ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ – ವಿ.ಟಿ. ರಾಯಬಾಗಿ ಶಾಲೆಯಲ್ಲಿ ಸಂಭ್ರಮ.
ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ - ವಿ.ಟಿ. ರಾಯಬಾಗಿ ಶಾಲೆಯಲ್ಲಿ ಸಂಭ್ರಮ.

ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ – ವಿ.ಟಿ. ರಾಯಬಾಗಿ ಶಾಲೆಯಲ್ಲಿ ಸಂಭ್ರಮ.

ಗಜೇಂದ್ರಗಡ:ಸತ್ಯಮಿಥ್ಯ (ಮಾ-21).
ಸುನೀತಾ ವಿಲಿಯಮ್ಸ್ ನಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆ. ಇಂದು ಭಾರತೀಯರು ಹೆಮ್ಮೆ ಪಡುವಂತಹ ಸಂದರ್ಭ. ಭಾರತೀಯ ಮೂಲದ ಮಹಿಳೆಯೊಬ್ಬರು ಅಂತರಿಕ್ಷ ಅಧ್ಯಯನ ಮುಗಿಸಿ ಮರಳಿ ಭೂಮಿಗೆ ಬಂದು ಸುರಕ್ಷಿತವಾಗಿ ತಲುಪಿರುವದು ನಮ್ಮೆಲ್ಲರಲ್ಲಿ ನಮ್ಮಲ್ಲಿ ಸಂಭ್ರಮ ಉಂಟುಮಾಡಿದೆ ಎಂದು ಶ್ರೀ ವಿ. ಟಿ.ರಾಯಬಾಗಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಗೋವಿಂದ ದಂಡಿನ ನುಡಿದರು.
ಅವರು ನಗರದ ವಿ. ಟಿ. ರಾಯಬಾಗಿ ಆಂಗ್ಲ ಮಧ್ಯಮ ಶಾಲೆಯಲ್ಲಿ. ಆಂತರಿಕ್ಷ ಅಧ್ಯಯನಗಾರ್ಥಿ ಸುನೀತಾ ವಿಲಿಯಮ್ಸ್ ಭೂಮಿಯನ್ನು ಸುರಕ್ಷಿತವಾಗಿ ತಲುಪಿದ್ದಕ್ಕೆ ಸಂಭ್ರಮಾಚಾರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ.ಒಬ್ಬಂತು ದಿನಗಳ ಅಧ್ಯಯನಕ್ಕೆ ತೆರಳಿದ್ದ ಸುನೀತಾ ತಾಂತ್ರಿಕ ದೋಷದಿಂದ 9 ತಿಂಗಳುಗಳ ಕಾಲ ಅಲ್ಲಿಯೇ ಉಳಿಯಬೇಕಾಯಿತು. ಆ ಸಂದರ್ಭದಲ್ಲಿ ಆಕೆ ದೃತಿಗೆಡಲಿಲ್ಲ. ಆಕೆ ಇಡಿ ಮಹಿಳಾ ಕುಲಕ್ಕೆ ಸ್ಫೂರ್ತಿ ಎಂದರೆ ತಪ್ಪಾಗಲಾರದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶರಣಪ್ಪ ಬೇವಿನಮರದ, ಸುಮಾ ಲಕ್ಕುಂಡಿ, ರಾಘವೇಂದ್ರ ಕೊಣ್ಣೂರಕರ್,ಬಸವರಾಜ ಗುಳಗುಳಿ, ಮಾರುತಿ ನಂದ್ಯಾಳ, ಸವಿತಾ ಕಬಾಡಿ, ಶಹನಾಜ್ ಜಾಲಿಹಾಳ, ರಾಜೇಶ್ವರಿ ಹೆಗ್ಗುರ, ವಿಜಯಲಕ್ಷ್ಮಿ ದಿಂಡುರ ಸೇರಿದಂತೆ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಚನ್ನು. ಎಸ್.