ರಾಜ್ಯ ಸುದ್ದಿ

ಕೃಷ್ಣ ನದಿ ಜಲಾಶಯ ನೀರು ಬಿಡುಗಡೆ – ರೈತರ ಮುಖದಲ್ಲಿ ಸಂತೋಷ.

Share News

ಕೃಷ್ಣ ನದಿ ಜಲಾಶಯ ನೀರು ಬಿಡುಗಡೆ – ರೈತರ ಮುಖದಲ್ಲಿ ಸಂತೋಷ. 

ಯಾದಗಿರಿ: ಸತ್ಯಮಿಥ್ಯ (ಜುಲೈ -18)

ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಶುಕ್ರವಾರದಂದು ಅತಿ ಹೆಚ್ಚಾಗಿ ನೀರು ಸಂಗ್ರಹಣೆ ಆಗಿರುವುದರಿಂದ ನೀರನ್ನು ಹೊರ ಬಿಡಲಾಯಿತು ಇದರಿಂದ ರೈತರು ಸಂತಸಗೊಂಡಿದ್ದಾರೆ .ನೀರು ಹೊರಬರುವ ನೋಟ ವಿಹಂಗಮವಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ.ಆಲಮಟ್ಟಿ ಜಲಾಶಯದಿಂದ ಅತಿ ಹೆಚ್ಚು ನೀರು  ಹೊರ ಬಿಡಲಾಗುತ್ತಿದೆ.

ಇದು ಮಧ್ಯಾಹ್ನ 3 ಗಂಟೆ ಸುಮಾರಿಗೆ 22 ಕ್ರಸ್ಟ್ ಗೇಟ್ ಗಳ ಮೂಲಕ ಪ್ರಸ್ತುತ 491.75 ಮೀಟರ್ ನೀರು ಹೊರ ಬಿಡಲಾಯಿತು.

ಪ್ರಸ್ತುತ ಆಲಮಟ್ಟಿಯಿಂದ ಹೊರ ಬಿಡಲಾದ ನೀರು 70000 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಕಾರಣದಿಂದ ಕೃಷ್ಣಾ ನದಿ ಪ್ರಸ್ತುತ ಸುಮಾರು ಮೂರು ಗಂಟೆಯ ಹೊತ್ತಿಗೆ 68920 ಎಫೆಕ್ಟ್ ನೀರನ್ನು ಹೊರ ಬಿಡಲಾಯಿತು.

ಒಟ್ಟು ಪ್ರಸ್ತುತ ನೀರು ಸಂಗ್ರಹಣೆ ಕೃಷ್ಣಾ ನದಿಯಲ್ಲಿ 31.010 ಟಿಎಂಸಿ ನೀರು ಸಂಗ್ರಹಣೆಯಾಗಿದ್ದು ಅಂದರೆ ಸರಿಸುಮಾರು 93.09% ಕೃಷ್ಣಾ ನದಿಯಲ್ಲಿ ನೀರು ಸಂಗ್ರಹಣೆಯಾಗಿದೆ.

ಅಂದರೆ ಕೃಷ್ಣಾ ನದಿಯಲ್ಲಿ ಪ್ರಸ್ತುತ ಒಟ್ಟು ನೀರು ಸಂಗ್ರಹಣೆಯಾಗುವ ಸಾಧ್ಯತೆ 492.25ಎಮ್ ನಷ್ಟು ನೀರು ಇದೆ. ಒಟ್ಟಾರೆ 33.313 ಟಿಎಂಸಿ ನೀರು ನಮ್ಮ ನದಿಯಲ್ಲಿ ಸಂಗ್ರಹಣೆ ಆಗಬಹುದು ಪ್ರಭಾವಿ ಅಧಿಕಾರಿ ವಿಜಯೇಂದ್ರ ಅರಳಿ ಮಾಹಿತಿ ನೀಡಿದರು.

ವರದಿ :ಶಿವು ರಾಠೋಡ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!