲ 4 ಗಂಟೆಗೆ ಚುನಾವಣೆ ಪ್ರಕ್ರಿಯೇ ಮುಕ್ತಾಯಗೊಂಡು. ಮತಗಳ ಎಣಿಕೆ ಪ್ರಕ್ರಿಯೇ ಸಾಯಂಕಾಲ 7 ಗಂಟೆಗೆ ಮುಕ್ತಾಯಗೊಂಡು. ಫಲಿತಾಂಶ ಕೆಳಗಿನಂತಿದೆ.

ಚುನಾವಣೆ ಫಲಿತಾಂಶ :

1)ಪವಾಡೆಪ್ಪ ಮ್ಯಾಗೇರಿ – 615.

2)ಸಿದ್ದಪ್ಪ ಬಂಡಿ – 615.

3)ವೀರೇಶ ನಂದಿಹಾಳ -602.

4)ಬಸವರಾಜ ಕಂಬಳ್ಯಾಳ – 599.

5)ಶಿದ್ದಲಿಂಗಪ್ಪ ಕನಕೇರಿ -592.

6)ಕಲ್ಲಪ್ಪ ಸಜ್ಜನರ – 550.

7) ಸುರೇಶ ಚೆನ್ನಿ – 515.

ಈ ಎಲ್ಲ ಏಳು ಜನ ಉಮೇದುವಾರರು ಜಯಶಾಲಿಯಾಗಿದ್ದಾರೆ.

8) ಬಸವರಾಜ ಕೊಟಗಿ – 272 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.ಎಂದು ಚುನಾವಣೆ ಅಧಿಕಾರಿ ತಿಳಿಸಿದರು.

ವಿಜಯೋತ್ಸವದ ಬಳಿಕ ಮಾಜಿ ಸಚಿವ ಕಳಕಪ್ಪ ಬಂಡಿಯವರನ್ನು ಭೇಟಿ ಮಾಡಿ ಸಿಹಿ ಹಂಚಿದ ವಿಜೇತ ಉಮೇದುವಾರರು.

ನಂತರ 7 ಜನ ವಿಜೇತರ ಪರವಾಗಿ ಮಾತನಾಡಿದ ಸಿದ್ದಪ್ಪ ಬಂಡಿ.111 ವರ್ಷ ಪೂರೈಸಿದ ನಮ್ಮ ಬ್ಯಾಂಕಿಗೆ ನಡೆದ ಈ ಚುನಾವಣೆ ಫಲಿತಾಂಶ ಪ್ರಾಮಾಣಿಕತೆಗೆ ಸಂದ ಜಯವಾಗಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ನಾವೆಲ್ಲ ನಡೆದುಕೊಂಡು. ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಈ ಚುನಾವಣೆ ಪ್ರಕ್ರಿಯೇಯಲ್ಲಿ ಭಾಗವಹಿಸಿದ ಎಲ್ಲ ಮತದಾರರಿಗೆ, ಬ್ಯಾಂಕಿನ ಸಿಬ್ಬಂದಿಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದರು.

ಪರಾಜಿತ ಅಭ್ಯರ್ಥಿ ಬಸವರಾಜ ಕೊಟಗಿ ಮಾತನಾಡಿ.ನನ್ನ ನಿರೀಕ್ಷೆಗೂ ಮೀರಿ ಇಂದಿನ ಚುನಾವಣೆಯಲ್ಲಿ ಜನ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶ ನನ್ನ ಆತ್ಮಸ್ಥರ್ಯ ಹೆಚ್ಚಿಸಿದೆ. ನನಗೆ ಮತನೀಡಿದ ಸರ್ವಧರ್ಮದ ಮತದಾರರಿಗೆ ಧನ್ಯವಾದಗಳು. ಆಯ್ಕೆಯಾದ ನೂತನ ಸದಸ್ಯರಿಗೆ ಅಭಿನಂದನೆಗಳು ಎಂದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!