
ಭಾರತ ಕಂಡ ಸರ್ವ ಶ್ರೇಷ್ಠ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ – ರಾಜೇಂದ್ರ ಘೋರ್ಪಡೆ.
ಗಜೇಂದ್ರಗಡ : ಸತ್ಯಮಿಥ್ಯ ( ಡಿ -25).
ಭಾರತ ಕಂಡ ಸರ್ವ ಶ್ರೇಷ್ಠ ರಾಜಕಾರಣಿ, ಪ್ರಕಾರ ವಾಗ್ಮಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ನೂರನೇ ಜನ್ಮದಿನದ ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನ, ದೇಶ ಪ್ರೇಮ ಮತ್ತು ಸಂಘಟನಾ ಚತುರತೆಯನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡರಾದ ರಾಜೇಂದ್ರ ಘೋರ್ಪಡೆ ಹೇಳಿದರು
ಅವರು ಇಂದು ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ವತಿಯಿಂದ ಗಜೇಂದ್ರಗಡ ನಗರದ ಭಾಜಪ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ ಬಿಹಾರಿ ವಾಜಪೇಯಿ ಜಯಂತಿಯನ್ನು ಆಚರಿಸಿ ಮಾತನಾಡುತ್ತ. ವಾಜಪೇಯಿಯವರ ದೂರದೃಷ್ಟಿ ನಾಯಕತ್ವದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಕೆಲಸಗಳು ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುತ್ತಿವೆ.ರಾಜಕೀಯ ರಂಗದಲ್ಲಿ ವಾಜಪೇಯಿಯವರನ್ನು ದ್ವೇಸಿಸುವ ವ್ಯಕ್ತಿ ಸಿಗಲಾರರು ಆ ಕಾರಣಕ್ಕೆ ಅಜಾತ ಶತ್ರು ಎಂದು ಕರೆಯಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ವೀರಣ್ಣ ಪಟ್ಟಣಶೆಟ್ಟಿ,ಉಮೇಶ ಚನ್ನು ಪಾಟೀಲ,ಅಂದಪ್ಪ ಅಂಗಡಿ,ಮಾಂತೇಶ ಪೂಜಾರ,ರಾಜು ಘೋರ್ಪಡೆ,ಶಿವಕುಮಾರ ದಡ್ಡೂರು,ಕಳಕೇಶ ಸೂಡಿ,ಬಸವರಾಜ ಕಡಬಲಕಟ್ಟಿ,ಉಮೇಶ ಅಡ್ನೂರು ಮುಂತಾದವರು ಉಪಸ್ಥರಿದ್ದರು.
ವರದಿ : ಚನ್ನು. ಎಸ್.