ತಾಲೂಕು

ಠೇವಣಿದಾರರ ಹಿತ, ಸಾಲಗಾರರಿಗೆ ಗೌರವ ಮತ್ತು ಸಾರ್ವಜನಿಕ ವಲಯದಲ್ಲಿ ವಿಶ್ವಾಸ – ದಿ. ಲಕ್ಷ್ಮಿ ಅರ್ಬನ್ ಬ್ಯಾಂಕ್ ಶತಕದನ್ನೊಂದರ ಗುಟ್ಟು : ಡಾ. ತೋಟದ ಸಿದ್ದರಾಮ ಶ್ರೀ ಅಭಿಮತ.

ದಿ ಲಕ್ಷ್ಮಿ ಅರ್ಬನ್ ಕೊ ಆಫ್ ಬ್ಯಾಂಕ್ ಲಿಮಿಟೆಡ್ 111 ನೇ ಸರ್ವಸಾಧಾರಣ ಸಭೆ.

Share News

ಠೇವಣಿದಾರರ ಹಿತ, ಸಾಲಗಾರರಿಗೆ ಗೌರವ ಮತ್ತು ಸಾರ್ವಜನಿಕ ವಲಯದಲ್ಲಿ ವಿಶ್ವಾಸ – ದಿ. ಲಕ್ಷ್ಮಿ ಅರ್ಬನ್ ಬ್ಯಾಂಕ್ ಶತಕದನ್ನೊಂದರ ಗುಟ್ಟು : ಡಾ. ತೋಟದ ಸಿದ್ದರಾಮ ಶ್ರೀ ಅಭಿಮತ.

ದಿ. ಲಕ್ಷ್ಮಿ ಅರ್ಬನ್ ಕೊ ಆಫ್ ಬ್ಯಾಂಕ್ ಲಿಮಿಟೆಡ್ 111 ನೇ ಸರ್ವಸಾಧಾರಣ ಸಭೆ.

ಗಜೇಂದ್ರಗಡ : ಸತ್ಯಮಿಥ್ಯ ( ಜೂ -30).

ಒಂದು ಸಂಸ್ಥೆ ನೂರುಕಾಲದಿಂದ ಸಾರ್ವಜನಿಕ ವಲಯದಲ್ಲಿ ತನ್ನ ವರ್ಚಸ್ಸನ್ನು ನಿರಂತರ ಹೆಚ್ಚಿಸುತ್ತ ಬರುತ್ತಿದೆ ಎಂದರೆ ಅದರ ಗುಟ್ಟೇನು ಎಂಬುದನ್ನು ತಿಳಿಯುವ ಕುತೂಹಲವಿರುತ್ತದೆ. ಠೇವಣಿದಾರರ ಹಿತಕಾಪಾಡುತ್ತ, ಸಾಲಗಾರರನ್ನು ಗೌರವದಿಂದ ಕಾಣುತ್ತ ಮತ್ತು ಸಾರ್ವಜನಿಕ ವಲಯದಲ್ಲಿ ವಿಶ್ವಾಸ ಮೂಡಿಸಿ ಗಜೇಂದ್ರಗಡದ ದಿ. ಲಕ್ಷ್ಮಿ ಅರ್ಬನ್ ಕೊ -ಆಫ್ ಬ್ಯಾಂಕ್ ಇಂದು 111 ರ ಸಂಭ್ರಮದಲ್ಲಿದೆ ಎಂದು ಗದುಗಿನ ಡಾ.ತೋಟದ ಸಿದ್ದರಾಮ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವರು ನಗರದ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಸಿ ಶಾಲೆಯಲ್ಲಿ  ಇಂದು ನಡೆದ ದಿ. ಲಕ್ಷ್ಮಿ ಅರ್ಬನ್ ಕೊ- ಆಫ್ ಬ್ಯಾಂಕ್ ನ 111 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಸಸಿಗೆ ನಿರಣಿಸುವ ಮೂಲಕ ಉದ್ಘಾಟಿಸಿ,ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಈ ಸಂಸ್ಥೆಯು ಎಲ್ಲ ಜಾತಿ ಮತ ಪಂಥಗಳ ಸದಸ್ಯರನ್ನು ಒಳಗೊಂಡಿದೆ. ಸಹಕಾರಿ ಬ್ಯಾಂಕುಗಳು ಬಡವರ ಮಧ್ಯಮ ವರ್ಗದವರ ಜೀವನಮಟ್ಟ ಸುಧಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಆ ನಿಟ್ಟಿನಲ್ಲಿ ಲಕ್ಷ್ಮಿ ಅರ್ಬನ್ ಬ್ಯಾಂಕ್ ಒಂದು ಹೆಜ್ಜೆ ಮುಂದೆ ಹೋಗಿ ಬಂದ ಲಾಭಾಂಶದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಮೂಲಭೂತ ಸೌಕರ್ಯಗಳ ವಂಚಿತ ಶಾಲೆಗಳಿಗೆ ಕುಡಿಯುವ ನೀರಿನ ಘಟಕ, ಪ್ರೊಜೆಕ್ಟರ್, ಕಂಪ್ಯೂಟರ್ ಗಳನ್ನು ಕೊಡುಗೆಗಳ ರೂಪದಲ್ಲಿ ನೀಡುತ್ತಾ ಭವಿಷ್ಯದ ಭಾರತದ ರೂವಾರಿಗಳಿಗೆ ಸಹಕಾರಿಯಾಗುವಂತಹ ಕೆಲಸಗಳನ್ನು ಮಾಡುತ್ತಾ ಮಾದರಿಯಾಗಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಉಪನ್ಯಾಸಕ ಅನಿಲ್ ವೈದ್ಯ. ತಮ್ಮ ಹಾಸ್ಯಭರಿತ ಮಾತಿನ ಮೂಲಕ. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಲು ಮನೋನಿಗ್ರಹ ಅಗತ್ಯವಾಗಿದೆ. ಅಹಂಕಾರ ತ್ಯಜಿಸಿ ಸಹಕಾರದಿಂದ ಮುಂದಡಿ ಇಟ್ಟರೆ ಶತಕ ಹೊಡೆಯಬಹುದು, ವಿದ್ಯಾರ್ಥಿಗಳು ಸುಲಭವಾಗಿ ಕಲಿಯಲು ವಿಭಿನ್ನ ರೀತಿಯಲ್ಲಿ ಪಾಠಗಳನ್ನು ಮಾಡುಬೇಕು. ಪ್ರಸ್ತುತ ಸಂದರ್ಭದಲ್ಲಿ ಹೆಚ್ಚುತ್ತಿರುವ ಅನಾಥಾಲಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಖ್ಯಾತ ವೈದ್ಯ ಡಾ. ಬಿ.ವಿ. ಕಂಬಳ್ಯಾಳ ಮಾತನಾಡಿ. ದೋಚಲಾರದ, ತೆರಿಗೆ ಇಲ್ಲದ, ಹಂಚಿಕೆ ಮಾಡಿಕೊಳ್ಳಲು ಬಾರದ, ಎಷ್ಟು ಬಳಸುತ್ತೇವೆಯೋ ಅಷ್ಟು ಹೆಚ್ಚಾಗುವ ಸಂಪತ್ತು ವಿಧ್ಯೇ ಅದನ್ನು ಸರಿಯಾಗಿ ಕಲಿತು ಸಮಾಜಕ್ಕೆ ಮಾದರಿಯಾಗಿ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೀರೇಶ ನಂದ್ಯಾಳ. ರಾಷ್ಟ್ರೀಕೃತ ಬ್ಯಾಂಕನಲ್ಲಿ ಸಿಗುವ ಎಲ್ಲ ಸವಲತ್ತುಗಳು ನಮ್ಮ ಬ್ಯಾಂಕನಲ್ಲಿ ಲಭ್ಯವಿದೆ ಅದರ ಸದುಪಯೋಗ ಗ್ರಾಹಕರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಹಾಸ್ ಪಟ್ಟೇದ ಮಾತನಾಡಿ. ಇಂದು ನಮ್ಮ ಬ್ಯಾಂಕಿನ ಎಟಿಎಂ ಘಟಕವನ್ನು ಉದ್ಘಾಟನೆ ಮಾಡಲಾಗಿದೆ. ಈ ವರ್ಷ 60 ಲಕ್ಷ ರೂಪಾಯಿಗಿಂತಲೂ ಹೆಚ್ಚಿಗೆ ಲಾಭವನ್ನು ಗಳಿಸಿದೆ. ಈಗಾಗಲೇ ಎರಡು ಶಾಖೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ ಜೊತೆಗೆ ಬ್ಯಾಂಕ್ ವತಿಯಿಂದ ಅನೇಕ ಜನಕಲ್ಯಾಣ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಎಸ್ ಸಿ. ಚೆನ್ನಿ, ವಾರ್ಷಿಕ ವರದಿ ವಾಚನ ಮಾಡಿದರು.ಸಿದ್ದಪ್ಪ ಬಂಡಿ ಸ್ವಾಗತಿಸಿದರು. ಅಗಲಿದ ಬ್ಯಾಂಕಿನ ಗಣ್ಯ ಠೇವಣಿದಾರರಿಗೆ ನುಡಿ ನಮನ ಸಲ್ಲಿಸಲಾಯಿತು.

ವೇದಿಕೆ ಮೇಲೆ ಪವಾಡೇಪ್ಪ ಮ್ಯಾಗೇರಿ, ಸಿದ್ದಲಿಂಗಪ್ಪ ಕನಕೇರಿ, ಪಿ.ಎಸ್. ಕಡ್ಡಿ, ನಿಡಗುಂದಿ, ರಾಜು ಹೊಸಂಗಡಿ ಸೇರಿದಂತೆ ಸಂಸ್ಥೆಯ ಸರ್ವ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!