
ಹಾನಗಲ್ಲಿನಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಶಿಗ್ಗಾಂವಿ ಕೊಲೆ ಆರೋಪಿಗಳಿಬ್ಬರ ಮೇಲೆ ಫೈಯರ್.
ಶಿಗ್ಗಾಂವಿ: ಸತ್ಯಮಿಥ್ಯ(ಜೂ – 26).
ನಗರದಲ್ಲಿ ಮೊನ್ನೆ ನಡೆದ ಶಿವಾನಂದ ಕುನ್ನೂರು ಕೊಲೆ ಆರೋಪಿಗಳಿಬ್ಬರ ಮೇಲೆ ಇಂದು ಬೆಳಿಗ್ಗೆ ಹಾನಗಲ್ ಪೊಲೀಸರು ಫೈಯರ್ ಮಾಡಿದ್ದಾರೆ.
ಕೊಲೆ ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ ಸವದತ್ತಿ ಮೇಲೆ ಪೊಲೀಸರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ.

ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಶಿಗ್ಗಾಂವಿ ಕೊಲೆ ಆರೋಪಿಗಳನ್ನು ಬಂಧಿಸಿ ಕರೆ ತರುತ್ತಿದ್ದ ಸಂದರ್ಭದಲ್ಲಿ ಕೊಂಡೋಜಿ ಬಳಿ ಇವರು ಏಕಾಏಕಿ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಹಾನಗಲ್ ಎಸ್ಐ ಸಂಪತ್ ಆನಿಕಿವಿ, ಆಡೂರು ಪಿಎಸ್ಐ ಶರಣಪ್ಪ ಹಂಡರಗಲ್ ಜೀವ ರಕ್ಷಣೆಗೆ ಫೈಯರ್ ಮಾಡಿದ್ದಾರೆ.
ವರದಿ : ವಿಶ್ವನಾಥ. ಕೆ.