
ಹೋರಾಟಕ್ಕೆ ಮಣಿದ ಅಧಿಕಾರ ವರ್ಗ: ಸಮಸ್ಯೆ ಇತ್ಯರ್ಥಕ್ಕೆ ಸಮಯದ ಗಡುವು.
ಹೋರಾಟ ನಿರತರ ಮೂಗಿಗೆ ತುಪ್ಪ ಸವರಿದರೇ ಅಧಿಕಾರಿಗಳು ? ಕಾದು ನೋಡೋಣ ಜನೇವರಿ 31 ರವರೆಗೆ!
ಗಜೇಂದ್ರಗಡ:ಸತ್ಯಮಿಥ್ಯ (ಜ -09)
ನಗರದ ಪುರಸಭೆ ಕಚೇರಿ ಎದುರು ಕಳೆದ ಎರಡು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ಬೀದಿ ಬದಿಯ ವ್ಯಾಪಾರಿಗಳ ಸಂಘ (ರಿ) (CITU ಸಂಯೋಜಿತ) ಗಜೇಂದ್ರಗಡ ತಾಲೂಕು ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡಿ ದಿನಾಂಕ 08/01/2025 ರಂದು ಗಜೇಂದ್ರಗಡ ಬಂದ್ ಗೆ ಕರೆ ನೀಡಲಾಗಿತ್ತು.
ಈ ಗಜೇಂದ್ರಗಡ ಬಂದ್ ಕರೆಗೆ ಜನತೆಯು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದರು. ಈ ಮಧ್ಯ 07/01/2025 ರಂದು ರಾತ್ರಿ ಮಾನ್ಯ ಡಿ ವಾಯ್ ಎಸ್ ಪಿ ಪ್ರಭುಗೌಡ ಕಿರೇದಹಳ್ಳಿ, ಮಾನ್ಯ ತಹಶಿಲ್ದಾರರು ಕಿರಣಕುಮಾರ ಕುಲಕರ್ಣಿ, ಪುರಸಭೆ ಮುಖ್ಯಅಧಿಕಾರಿ ಬಸವರಾಜ ಬಳಗಾನೂರ, ಪಿ ಎಸ್ ಐ ಸೋಮನಗೌಡ ಗೌಡ್ರ, ಪುರಸಭೆ ಅಧ್ಯಕ್ಷರಾದ ಮುತ್ತಣ್ಣ ಮ್ಯಾಗೇರಿ, ಪುರಸಭೆ ಸದಸ್ಯರಾದ ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್ಲ, ಮುರ್ತುಜಾ ಡಾಲಾಯತ್ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಶಾಮೀದ್ ದಿಂಡವಾಡ, ಪೀರು ರಾಠೋಡ, ಬಾಲು ರಾಠೋಡ, ಮೈಬು ಹವಾಲ್ದಾರ, ಎಮ್ ಎಸ್ ಹಡಪದ, ಗಣೇಶ ರಾಠೋಡ, ಚಂದ್ರು ರಾಠೋಡ, ಪರಶುರಾಮ ಬಡಿಗೇರ, ಅಂಬರೀಶ ಚವ್ಹಾಣ, ಚೌಡಮ್ಮ ಯಲ್ಪು ಸೇರಿದಂತೆ ಪುರಸಭೆಯ ಸಭಾ ಭವನದಲ್ಲಿ ಜಂಟಿ ಸಭೆಯನ್ನು ರಾತ್ರಿ 9.30ಕ್ಕೆ ನಡೆದು ಸಮಸ್ಯೆ ಬಗೆಹರಿಸಲು ಕಾಲಾವಕಾಶ ದಿನಾಂಕ 31/01/2025 ರ ತನಕ ಕಾಲಾವಕಾಶ ಕೇಳಿಕೊಂಡರು. ಈ ಸಂದರ್ಭದಲ್ಲಿ ಹೋರಾಟ ಲಿಖಿತ ರೂಪದಲ್ಲಿ ನಮಗೆ ಭರವಸೆ ನೀಡಬೇಕೆಂದು ಕೇಳಿದಾಗ ನಾಳೆ ಕೊಡುತ್ತೆವೆ ಹೇಳಿದಕ್ಕೆ ರಾತ್ರಿ ಹೋರಾಟ ಮುಂದುರಿಸಲಾಯಿತು.
ಗಜೇಂದ್ರಗಡ ಬಂದ್ ಕರೆಗೆ ಜನತೆಯು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ಬೆಂಬಲಿಸಿದ್ದರು ಹೋರಾಟಗಾರರು ಬೆಳ್ಳಿಗ್ಗೆ 11:30 ರ ಸುಮಾರಿಗೆ ಹೋರಾಟದ ಮೆರವಣಿಗೆಯನ್ನು ಪ್ರಾರಂಭಿ ಚೌಕಿಮಠ, ದುರ್ಗಾ ಸರ್ಕಲ್ ಮೂಲಕ ಕೆ ಕೆ ಸರ್ಕಲ್ ನಲ್ಲಿ ಬಹಿರಂಗ ಸಭೆ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ ಜನತೆಯನ್ನು ಸತಾಯಿಸುವ ಕೆಲಸ ನಿಲ್ಲಬೇಕು ಸುಪ್ರೀಂ ಕೋರ್ಟ್ ಆದೇಶವನ್ನು ಗಾಳಿಗೆ ತೂರಲಾಗಿದೆ ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣಾ ಕಾಯ್ದೆಯನ್ನು ಸ್ಥಳೀಯ ಆಡಳಿತ ಜಾರಿ ಮಾಡಬೇಕು ಎಂದರು.
ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಾಲು ರಾಠೋಡ ಮಾತನಾಡಿ ರೋಣ ಮತ ಕ್ಷೇತ್ರದಲ್ಲಿ ಇಂದು ಎರಡ ಎರಡು ಜನ ಶಾಸಕರು ಆಗಿದ್ದಾರೆ ಹಾಗಾಗಿ ಯಾವುದೋ ಒಬ್ಬ ಪ್ರಭಾವಿ ವ್ಯಕ್ತಿಗೆ ಮಣಿದು ಇಂದು ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವ ಕೇಂದ್ರದ ಅಧ್ಯಕ್ಷರಾದ ಬಸವರಾಜ ಕೊಟಗಿ ಅವರು ಮಾತನಾಡಿ ಶಿವ ಶರಣರ ನಾಡಿನಲ್ಲಿ ಇಂದು ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲವಾಗಿದೆ. ವ್ಯಾಪಾರ ಕುಸಿತವಾಗಿದೆ ಏಕಾಏಕಿ ಮಾರುಕಟ್ಟೆ ಯಾಕೆ ಸ್ಥಳಾಂತರ ಮಾಡಿದರು ಅದರ ಹಿಂದೆ ಯಾರ ಪ್ರಭಾವ ಇದೆ ಎಂದು ಪ್ರಶ್ನಿಸಿದರು.
ಎಸ್ ಎಫ್ ಐ ರಾಜ್ಯ ಮುಖಂಡರಾದ ಗಣೇಶ ರಾಠೋಡ ಮಾತನಾಡಿ ಜನತೆಯ ಅಭಿವೃದ್ಧಿಗೆ ಯೋಜನೆ ರೂಪಸದೇ ಯಾವುದೋ ವ್ಯಕ್ತಿಗಾಗಿ ಅಭಿವೃದ್ಧಿ ಮಾಡಲು ಹೋರಟರೇ ನಾವು ಈ ನೆಲದ ಜನತೆ ಬಿಡುವುದಿಲ್ಲ ಹೋರಾಟ ಮಾಡಿ ಗೆದ್ದೆ ಗೆಲ್ಲುತ್ತೆವೆ ಅಭಿವೃದ್ಧಿ ಜನರ ಅನುಕೂಲಕ್ಕೆ ಆಗಬೇಕು ಅದು ಬಿಟ್ಟು ವ್ಯಕ್ತಿ ಅಭಿವೃದ್ಧಿಗಾಗಿ ಅದು ಆಗಿರಬಾರದು ಎಂದರು.
ಸಂಘಟನೆ ತಾಲ್ಲೂಕು ಅಧ್ಯಕ್ಷರಾದ ಶಾಮೀದ್ ದಿಂಡವಾಡ ಅವರು ಮಾತನಾಡಿ ಗಜೇಂದ್ರಗಡ ವ್ಯಾಪಾರಸ್ಥರ ಬದುಕು ಸೌಹಾರ್ದತೆ ಬದುಕು ಅದನ್ನು ನಾಶ ಮಾಡಲು ಮತ್ತು ಮಾರಾಟದ ಮೂಲಕ ಆಗುತ್ತಿರುವ ಅಭಿವೃದ್ಧಿ ನಾಶ ಮಾಡಲು ಈ ರೀತಿಯಲ್ಲಿ ಬಡವರ ಮೇಲೆ ಬರಿ ಎಳೆಯುವ ಕೆಲಸ ಆಗಿದೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಗಜೇಂದ್ರಗಡವೂ ಭಾರತದಲ್ಲಿಯೇ ಇದೆ ವಿನಃ ಅಫ್ಘಾನಿಸ್ತಾನದಲ್ಲಿ ಇಲ್ಲಾ ಅಲ್ಲಿ ಸರ್ವಾಧಿಕಾರಿ ಆಡಳಿತ ಇದೆ ಆದರೆ ನಮ್ಮ ಭಾರತವೂ ಪ್ರಜಾಪ್ರಭುತ್ವದ ಬಹುದೊಡ್ಡ ರಾಷ್ಟ್ರ ಹಾಗಾಗಿ ನಮ್ಮ ವ್ಯಾಪಾರಸ್ಥರ ಹಕ್ಕುಗಳು ರಕ್ಷಣೆ ಆಗಬೇಕೆಂದು ಅವರು ಆಗ್ರಹಿಸಿದರು.
ನಂತರ ಹೋರಾಟದ ಸ್ಥಳಕ್ಕೆ ಮಾನ್ಯ ಮುಖ್ಯ ಅಧಿಕಾರಿಗಳಾದ ಬಸವರಾಜ ಬಳಗಾನೂರ, ಉಪ ತಹಶಿಲ್ದಾರರು, ಪೋಲಿಸ್ ಇಲಾಖೆಯಿಂದ ವಿ ಎಸ್ ಚೌವಡಿ (ಎಎಸ್ಐ) ಆಗಮಿಸಿ ಹೋರಾಟಗಾರರ ಹಕ್ಕೊತ್ತಾಯದ ಮನವಿ ಪತ್ರ ಸ್ವೀಕರಿಸಿ ದಿನಾಂಕ 31/01/2025 ರಂದು ಗಜೇಂದ್ರಗಡದ ಪುರಸಭೆಯ ಸಭಾ ಭವನದಲ್ಲಿ ಸಭೆಯನ್ನು ಕರೆದು ಅಂದು ಸಮಸ್ಯೆಗೆ ಪರ್ಯಾಯ ಪರಿಹಾರ ಸೂಚಿಸುತ್ತೆವೆ ಎಂದು ಲಿಖಿತ ರೂಪದಲ್ಲಿ ಭರವಸೆ ಪತ್ರವನ್ನು ನೀಡಿದರು. ನೀಡಿದ ಕಾಲಾವಕಾಶದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಮರು ದಿನವೇ ಹೋರಾಟವನ್ನು ಮುಂದುವರೆಸುತ್ತೆವೆ ಎಂದು ಎಚ್ಚರಿಸಿ ಲಿಖಿತ ಭರವಸೆಯನ್ನು ಪಡೆದು ಹೋರಾಟಕ್ಕೆ ಅಲ್ಪವಿರಾಮ್ ನೀಡಲಾಯಿತು.
ಎಸ್ ಎಫ್ ಐನ ಜಿಲ್ಲಾಧ್ಯರಾದ ಚಂದ್ರು ರಾಠೋಡ ಹೋರಾಟಕ್ಕೆ ಸ್ಪಂದಿಸಿದ ಗಜೇಂದ್ರಗಡದ ಜನತೆಗೆ ಸಹಕರಿಸಿದ ಸಾರ್ವಜನಿಕರಿಗೆ, ಪತ್ರಕರ್ತರಿಗೆ, ಪೋಲಿಸ್ ಇಲಾಖೆಗೆ, ಹೋರಾಟದಲ್ಲಿ ಭಾಗಿಯಾದ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಹೋರಾಟಕ್ಕೆ ಜೊತೆಯಾದ ಎಲ್ಲಾ ಮನಸ್ಸುಗಳಿಗೆ ಕ್ರಾಂತಿಕಾರಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್ ಎಸ್ ತಾಲ್ಲೂಕು ಅಧ್ಯಕ್ಷರಾದ ರೂಪಲೇಶ ಮಾಳೋತ್ತರ, ಮುಖಂಡರಾದ ವಿರೇಶ ರಾಠೋಡ, ಚೆನ್ನಪ್ಪ ಗುಗ್ಗಲೋತ್ತರ್, ಮೈಬು ಹವಾಲ್ದಾರ್, ಶಿವಾಜಿ ಗಡ್ಡದ, ನಜೀರ ಮಾಲಾದ್ದಾರ, ಅನೀಲ್ ರಾಠೋಡ, ಶರಣು ಮಾದರ, ರೇವಣಪ್ಪ, ಆನಂದ, ಕನಕಪ್ಪ, ಲಕ್ಷ್ಮಣ ರಾಠೋಡ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳಾಗಿ, ಚೌಡಮ್ಮ ಯಲ್ಪು, ಮೈಬೂಸಾಬ್ ಮಾಲ್ದಾರ.ಮುತ್ತಣ್ಣ ರಾಠೋಡ, ಅಂಬರೇಶ ಚವ್ಹಾಣ, ಮಾರುತಿ ಗೊಂದಳೆ, ಮುತ್ತಣ್ಣ ತೇಜಪ್ಪ ರಾಠೋಡ, ವೀಷ್ಣು ಚಂದುಕರ, ಮಹಾಂತೇಶ ಹೀರೇಮಠ, ಬಡಿಗೇರ ಪರಸುರಾಮ, ಗಂಗಾಧರ ಸತ್ಯನ್ಯವರ, ಯಮನೂರಸಾಬ್ ಗಾದಿ,ಮರ್ತುಜಾ ದಿಂಡವಾಡ, ಅಶೋಕ್ ಚವ್ಹಾಣ, ಕಳಕಪ್ಪ ಮಾಳೋತ್ತರ, ರಾಜುಪಾಲ, ಸುರೇಶ್ ಅಕ್ಕಸಾಲಿ, ನಾಗರಾಜ ಆಜೀರ,ದೇವಕ್ಕ ರಾಠೋಡ, ಭದ್ರೇಶ್ ರಾಠೋಡ, ಮಂಜುನಾಥ ಚವ್ಹಾಣ, ನಾಗಪ್ಪ ಅಜ್ಮೀರ್ ಹಾಗೂ ನೂರಾರು ಜನ ವ್ಯಾಪಾರಸ್ಥರು ಹಾಜರಿದ್ದರು.
ವರದಿ : ಚನ್ನು. ಎಸ್.