ತಾಲೂಕು

ಶಾಸಕರ ಹುಟ್ಟು ಹಬ್ಬ: ಕಾರ್ಯಕರ್ತರಿಂದ ಪೂಜೆ, ಹಣ್ಣು ಹಂಪಲ ವಿತರಣೆ

ಶಾಸಕರ ಹುಟ್ಟು ಹಬ್ಬ: ಕಾರ್ಯಕರ್ತರಿಂದ ಪೂಜೆ, ಹಣ್ಣು ಹಂಪಲ ವಿತರಣೆ

Share News

ಶಾಸಕರ ಹುಟ್ಟು ಹಬ್ಬ: ಕಾರ್ಯಕರ್ತರಿಂದ ಪೂಜೆ, ಹಣ್ಣು ಹಂಪಲ ವಿತರಣೆ 

ಸಾವಳಗಿ:ಸತ್ಯಮಿಥ್ಯ ( ಜೂಲೈ -06)

ಬಡ ಕುಟುಂಬದಿಂದ ರಾಜಕೀಯವಾಗಿ ಬೆಳೆದು ಇಂದು ಕೊಡುಗೈ ದಾನಿಗಳಾಗಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ ಹಾಗೂ ಜಮಖಂಡಿ ಶಾಸಕರಾದ ಜಗದೀಶ್ ಗುಡಗುಂಟಿ ಅವರ ಜನ್ಮದಿನವನ್ನು ಶಿವಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಜನ್ಮದಿನವನ್ನು ಆಚರಿಸಿದರು. 

ಇಂದು ಶಾಸಕ ನಾಡೋಜ ಜಗದೀಶ್ ಗುಡಗುಂಟಿಯವರ ಜನ್ಮದಿನದ ಪ್ರಯುಕ್ತ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಹಣ್ಣು ಹಂಪಲ ಹಾಗೂ ಸಿಹಿ ಹಂಚುವುದರ ಮೂಲಕ ಸರಳವಾಗಿ ಆಚರಿಸಿದರು ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.

ನಂತರ ಮಾತನಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾದ ಬಸುಗೌಡ ಪರಮಗೌಡ ಅವರು ಬಡವರಿಗೆ ಆಶ್ರಯರಾಗಿ, ಅನಾಥ ಮಕ್ಕಳಿಗೆ ಶಿಕ್ಷಣ ನೀಡುವುದು ಸರಳ ಸ್ವಭಾವದ ವ್ಯಕ್ತಿ ಎಂದು ಹೇಳಿದರು.

ಹಣ್ಣು ಹಂಪಲ ವಿತರಣೆ: ಶಾಸಕ ಜಗದೀಶ ಗುಡಗುಂಟಿ ಅವರ ಜನ್ಮದಿನದಂದು ನಗರದ ಸರ್ಕಾರಿ ಆಸ್ಪತ್ರೆಯ ಗರ್ಭಿಣಿಯರಿಗೆ, ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಸಿಹಿ ಹಂಚುವುದರ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.

ಇದೇ ಸಂದರ್ಭದಲ್ಲಿ ಹಿರಿಯರಾದ ರಾಮಣ್ಣ ಬಂಡಿವಡ್ಡರ, ರಾಜು ಹಿರೇಮಠ, ಬಾಬು ಮಾನೋಜಿ, ಗ್ರಾಮ ಪಂಚಾಯತ ಸದಸ್ಯರಾದ ಗಾಮೇಶ ಬಾಪಕರ, ಸುಜಿತಗೌಡ ಪಾಟಿಲ್, ನಂದಕುಮಾರ್ ಕನೇರಿ, ಭರತೇಶ ಜಮಖಂಡಿ, ಸಿದ್ದಾರ್ಥ್ ತಳಕೇರಿ, ರಾಜುಗೌಡ ಪಾಟೀಲ್, ಹಾಗೂ ಉಮೇಶ್ ಜಾಧವ್, ಪಾರ್ಶ್ವನಾಥ ಉಪಾಧ್ಯೆ, ಕಿರಣ ಪಾಟೋಳಿ, ಲಕ್ಷ್ಮಣ ಪುಂಡೆ, ರವಿ ಹಿಪ್ಪರಗಿ, ರಾಜು ಕರಾಬಿ, ಹನುಮಂತ ಮಾಳಿ, ಶೀತಲ ಜಮಖಂಡಿ, ಅಶೋಕ್ ಮಾಂಗ, ಶಂಕರ್ ಮಾಳಿ, ಮಹಾದೇವ ತಳಕೇರಿ, ರವಿ ಗಂಗಾಧರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಸಚಿನ್ ಜಾದವ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!