ಸ್ಥಳೀಯ ಸುದ್ದಿಗಳು

ಶಾಂತಿ ಸೌಹಾರ್ದತೆಯ ಸಂಕೇತ ಈದ್ ಮಿಲಾದ:ರಶೀದ ಮುಬಾರಕ

Share News

ಶಾಂತಿ ಸೌಹಾರ್ದತೆಯ ಸಂಕೇತ ಈದ್ ಮಿಲಾದ:ರಶೀದ ಮುಬಾರಕ

ಕೊಪ್ಪಳ:ಸತ್ಯಮಿಥ್ಯ(ಸ-19).

ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರುವ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ನೆರವೇರಿಸಲಾಯಿತು.ಪಟ್ಟಣದ ಜಾಮಿಯಾ ಮಸೀದಿಯಿಂದ ಮೆರವಣಿಗೆ ಪ್ರಾರಂಭಿಸಿ ಗ್ರಾಮದ ಪ್ರಮುಖ ಬೀದಿಗಳಾದ ವೀರಭದ್ರಪ್ಪ ಸರ್ಕಲ್ ಮುಖಾಂತರ ಡಾ. ಅಂಬೇಡ್ಕರ್ ವೃತ್ತ ಮತ್ತು ಟಿಪ್ಪು ವೃತ್ತದ ಮೂಲಕ ಜಾಮಿಯಾ ಮಸೀದಿಗೆ ಮರಳಿ ಮೆರವಣಿಗೆ ಮುಕ್ತಾಯಗೊಳಿಸಲಾಯಿತು.

ಮುಸ್ಲಿಂ ಸಮಾಜದ ಮುಖಂಡರಾದ ರಶೀದ್ ಮುಬಾರಕ್ ಮಾತನಾಡುತ್ತಾ ಮಿಲಾದ್ ಅಂದರೆ ಹುಟ್ಟು, ಪ್ರವಾದಿ ಮಹಮ್ಮದ್ ಅವರ ಹುಟ್ಟಿದ ದಿನವನ್ನು ಹಬ್ಬದ ಆಚರಣೆ ಮಾಡಲಾಗುತ್ತದೆ. ಮನೆ, ಮಸೀದಿಗಳ ಅಲಂಕಾರ ವಿಶೇಷವಾಗಿರುತ್ತದೆ. ಹೀಗಾಗಿ ಹಲವರು ಮದರಸಾಗಳ ಮಕ್ಕಳಿಗೆ ಹಾಗೂ ಬಡ ಜನರಿಗೆ ಬಟ್ಟೆದಾನ ಮಾಡಿದ್ದಾರೆ. ಹಬ್ಬದ ಆಚರಣೆಯ ಒಟ್ಟು ಉದ್ದೇಶ ಪರಸ್ಪರ ಸಹೋದರತೆ, ಪರಧರ್ಮ ಸಹಿಷ್ಣುತೆ, ಮಾನವೀಯ ಮೌಲ್ಯಗಳನ್ನು ತಿಳಿಸುವುದಾಗಿದೆ’ ಆದ್ದರಿಂದ ಗ್ರಾಮದಲ್ಲಿ ಎಲ್ಲಾ ಸಮುದಾಯದವರ ಪ್ರೀತಿ ವಿಶ್ವಾಸದೊಂದಿಗೆ ಹಬ್ಬ ಆಚರಣೆ ನೆರವೇರಿಸಬೇಕು ಪ್ರತಿ ಒಂದು ದೇವರುಗಳಿಗೆ ಪೂಜೆಯನ್ನು ಸಲ್ಲಿಸುವ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿ ಅವರು ಗ್ರಾಮದ ಪ್ರಮುಖ ವೃತ್ತಗಳಲ್ಲಿ ಮಾಲಾರ್ಪಣೆ ಮಾಡುವದರೊಂದಿಗೆ ಮುಸ್ಲಿಂ ಸಮಾಜದ ವತಿಯಿಂದ ಗಣಪತಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಹಿಂದೂ, ಮುಸ್ಲಿಂ ಬಾಂಧವರು ಒಂದೇ ತಾಯಿಯ ಮಕ್ಕಳಂತೆ ನಡೆದುಕೊಳ್ಳಬೇಕು. ಶಾಂತಿ ಸೌಹಾರ್ದತೆ ಸಂಖ್ಯಾತ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಆಚರಿಸಬೇಕು ಎಂದು ಹೇಳಿದರು.

ಮುನ್ನಾ ಗಾಂಜಿ ಮುಸ್ಲಿಂ ಸಮಾಜದ ಕಾರ್ಯಕರ್ತರು ಮಾತನಾಡಿ ಹಿಂದು ಮುಸ್ಲಿಂ ಬಾಂಧವರು ಈದ್-ಈ-ಮಿಲಾದ್-ಉನ್-ನಬಿ ಎಂದು ಕರೆಯುವ ಈದ್‌ ಮಿಲಾದ್‌ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವಾಗಿದೆ. ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಅವರು ಈ ದಿನದಂದೇ ಜನಿಸಿದ್ದು, ಅದಲ್ಲದೇ ಜನಿಸಿದ ಅದೇ ದಿನದಂದು ಅವರು ಮರಣವನ್ನು ಹೊಂದಿದ್ದರು ಎನ್ನಲಾಗಿದೆ. ಈ ಈದ್-ಈ-ಮಿಲಾದ್-ಉನ್-ನಬಿ ಹಬ್ಬವನ್ನು ಈದ್-ಈ-ಮಿಲಾದ್ ಅಥವಾ ಮೌಲಿದ್ ಎಂದು ಕೂಡ ಕರೆಯುತ್ತಾರೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮುಸ್ಲಿಂ ಸಮುದಾಯದ ಜನರು ಬಹಳ ವಿಜೃಂಭಣೆಯಿಂದ ಈ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ನಂತರದಲ್ಲಿ ಜಾಮಿಯಾ ಮಸೀದಿಯಲ್ಲಿ ಸಮಸ್ತ ಗ್ರಾಮದ ಗುರು ಹಿರಿಯರಿಗೂ ಹಾಗೂ ಇತರರಿಗೂ ಪ್ರಸಾದ ಸೇವೆ ನೆರವೇರಿಸಲಾಯಿತು.

ಪೊಲೀಸ್ ಠಾಣಾ ಇಲಾಖೆಯ ಪಿಎಸ್ಐ ಟಿ ಗುರುರಾಜ ಸಿಬ್ಬಂದಿ ವರ್ಗದವರು ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಶಾಂತಿಯುತವಾದ ಹಬ್ಬ ಆಚರಣೆಗೆ ಸಹಾಯ ಸಹಕಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಸಿಂಸಾಬ್ ತಳಕಲ್, ರಶೀದ್ ಮುಬಾರಕ್, ಮುನ್ನ ಗಾಂಜಿ, ನೂರು ಗುಡಿಹಿಂದಲ, ರಶೀದ್ ಹಣಜಿಗೇರಿ, ಶಿರಾಜ್ ಕರ್ಮುಡಿ, ರೆಹಮಾನ್ ಸಾಬ್ ಮುಕ್ಕಪ್ಪನವರ್, ರಫಿ ಹಿರಿಯಾಳ, ಹುಸೇನ್ ಕುದುರಿ, ರಮೇಜ ಗುಡಿಹಿಂದಲ್, ತೂಪಿಕ್ ಬೆತ್ತಾಲೆ,ಮುಸ್ಲಿಂ ಸಮಾಜದ ಗುರು ಹಿರಿಯರು ಹಾಗೂ ಇತರರು ಇದ್ದರು.

ವರದಿ:ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!