ಮೋದಿ 3.0 ಚುಕ್ಕಾಣಿಗೊಂದು ಹಿನ್ನೆಲೆಯ ವಿಮರ್ಶೆ.
ಆಡಳಿತ ಪಕ್ಷಕ್ಕೊಂದು ಸಮರ್ಥ ವಿರೋಧ ಪಕ್ಷ ಮತದಾರನ ತೀರ್ಪು.

ಸತ್ಯ ಮಿಥ್ಯ – ಜು :17.
ನರೇಂದ್ರ ಮೋದಿಯವರ 3.0 ಸರ್ಕಾರ ಅಧಿಕಾರಕ್ಕೆ ಬಂದಾಗಿದೆ. ಬರುವ ಮುಂಚೆ ಬಹಳಷ್ಟು ಕುತೂಹಲ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ, ವಿರೋಧಿ ಪಾಳಯದಲ್ಲಿ ಕೊನೆಕ್ಷಣದಲ್ಲಿ ಏನಾದರು ಆಶ್ಚರ್ಯ ಘಟಿಸಬವುದು ಎಂಬ ಆಶೆಯ ಹೀಗೆ ಹತ್ತು ಹಲವು ಆಯಾಮಗಳಿಗೆ 2024 ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಣ ಕಾರ್ಯಕ್ರಮ ಎಲ್ಲ ಆಯಾಮಗಳಿಗೂ ತೆರೆ ಎಳೆಯಿತು.
ಕಳೆದ ಸಾರಿ ಬಿಜೆಪಿ ಗೆದ್ದ ಕ್ಷೇತ್ರಕ್ಕಿಂತ ಈ ಸಾರಿ ಕಡಿಮೆ ಬರಲು ಕಾರಣ.
ಕರ್ನಾಟಕ ಸಿದ್ದರಾಮಯ್ಯ ಸರ್ಕಾರ : ಬಹುತೇಕ ರಾಜ್ಯಗಳಲ್ಲಿ ತನ್ನ ನೆಲೆಯನ್ನು ಕಳೆದು ಕೊಂಡಿದ್ದ ಕಾಂಗ್ರೇಸ್ ಪಕ್ಷಕ್ಕೆ ಕಳೆದ 2023 ರಲ್ಲಿ ನಡೆದ ಕರ್ನಾಟಕ ವಿಧಾನ ಸಭೆ ಚುನಾವಣೆ ಫಲಿತಾಂಶ ದೇಶಾಧ್ಯಾಂತ ಕೈ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿತು ಮತ್ತು ಕರ್ನಾಟಕ ಕಮಲ ಪಾರ್ಟಿಯಲ್ಲಿ ನಾಯಕರ ಕೊರತೆ, ಲಿಂಗಾಯತ ಪ್ರತೇಕ ಧರ್ಮ ಹೋರಾಟ ನಿರ್ಲಕ್ಷ, ಯಡಿಯೂರಪ್ಪ ತೆರೆಮರೆಗೆ ಸರಿಸಿದ್ದು ಹೀಗೆ ಹತ್ತು ಹಲವು ಕಾರಣಗಳಿಂದ ಕಾಂಗ್ರೇಸ್ ಪರ ಬಂದ ಬಂಪರ್ ಫಲಿತಾಂಶ ನರೇದ್ರ ಮೋದಿಗೆ ತೀವ್ರ ಅವಮಾನಕ್ಕೆ ಎಡೆಮಾಡಿಕೊಟ್ಟಿತು.
ಇಂಡಿಯ ಒಕ್ಕೂಟ ಬಲವರ್ಧನೆ : ಕರ್ನಾಟಕ ಸರ್ಕಾರ ಬಂದ ಮೇಲೆ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಬಹುತೇಕ ಬಿಜೆಪಿ ವಿರೋಧಿ ಪಕ್ಷಗಳು ಪಾಲ್ಗೊಂಳ್ಳುವ ಮೂಲಕ ನರೇಂದ್ರ ಮೋದಿ ಸಹಿತ ಅಮಿತ್ ಷಾ ಗೂ ತಳಮಳ ಉಂಟುಮಾಡಿತು ಮತ್ತು ಕೇಂದ್ರದಲ್ಲಿ ಮತ್ತೊಮ್ಮೆ ಕಮಲ ಅರಳುವದು ಅತ್ಯಂತ ಕಷ್ಟ ಮತ್ತು ಹೀನಾಯವಾಗಾಬವುದು ಎಂಬ ವಿಮರ್ಶೆಗಳು ನಡೆದವು.
ಪಂಚರಾಜ್ಯ ಚುನಾವಣೆ ಎಫೆಕ್ಟ್ : ಕರ್ನಾಟಕದ ಗೆಲುವಿನ ರುಚಿ ಕಂಡಿದ್ದ ಕಾಂಗ್ರೇಸ್ ನಾಯಕರು ಹುಮ್ಮಸ್ಸಿನಿಂದ 2023 ರ ಪಂಚರಾಜ್ಯ ಚುನಾವಣೆ ಎದುರಿಸಿದ್ದರಾದರು. ಫಲಿತಾಂಶ ಮಾತ್ರ ಅಂದುಕೊಂಡದಕ್ಕಿಂತ ವಿಭಿನ್ನವಾಗಿತ್ತು. ನರೇದ್ರ ಮೋದಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನಿಂದ ಪಾಠ ಕಲಿತಾಗಿತ್ತು. ಮೂರು ರಾಜ್ಯಗಳನ್ನು ಬಿಜೆಪಿ ತನ್ನತ್ತ ಸೆಳೆಯುವ ಮೂಲಕ ಗೆಲುವಿನ ನಗೆ ಬೀರಿದರೆ ಕಾಂಗ್ರೇಸ್ ತೆಲಂಗಾಣದಲ್ಲಿ ತನ್ನ ಸರ್ಕಾರ ರಚಿಸಲಷ್ಟೇ ಸಮರ್ಥವಾಯಿತು ಇಲ್ಲಿಂದ ಮತ್ತೆ ನರೇಂದ್ರ ಮೋದಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಕಣಕ್ಕೆ ಸಿದ್ದರಾದರು ಮತ್ತು ಬಿಜೆಪಿ 370 ಎನ್ ಡಿ ಎ 400 ಫಾರ್ ಎಂಬ ಘೋಷಣೆ ಪ್ರಾರಂಭ ಮಾಡಿದರು.
ಇಂಡಿಯಾ ಒಕ್ಕೂಟದಲ್ಲಿ ಒಡಕು : ಕರ್ನಾಟಕ ಗೆಲುವಿನಿಂದ ನರೇಂದ್ರ ಮೋದಿ ವಿರೋದಿಗಳೆಲ್ಲ ಒಗ್ಗಟ್ಟಾಗಿದ್ದಾರೆ ಎಂಬ ಲೆಕ್ಕಾಚಾರಕ್ಕೆ. ಒಕ್ಕೂಟದ ಸಭೆಯೊಂದರಲ್ಲಿ ಮಮತಾ ಬ್ಯಾನರ್ಜಿ ಮಾತನಾಡುತ್ತ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾದರೆ ಒಳಿತು ಮತ್ತು ಜೆಡಿಯುನ ನಿತೀಶ್ ಕುಮಾರ ಬಗ್ಗೆ ಅವಮಾನವಾಗುವ ರೀತಿಯಲ್ಲಿ ಸಂಚಾಲಕ ಹುದ್ದೆಯನ್ನು ಕೊಡಬವುದು ಎಂಬ ನಿರ್ಧಾರ ಇಂಡಿಯಾ ಒಕ್ಕೂಟದ ಚಿತ್ರಣವನ್ನೇ ಬದಲಾಯಿಸಿತು. ಒಕ್ಕೂಟವನ್ನು ಅತ್ಯಂತ ಸದೃಢವಾಗಿ ಕಟ್ಟಬೇಕಾಗಿದ್ದ ರಾಹುಲ್ ಗಾಂಧಿ ಮತ್ತೊಂದು ಸುತ್ತು ಭಾರತ ಜೋಡೋ ಯಾತ್ರೆಗೆ ಹೊರಟದ್ದು ಇಂಡಿಯಾ ಒಕ್ಕೂಟದ ಬಿರುಕು ಇನ್ನಷ್ಟು ಹೆಚ್ಚಾಗುತ್ತಾ ಸಾಗಿತ್ತು.
ಕರ್ಪುರಿ ಠಾಕೂರ ಭಾರತ ರತ್ನ : ಇಂಡಿಯಾ ಒಕ್ಕೂಟದಿಂದ ಹೊರಹೋಗಲು ಕಾರಣ ಹುಡುಕುತ್ತಿದ್ದ ನಿತೀಶ್ ಕುಮಾರ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕರ್ಪುರಿ ಠಾಕುರರಿಗೆ ಭಾರತ ರತ್ನ ಘೋಷಿಸಿದ ನೆಪ ಮಾಡಿಕೊಂಡು ನರೇಂದ್ರ ಮೋದಿ ಬೆಂಬಲ ಮತ್ತು ಪಲ್ಟುರಾಜ್ ಸ್ವಭಾವಕ್ಕೆ ವಿರುದ್ಧವಾಗಿರುತ್ತೇನೆ ಎಂಬ ಭರವಸೆ ನೀಡಿ ಎನ್ ಡಿ ಎ ಸೇರಿದರು. ಒಂದೇ ದಿನದಲ್ಲಿ ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್ ಡಿ ಎ ಒಕ್ಕೂಟದ ಮುಖ್ಯಮಂತ್ರಿಯಾಗಿ ಅಂಗಿ ಕಳಚಿ ಮತ್ತೊಂದು ಅಂಗಿ ಹಾಕಿಕೊಂಡಷ್ಟೇ ಸುಲಭವಾಗಿ ಪ್ರಮಾಣವಚನ ತೆಗೆದುಕೊಂಡು ಲೋಕ ಸಮರಕ್ಕೆ ತಯಾರಾದರೂ.
ಇತ್ತ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಕಾಂಗ್ರೇಸ್ ನಡುವೆ ಸೀಟು ಹಂಚಿಕೆ ವಿವಾದ ನಡೆಯಿತಾದರು ಅಂತಿಮ ಹಂತಕ್ಕೆ ಹೊಂದಾಣಿಕೆಯಾಯಿತು.
ಒಟ್ಟಾರೆ 7 ಹಂತಗಳಲ್ಲಿ ನಡೆದ ಚುನಾವಣೆ ಹಂತ ಹಂತಕ್ಕೂ ವಿಭಿನ್ನ ವಿಷಯಗಳ ಮೇಲೆ ಸವಾರಿ ಮಾಡಿದ ಮೋದಿಗೆ ಕರ್ನಾಟಕ ಮಾತ್ರ ಕಗ್ಗಂಟು :
ಕರ್ನಾಟಕ ಲೋಕಸಭಾ ಚುನಾವಣೆ 3 ನೇ ಹಂತದವರೆಗೂ ಇದ್ದಿದ್ದರಿಂದ ಮೇ 7 ರ ವರೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ್ಕಾದ ತೆರಿಗೆ ಅನ್ಯಾಯ, ಕೇಂದ್ರದ ಬರ ಪರಿಹಾರ ವಿಳಂಬ, ದೆಹಲಿಯಲ್ಲಿನ ರೈತರ ಹೋರಾಟ ಮತ್ತು ಪಂಚ ಗ್ಯಾರಂಟಿಗಳ ಬಗ್ಗೆ ಮಾತನಾಡಿದರೆ. ಅತ್ಯಂತ ಸೂಕ್ಷ್ಮವಾಗಿ ಮಾತನಾಡುತ್ತಿದ್ದ ನರೇಂದ್ರ ಮೋದಿ ರಾಮ ಮಂದಿರ, ಹಿಂದುತ್ವ ವಿರೋಧಿ ಕಾಂಗ್ರೇಸ್ ಮನಸ್ಥಿತಿ, ದೇಶದಲ್ಲಿ ಹತ್ತು ವರ್ಷದಲ್ಲಾದ ಬದಲಾವಣೆ, ದೇವೇಗೌಡರ ಬಲ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದು ನೋಡಿದರೆ ಇಬ್ಬರ ಪಿಚ್ಚಗಳು ಬೇರೆ ಬೇರೆ ಆಗಿದ್ದವು. ಆಡಲು ಇಲ್ಲೇ ಬಾ ಅವರಂದರೆ ನೀನು ಈ ಪಿಚ್ಚಲ್ಲಿ ಆಡಲು ಬಾ ಎಂಬಂತಾಗಿತ್ತು.
ಕರ್ನಾಟಕ ಚುನಾವಣೆ ನಂತರ ಮೋದಿ ವಿಭಿನ್ನ ವಿಚಾರ ಮಂಡನೆ : ಕರ್ನಾಟಕ ಲೋಕಸಭಾ ಚುನಾವಣೆ ನಂತರ ನೇರವಾಗಿ ಪಾಕಿಸ್ತಾನ, ಮುಸ್ಲಿಂ, ಆದಾನಿ, ಅಂಬಾನಿ ಹಿಂದುತ್ವ, 370 ರದ್ಧತಿ, ಹಿಂದೂಗಳ ಮಾಂಗಲ್ಯ ಹೀಗೆ ಭಾವನಾತ್ಮಕವಾಗಿ ಮಾತನಾಡುವ ಮೂಲಕ ಚುನಾವಣೆ ಚಹಾರೆಯನ್ನೇ ಬದಲಾಯಿಸಿದರು. ಕೊನೆಯ ಹಂತದ ಚುನಾವಣೆ ಇರುವ ಮುನ್ನ 400 ಫಾರ್ ಬಗ್ಗೆ ಮಾತನಾಡಿದ ಮೋದಿ. ಕಾರ್ಯಕರ್ತರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಆ ಘೋಷಣೆ ಮಾಡಲಾಯಿತು ಅದನ್ನು ವಿರೋಧ ಪಕ್ಷಗಳು ಹೆಚ್ಚು ಪ್ರಚಾರ ಮಾಡಿದರು ಎನ್ನುವ ಮೂಲಕ ಚುನಾವಣೆ ಫಲಿತಾಂಶದ ಚಿತ್ರಣ ತಿಳಿದಿದೆ ಎನ್ನುವಂತ ಮಾತುಗಳನ್ನು ಆಡಿದರು.
ಫಲಿತಾಂಶ : ಉತ್ತರ ಪ್ರದೇಶ ಕೈ ಕೊಟ್ಟಿದ್ದ್ಯಾಕೆ?
ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ನಿರ್ಲಕ್ಷ ಮಾಡಲಾಯಿತು. ಕಾಂಗ್ರೇಸ್ ಮತ್ತು ಸಮಾಜವಾದಿ ಪಾರ್ಟಿಗಳು ಒಗ್ಗಟ್ಟಿನ ಮಂತ್ರ ಗೆಲುವಿಗೆ ನಾಂದಿಯಾಯಿತು. ಟಿಕೆಟ್ ಹಂಚಿಕೆಯಲ್ಲಿ ಅಹಿಂದ ವರ್ಗವನ್ನು ಸಮಾಜವಾದಿ ಪಾರ್ಟಿ ತನ್ನತ್ತ ಸೆಳೆಯಿತು. ಯೋಗಿಯ ಬಾಲ್ದೊಜರ್ ಮುಸಲ್ಮಾನರಿಗೆ ಅಭದ್ರತೆ ಕಾಡತೊಡಗಿದರೆ ಇಂಡಿಯಾ ಒಕ್ಕೂಟದ ಪ್ರತಿ ವರ್ಷಕ್ಕೆ 1 ಲಕ್ಷ ರೂಪಾಯಿ ಯೋಜನೆ ಆಕರ್ಷಣೆಮಾಡಿತು. ಸಂವಿಧಾನ ಬದಲಾವಣೆ ವಿಚಾರ ಬಹಳಷ್ಟು ಪರಿಣಾಮಕಾರಿಯಾಗಿ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಬಹುಜನ ಸಮಾಜವಾದಿ ಪಾರ್ಟಿಯ ದಲಿತ ಮತಗಳು ವಿಂಗಡಣೆಯಾದವು ಮತ್ತು ಬಿಜೆಪಿ, ಸಮಾಜವಾದಿ ಪಕ್ಷಗಳಿಗೆ ಲಾಭ ತಂದವು. ಒಂದು ಹಂತಕ್ಕೆ ಬಿಜೆಪಿ ಗೆದ್ದ 16 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಹುಜನ ಸಮಾಜವಾದಿ ಪಕ್ಷ ಲಕ್ಷಕ್ಕಿಂತ ಹೆಚ್ಚು ಮತ ಪಡೆದರೆ ಗೆಲುವಿನ ಅಂತರ 25 ಸಾವಿರ ಮತಗಳಿಗಿಂತ ಕಡಿಮೆ ಇದೆ ಈ ಮೂಲಕ ಮಾಯಾವತಿ ಕಮಲಕ್ಕೆ ಜೀವ ತುಂಬಿರುವುದಂತು ಸತ್ಯ.
ಕರ್ನಾಟಕ ಕೈ ಗ್ಯಾರಂಟಿ ತಿರಸ್ಕಾರ – ಪಂಚ ಗ್ಯಾರಂಟಿ ಮೂಲಕ ಗೆಲುವು ಶತಸಿದ್ಧ ಎನ್ನುತ್ತಾ ಸಾಗಿದ್ದ ಸಿದ್ದು ಮತ್ತು ಡಿಕೆಶಿ ಪಡೆಗೆ ಫಲಿತಾಂಶ ಮರ್ಮಘಾತ ನೀಡಿತ್ತು. ರಾಜ್ಯ ರಾಜಧಾನಿ ಬೆಂಗಳೂರು ಸುತ್ತ ಮುತ್ತ ಇರುವ 7-8 ಕ್ಷೇತ್ರಗಳಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅತ್ಯಂತ ಯಶಸ್ವಿ ಆಯಿತು ಮತ್ತು ಗರಿಷ್ಠ ಮಟ್ಟದಲ್ಲಿ ಒಕ್ಕಲಿಗರು ಮೈತ್ರಿ ಪಕ್ಷಕ್ಕೆ ಮತ ನೀಡಿದರು. ಇತ್ತ ಕಲ್ಯಾಣ ಕರ್ನಾಟಕ ಬಿಜೆಪಿ ಒಳಗಿನ ಕಚ್ಚಾಟದಿಂದ ಕಾಂಗ್ರೇಸ್ ಪರ ಫಲಿತಾಂಶ ಬಂದಿದೆ. ಗದ್ದಿಗೌಡ್ರ, ಬೊಮ್ಮಾಯಿ ನಿರಾಯಾಸವಾಗಿ ಗೆದ್ದು ಬಂದರು ಅಂತಿಮವಾಗಿ ಕರ್ನಾಟಕದ ಬಿಜೆಪಿ ಜೆಡಿಎಸ್ ಫಲಿತಾಂಶ ನರೇಂದ್ರ ಮೋದಿ ಪ್ರಧಾನಿ ಖುರ್ಚಿಗೆ ಬಲ ತುಂಬಿತು.
ತಮಿಳನಾಡು ಅಣ್ಣಾಮಲೈ ಮತಗಳ ಪ್ರಮಾಣ ಏರಿಕೆ ವಿನಹ ಬಿಜೆಪಿಗೆ ಸೀಟುಗಳು ಬರಲಿಲ್ಲ : ಡಿ ಎಂ ಕೆ ಪ್ರಬಲವಾಗಿರುವುದರಿಂದ ಅಧಿಕೃತ ವಿರೋಧ ಪಕ್ಷ ಎಐಎಡಿಎಂಕೆ ಅತ್ಯಂತ ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಣ್ಣಾಮಲೈ ನೇತೃತ್ವದಲ್ಲಿ ಚುನಾವಣೆ ಎದುರಿಸಿತು. ಸ್ಟ್ಯಾಲಿನ ನಮಗೆ ಎದುರಾಳಿ ಏನೇ ಇದ್ದರು ಎಐಎಡಿಎಂಕೆ ಮಾತ್ರ ಬಿಜೆಪಿ ಲೆಕ್ಕಕ್ಕೆ ಇಲ್ಲಾ ಎನ್ನುವ ಮಾತನಾಡಿದ್ದರು.
ಆದರೆ ಅಣ್ಣಾಮಲೈ ಹೋರಾಟದಿಂದ ಬಿಜೆಪಿ ಮತಗಳ ಪ್ರಮಾಣ ಏರಿಕೆಯಾಗಿದೆ ವಿನಹ ಸೀಟುಗಳನ್ನು ತರುವಲ್ಲಿ ಯಶಸ್ವಿಯಾಗಲಿಲ್ಲ.
ಚಂದ್ರುಬಾಬು ನಾಯ್ಡು ಗೆಲುವಿಗೆ ಪವನ್-ಮೋದಿ ಸಾತ್:
ಕಳೆದ ಐದು ವರ್ಷಗಳ ಹಿಂದೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಿರುದ್ದ ಹೀನಾಯ ಸೋಲು ಕಂಡಿದ್ದ ಚಂದ್ರಬಾಬು ನಾಯ್ಡು. ಈ ಸಾರಿ ಪವನ್ ಕಲ್ಯಾಣ ಜನಸೇನಾ,ಮೋದಿ ಬಿಜೆಪಿ ತ್ರಿಕೋನ ಜುಗಲ್ ಬಂದಿ ಜಗನ್ ರನ್ನು ಮಕಾಡೆ ಮಲಗಿಸುವ ಮೂಲಕ ಟಿಡಿಪಿ ಪಾರುಪತ್ಯ ಸಾಧಿಸಿತು ಈ ಮೂಲಕ ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಪಕ್ಷವಾಗಿ ಹೊರಹೋಮ್ಮಿತು.
ಬಿಹಾರ ಎನ್ ಡಿ ಎ ಗೆ ಬಲ ತುಂಬಿದ ಮತದಾರ ಮುಂದಿನ ವಿಧಾನಸಭಾ ಚುನಾವಣೆ ಧಿಕ್ಸುಚಿ ಎನ್ನಲಾಗುತ್ತಿದೆ :
ಲೋಕಸಮರದ ಹೊಸ್ತಿಲಿನಲ್ಲಿ ರಚನೆಯಾದ ಬಿಜೆಪಿ ಜೆಡಿಯುನ ಬಿಹಾರ ಸರ್ಕಾರಕ್ಕೆ ಮತ್ತೊಮ್ಮೆ ಮತದಾರ ಜೈ ಎನ್ನುವ ಮೂಲಕ ಮುಂದಿನ ಪಲ್ಟುರಾಜ್ಯ ಸರ್ಕಾರಕ್ಕೆ ಮುನ್ನುಡಿ ಬರೆದಂತಾಗಿದೆ. ನಿತೀಶ್ ಗೆಲುವಿನಿಂದ ಇಂಡಿಯಾ ಒಕ್ಕೂಟದ ಬಹುತೇಕ ನಾಯಕರು. ನಿತೀಶ್ ಕುಮಾರರನ್ನು ಬಿಟ್ಟು ತಪ್ಪು ಮಾಡಿದ್ವಿ ಎನ್ನುವಂತಾಗಿದೆ.ಕೇಂದ್ರ ಸರ್ಕಾರದ ಕಿಂಗ್ ಮೇಕರ್ ಆಗುವ ಮೂಲಕ ನಿತೀಶ್ ತಮ್ಮ ವರ್ಚಸ್ಸನ್ನು ರಾಷ್ಟ್ರೀಯ ರಾಜಕಾರಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ.
ಬಿಜೆಪಿ ತಪ್ಪಿಗೆ ಹೊಡೆತ ಕೊಟ್ಟ ಮಹಾರಾಷ್ಟ್ರ ಫಲಿತಾಂಶ :
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದ ಹಿನ್ನೆಲೆಯಲ್ಲಿ ಎನ್ ಡಿ ಎ ಒಕ್ಕೂಟದ ಸದಸ್ಯ ಪಕ್ಷಗಳಿಗೆ ಅಷ್ಟಾಗಿ ಬೆಲೆ ಕೊಡದ ಮೋದಿ ಮತ್ತು ಅಮಿತ್ ಷಾ ವಿರುದ್ದ ಸಿಡಿದೆದ್ದು ಹೊರನಡೆದಿದ್ದ ಶಿವಸೇನೆ ಪಕ್ಷ. ನಂತರ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿ ಕುರುವ ಹಾಗಾಯಿತು. ಅದ್ದಕ್ಕೆ ರಿವೇಂಜ್ ಎಂಬಂತೆ ಶಿವಸೇನೆಯನ್ನೇ ಇಬ್ಬಾಗವಾಗುವ ಹಾಗೆ ಸನ್ನಿವೇಶ ನಿರ್ಮಾಣ ಮಾಡಿ ಠಾಕ್ರೆ ಕುಟುಂಬವೆ ನಿಜವಾದ ಶಿವಸೇನೆಯಿಂದ ಹೊರಹೋಗುವಂತೆ ಮಾಡಿದ ಪರಿಣಾಮ ಇಂದು ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕೀಳು ಮಟ್ಟಕ್ಕೆ ಬಂದು ತಲುಪಿದೆ. ಇದರಿಂದ ಮೋದಿಯ ಕುರ್ಚಿಯೇ ನಡುಗುವಂತಾಯಿತು.
ಪಶ್ಚಿಮ ಬಂಗಾಳ ಬಿಜೆಪಿ ಓವರ್ ಕಾನ್ಫಿಡೆನ್ಸ್ ಗೆ ತಣ್ಣೀರೇರಚಿ ಮಮತಾ ದೀದಿ ಕಮಾಲ್ : ಇಂಡಿಯಾ ಒಕ್ಕೂಟದ ಪ್ರಬಲ ನಾಯಕರಲ್ಲಿ ಮಮತಾ ದೀದಿ ಕೂಡಾ ಒಬ್ಬರು. ಆದರೆ ಇಲ್ಲಿ ಕಾಂಗ್ರೇಸ್ ಮತ್ತು ತೃಣಮೂಲ ಕಾಂಗ್ರೇಸ್ ಒಂದಾಗಿ ಸ್ಪರ್ಧೆ ಮಾಡಲಿಲ್ಲ ಮತ್ತು ಕಾಂಗ್ರೇಸ್ ಪ್ರಮುಖ ನಾಯಕನೇ ಬಹಿರಂಗವಾಗಿ ಕಾಂಗ್ರೇಸ್ ಮತ ಹಾಕದಿದ್ದರೂ ಪರವಾಗಿಲ್ಲ ಮಮತಾ ಬ್ಯಾನರ್ಜಿ ಹಾಕಬೇಡಿ ಎಂದು ಹೇಳಿಕ್ಕೆ ನೀಡಿದ್ದರು ಇದಕ್ಕೆ ಮಮತಾ ಕೂಡಾ ಸುಮ್ಮನಿರದೆ ಬಿಜೆಪಿ ಬಿ ಟೀಮ್ ಕಾಂಗ್ರೇಸ್ ದೇಶದಲ್ಲಿ 50 ಸೀಟು ಗೆದ್ದುತೋರಿಸಲಿ ಎಂದು ಸವಾಲು ಹಾಕಿದ್ದರು. ನಂತರ ಫಲಿತಾಂಶ ಮಮತಾ ಪರ ಬಂತು ಮತ್ತು ಬಿಜೆಪಿ ಗೆ ಬಹಳಷ್ಟು ಹಿನ್ನಡೆ ಆಗಿದ್ದರಿಂದ ಸರ್ಕಾರ ರಚನೆಯಲ್ಲಿ ಮುಜುಗರಕ್ಕೆ ಇಡು ಆದಂತ ಸನ್ನಿವೇಶ ಸೃಷ್ಟಿಯಾಯಿತು.
ಮಧ್ಯಪ್ರದೇಶ : ಛಿಂದ್ವಾರಾ ಸೇರಿದಂತೆ ಎಲ್ಲಾ 29 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಎಲ್ಲಾ 29 ಮಂದಿಯನ್ನು ಹೊಂದಿದ್ದು, ಮಧ್ಯಪ್ರದೇಶದಲ್ಲಿ 40 ವರ್ಷಗಳ ನಂತರ ಇಂತಹ ಸಾಧನೆ ಮಾಡಿದ ಮೊದಲ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಯಿತು. ಅವಿಭಜಿತ ಎಂಪಿಯಲ್ಲಿ, 1984 ರಲ್ಲಿ ಕಾಂಗ್ರೆಸ್ ಎಲ್ಲಾ 40 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು.
ಗಮನಾರ್ಹವಾಗಿ, ಬಿಜೆಪಿಯ ಗೆಲುವಿನ ಅಂತರವು 26 ಕ್ಷೇತ್ರಗಳಲ್ಲಿ 1 ಲಕ್ಷದಿಂದ 5 ಲಕ್ಷ ಮತಗಳ ನಡುವೆ ಇತ್ತು, ಆದರೆ ಅದು ಭಿಂಡ್, ಗ್ವಾಲಿಯರ್ ಮತ್ತು ಮೊರೆನಾದಲ್ಲಿ 1 ಲಕ್ಷಕ್ಕಿಂತ ಕಡಿಮೆ ಇತ್ತು. ಕ್ಷೇತ್ರಗಳು.
ಇಂದೋರ್ನಿಂದ ಬಿಜೆಪಿಯ ಹಾಲಿ ಸಂಸದ ಶಂಕರ್ ಲಾಲ್ವಾನಿ ಅವರು ಅತ್ಯಂತ ಅದ್ಭುತವಾದ ಗೆಲುವು ದಾಖಲಿಸಿದ್ದಾರೆ, ಅವರು 11,75,092 ಮತಗಳ ಸಂಭಾವ್ಯ ಗರಿಷ್ಠ ಅಂತರದಿಂದ ಸ್ಥಾನವನ್ನು. ಈ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಮಧ್ಯಪ್ರದೇಶ ಜನತೆಯ ಕೊಡುಗೆ ಬಿಜೆಪಿ ಮರೆಯುವಂತಿಲ್ಲ.
ರಾಜಸ್ತಾನ್ :ರಾಜ್ಯದಿಂದ 25 ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ರಾಜಸ್ಥಾನದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 24 ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ 1 ಸ್ಥಾನ ಗಳಿಸಿತ್ತು.ಆದರೆ ಈ ಸಾರಿ ಬಿಜೆಪಿ ಗೆ ತೀವ್ರ ಹಿನ್ನಡೆ ಮೂಲಕ 14,ಕಾಂಗ್ರೇಸ್ 8,ಇತರ 3 ಸೀಟುಗಳನ್ನು ಗೆಲ್ಲಿಸುವ ಮೂಲಕ ಆಡಳಿತರೂಡ ಬಿಜೆಪಿ ಗೆ ಭಾರಿ ಮುಖಭಂಗವಾಗಿದೆ.
ಜೆಡಿಎಸ್ ಮುಗಿದ ಅಧ್ಯಯಕ್ಕೆ ಹೊಸ ಮುನ್ನಡಿಯೊಂದಿಗೆ ಕಾಂಗ್ರೇಸಗೆ ಟಕ್ಕರ
ಮಾಜಿ ಪ್ರಧಾನಿ ದೇವೇಗೌಡರ ಜೆಡಿಎಸ್ ಕಥೆ ಇನ್ನೇನು ಮುಗಿದೇ ಹೋಯ್ತು ಎನ್ನುವ ಮಟ್ಟದಲ್ಲಿ. ಕರ್ನಾಟಕ ಕಾಂಗ್ರೇಸ್ ಜೆಡಿಎಸ್ ನ್ನು ಮತ್ತು ದೇವೇಗೌಡ ಫ್ಯಾಮಿಲಿಯನ್ನು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಳ್ಳುವ ಮೂಲಕ ಇಂಡಿಯಾ ಒಕ್ಕೂಟ ಸೇರದ ಹಾಗೆ ಮಾಡಿದ್ದು ಡಿಕೆ ಮತ್ತು ಸಿದ್ದು. ಹಾಗೆ ಮಾಡಿದ್ದು ಜೆಡಿಎಸ್ ಗೆ ಒಳ್ಳೆಯದೇ ಆಯ್ತು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳಕ್ಕೆ ಸ್ವಲ್ಪ ಪ್ರಮಾಣದ ಒಕ್ಕಲಿಗರು ಮತ ನೀಡಿದ್ದು ಬಿಟ್ಟರೆ ಸಂಪೂರ್ಣ ಮುಸ್ಲಿಂ ಮತದಾರರು ದೂರ ಸರಿದದ್ದು ಸ್ಪಷ್ಟವಾಗಿತ್ತು. ಆಗ ದುರ್ಬಲವಾಗಿದ್ದ ಬಿಜೆಪಿಗೆ ಬೇಕಾಗಿದ್ದದ್ದು ಮೈಸೂರು ಕರ್ನಾಟಕ ಭಾಗದಲ್ಲಿ ಪ್ರಭಲ ಜ್ಯಾತಿಯ ಮಾಸ್ ಲೀಡರ್ ಮತ್ತು ಸಿದ್ದರಾಮಯ್ಯಗೆ ಟಕ್ಕರ್ ಕೊಡುವ ನಾಯಕ. ಅಮಿತ್ ಷಾ ಕೂಡಲೇ ದೇವೇಗೌಡರಾದಿಯಾಗಿ ಗೌಡರ ಕುಟುಂಬವನ್ನೇ ದೆಹಲಿ ಕರೆಯಿಸಿ ಕಾಂಗ್ರೇಸ್ ವಿರುದ್ದ ಸೆಣಸು ಸ್ಕೆಚ್ ಹಾಕಿದ್ದು. ನಂತರ ನಡೆದದ್ದೇ ಮಹಾಯುದ್ಧ. ಡಿಕೆಸಿ ವಿರುದ್ದ ಸೇಡಿಗೆ ಹಾತೋರೆಯುತ್ತಿದ್ದ ಕುಮಾರಣ್ಣ ರಣತಂತ್ರ ಹೆಣೆದರು. ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸಹೋದರ ಸುರೇಶ ವಿರುದ್ದ ದೇವೇಗೌಡರ ಅಳಿಯ ಡಾ. ಮಂಜುನಾಥರನ್ನು ಕಣಕ್ಕಿಳಿಸುವ ಮೂಲಕ ಬಂಡೇ ಡಿಕೆಶಿ ಗೆ ಡೈನಮ್ ಇಟ್ಟು ಉಡೀಸ್ ಮಾಡಿದ ರೀತಿ ನೋಡಿದರೆ. ಚುನಾವಣೆ ಮುಗಿಯುವವರೆಗೂ ಕ್ಷೇತ್ರ ಬಿಟ್ಟು ಬರದ ಹಾಗೆ ಕಟ್ಟಿಹಾಕಿದ್ದು ಮಂಡ್ಯ, ಮೈಸೂರು, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ,ಬೆಂಗಳೂರು ಉತ್ತರ, ತುಮಕೂರು, ಸೇರಿದಂತೆ ಇನ್ನುಳಿದ ಕ್ಷೇತ್ರಗಳ ಕಡೆ ಗಮನ ಹರಿಸದ ಹಾಗೆ ಮಾಡಿದ್ದರಿಂದ. ಒಕ್ಕಲಿಗರು ನೇರವಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಜೈ ಎನ್ನುವಂತಾಯಿತು.
ಒಟ್ಟಾರೆ ಇನ್ನುಳಿದ ಕ್ಷೇತ್ರಗಳ ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿಗೆ ಅತಿಯಾಗಿ ಬಲ ನೀಡದೆ ಸೂಕ್ಷ್ಮ ಆಡಳಿತ ಮಾಡಲು ಎಚ್ಚರಿಸಿದರೆ, ಕಾಂಗ್ರೇಸ್ ಪಕ್ಷಕ್ಕೆ ಒಂದು ಗೆಲುವಿನಿಂದ ನಿದ್ದೆಗೆ ಜಾರಿ ಹುಂಬರಾದರೆ ಆಡಳಿತ ನಡೆಸಬೇಕಾಗಿದ್ದವರು ವಿರೋಧ ಪಕ್ಷದಲ್ಲಿ ಕುರಬಹುದು ಎಂಬ ಸಂದೇಶ ನೀಡಿದ್ದಾನೆ ಮತದಾರ.
ವಿರೋಧ ಪಕ್ಷ ನಿರೀಕ್ಷಿಸುವಂತೆ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ ಖ್ಯಾತೆ ತೆಗೆದು ಸರ್ಕಾರ ಬಿದ್ದೋಗುವ ಯಾವ ಲಕ್ಷಣವು ಘೋಚರಿಸುತ್ತಿಲ್ಲ ಮತ್ತು ಮೋದಿ ಅಷ್ಟು ಸುಲಭದ ವ್ಯಕ್ತಿಯು ಅಲ್ಲ ನಿತೀಶ್ ಮತ್ತು ನಾಯ್ಡು ಸದ್ಯಕ್ಕಂತು ತಮ್ಮ ರಾಜ್ಯ ರಾಜಕಾರಣ ಬಿಟ್ಟು ಬರುವ ಲಕ್ಷಣಗಳು ಕಡಿಮೆ ಮತ್ತು ಈಗಾಗಲೇ ವೈ ಎಸ್ ಆರ್ ಜಗನ್ ಮೋಹನ್ ರೆಡ್ಡಿ ಕೂಡಾ ಎನ್ ಡಿ ಎ ಗೆ ಬೆಂಬಲ ನೀಡಿದ್ದಾರೆ. ಅಲ್ಲದೇ ಶಿವಸೇನೆ ಕೂಡಾ ತಮ್ಮ ಒಳಗಿನ ಬೇಗುದಿ ಮರೆತು ಒಂದಾಗಿ ಎನ್ ಡಿ ಎ ಕಡೆ ಬರವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಲೇಖನ : ಚನ್ನು. ಸಮಗಂಡಿ.