
ಡಾ. ರಾಜ್ 19 ನೇ ಪುಣ್ಯಸ್ಮರಣೆ.
ಗಜೇಂದ್ರಗಡ :ಸತ್ಯಮಿಥ್ಯ (ಎ-12).
ನಗರದಲಿಂದು ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ೧೯ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಜೋಡು ರಸ್ತೆಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಜ್ ಅಭಿಮಾನಿಗಳು ಸೇರಿದಂತೆ ಸಿನಿ ರಸಿಕರು ಅಭಿಮಾನ ಪೂರ್ವಕ ಪುಷ್ಪ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗಾಯಕ ಡಿ. ಜಿ.ಮೊಮೀನ್ ರವರು ಡಾ.ರಾಜ್ ರವರ ದ್ವನಿಯಲ್ಲಿ ಹಾಡಿನ ಮೂಲಕ ನಮನ ಸಲ್ಲಿಸಿದರು.
ಡಾ ರಾಜಕುಮಾರ್ ಸಂಘದ ಅಧ್ಯಕ್ಷರಾದ ಸಂಗಪ್ಪ ಯಲಬುನಚಿ.. ಹಾಗೂ ಪುನೀತ್ ರಾಜಕುಮಾರ ಸಂಘದ ಅಧ್ಯಕ್ಷರಾದ ಭಾಷಾ ಸಾಬ ಕರ್ನಾಚಿ, ಅಂದಪ್ಪ ಅಂಗಡಿ ಜಿಲ್ಲಾ ರೇಷ್ಮೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು, ಶಂಕರಸಾ ಕು ಭಾಂಡಗೆ, ಅಮರ ಸಾಂಗ್ಲಿಕರ್, ಅಶೋಕ ಮ್ಯಾಕಲ್,ಚಂದ್ರು ಚೌವ್ಹಾಣ,ಗಂಗಪ್ಪ ಗುಂಡೆ,ಜೈ ಮಾತ ಫೋಟೋ ಸ್ಟುಡಿಯೋ. ಶಿವು ಫೋಟೋ ಸ್ಟುಡಿಯೋ. ಇನ್ನು ಅಭಿಮಾನಿಗಳು ಗೌರವ ಪೂರ್ವಕವಾಗಿ ನಮನ ಸಲ್ಲಿಸಿದರು.
ವರದಿ : ಸುರೇಶ ಬಂಡಾರಿ.