ತಾಲೂಕು

ನರೇಗಲ್ : ಕಾರ್ಗಿಲ್ ವಿಜಯೋತ್ಸವ – ಪಂಜಿನ ಮೆರವಣಿಗೆ.

Share News

ನರೇಗಲ್ : ಕಾರ್ಗಿಲ್ ವಿಜಯೋತ್ಸವ – ಪಂಜಿನ ಮೆರವಣಿಗೆ.

ನರೇಗಲ್ : ಸತ್ಯಮಿಥ್ಯ (ಜುಲೈ -26).

ಇಂದಿಗೆ ಕಾರ್ಗಿಲ್ ಯುದ್ಧವು ಮುಗಿದು 25 ವರ್ಷಗಳು ಗತಿಸಿದವು. ಜುಲೈ 26, 1999 ರಂದು ಭಾರತ ಅಧಿಕೃತವಾಗಿ ಕಾರ್ಗಿಲ್ ಯುದ್ಧವನ್ನು ಗೆದ್ದು ಬಿಗಿತ್ತು. ಆದ್ದರಿಂದ ಪ್ರತಿ ವರ್ಷ ಜುಲೈ 26 ನ್ನು ಕಾರ್ಗಿಲ್ ವಿಜಯ್ ದಿವಸ್, ಆಚರಿಸುವ ಮೂಲಕ ಪಾಕಿಸ್ತಾನದ ವಿರುದ್ಧದ ಭಾರತದ ವಿಜಯವನ್ನು ಸ್ಮರಿಸುತ್ತದೆ ಮತ್ತು ಪಾಕಿಸ್ತಾನಿ ನುಸುಳುಕೋರರಿಗಿಂತ ಹೆಚ್ಚಿನದನ್ನು ಎದುರಿಸಿದ ನೂರಾರು ಭಾರತೀಯ ಸೈನಿಕರ ತ್ಯಾಗವನ್ನು ಗೌರವಿಸುತ್ತದೆ. ನಮ್ಮ ಸೈನಿಕರ ವೀರ ಪರಾಕ್ರಮ ಕಾರ್ಗಿಲ್ ನಲ್ಲಿ ಅನಾವರಣಗೊಂಡು ಇಂದಿಗೆ 25 ವರ್ಷಗಳಾಗಿವೆ ಎಂದು ಬಿಜೆಪಿ ಯುವ ಮುಖಂಡ ಉಮೇಶ ಚನ್ನು ಪಾಟೀಲ್ ನುಡಿದರು.

ಅವರು ನಿನ್ನೆ ಶುಕ್ರವಾರ ಸಾಯಂಕಾಲ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ರೋಣ ಮಂಡಲ ವತಿಯಿಂದ ನರೇಗಲ್ ಪಟ್ಟಣದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಪಂಜಿನ ಮೆರವಣಿಗೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶೇಷವಾಗಿ ಸೈನಿಕರು ಸೇರಿದಂತೆ ನೂರಾರು ನರೇಗಲ್ಲನ ಕಾರ್ಯಕರ್ತರು, ಸಾರ್ವಜನಿಕರು, ದೇಶ ಪ್ರೇಮಿಗಳು ಪಂಜನ್ನು ಹಿಡಿದು ಊರಿನ ಪ್ರಮುಖ ಬೀದಿಗಳಲ್ಲಿ ಪೆರೇಡ್ ಮಾಡುತ್ತಾ ದೇಶಪ್ರೇಮ ಮೆರೆದರು.

ಈ ಸಂದರ್ಭದಲ್ಲಿ ಸೈನಿಕರಾದ ಗೌರವ ಸುಬೇದಾರ್ ಮೇಜರ್ , ವೀರಪ್ಪ ಅಂದಾನೆಪ್ಪ ಕುಂಬಾರ್,ಉಮೇಶ್ ಕರಮಡಿ,ಶಿವಪ್ಪ ಶಿವಾಪುರ, ಶಶಿಕಾಂತ ಕರಡಿ, ರೇವಣಸಿದ್ದಪ್ಪ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಶಿಧರ ಸಂಕನಗೌಡ್ರು,ಬಸನಗೌಡ ಪೊಲೀಸ್ ಪಾಟೀಲ್,ಬಸವರಾಜ ಕೊಟ್ಟಿಗಿ,ನಿಂಗಪ್ಪ ಕಣಿವೆ,ಮುತ್ತಣ್ಣ ಪಲ್ಲೆದ್, ಯಲ್ಲಪ್ಪ ಮಣ್ಣೋಡ್ಡರ್,ಶಿವಕುಮಾರ ದದ್ದುರು,ಮಹೇಶ್ ಶಿವಶಿಂಪೇರ,ಚಂದ್ರು ಕುರಿ,ಅರುಣ್ ಮಠದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ವಿರೂಪಾಕ್ಷ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!