
ದಲಿತ ಸಾಹಿತ್ಯ ಅಕಾಡೆಮಿಯಿಂದ ಕುವೆಂಪು ದಿನಾಚರಣೆ.
ಗಜೇಂದ್ರಗಡ :ಸತ್ಯಮಿಥ್ಯ (ಡಿ -30).
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ ತಾಲೂಕ ಘಟಕ ಗಜೇಂದ್ರಗಡ ಹಾಗೂ ಸಾಹಿತ್ಯಾಸಕ್ತರು ಮತ್ತು ಕನ್ನಡದ ಮನಸ್ಸುಗಳು ಡಿಸೇಂಬರ್ 29 ರವಿವಾರ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ತಾಲೂಕಾ ಘಟಕದ ಅಧ್ಯಕ್ಷರಾದ ಹೆಚ್. ಆರ್. ಭಜಂತ್ರಿ ಮಾತನಾಡಿ.ವಿಶ್ವಮಾನವ ಸಂದೇಶ ಸಾರಿರುವ ಕುವೆಂಪುರವರ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ದಾರಿದೀಪ. “ನೂರು ದೇವರ ನುಕಾಚೆ ದೂರ ” “ಎಲ್ಲಿಯೂ ನಿಲ್ಲದಿರು” ಸೇರಿದಂತೆ ನೂರಾರು ಕಾವ್ಯಗಳು ಜನರ ಮನಸದಲ್ಲಿ ಅಚ್ಚಳಿಯದೆ ನೆನಪಾಗಿ ಉಳಿದಿವೆ.
ಶಿಕ್ಷಕರಾದ ಎ. ಜಿ. ಬೂದಿಹಾಳ ಮಾತನಾಡಿ.ಸಮಾಜದಲ್ಲಿನ ಮೌಢ್ಯ, ಅಂಧಕಾರ, ಅಸಮಾನತೆ ಕೊಳೆಯನ್ನು ತೊಡೆದು ಹಾಕುವ ಕಥೆ, ಕವನ ಮತ್ತು ಸಾಹಿತ್ಯಗಳನ್ನು ರಚನೆಮಾಡಿ ಸಶಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ರಾಷ್ಟಕವಿ ಕುವೆಂಪುರವರ ಪಾತ್ರ ದೊಡ್ಡದು ಎಂದರು.
ಈ ಸಂದರ್ಭದಲ್ಲಿ ಪ್ರೊಫೆಸರ್ ಬಿ ವ್ಹಿ ಮುನವಳ್ಳಿ,ಶಂಕರ ಕಲ್ಲಿಗನೂರ,ಸೋಮಶೇಖರ. ಸಿ,ಸುರೇಶ ಮಹೇಂದ್ರಕರ್, ದುರಗಪ್ಪ ಬಂಕದ,ಶಿಕ್ಷಕ ಲೆಕ್ಕಿಹಾಳ,ಸುರೇಶ ಪತ್ತಾರ,ಶರಣಪ್ಪ ಬೇವಿನಕಟ್ಟಿ, ಡಾ. ಮಹಾಂತೇಶ ಅಂಗಡಿ, ಗಣೇಶ ಗಂಜಿ,ಎಸ್ ಎಸ್ ನರೇಗಲ್,ನೀಲಕಂಠ ಸವಣುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.