
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ- ಮುಖ್ಯಮಂತ್ರಿ ಯೋಗಿ ಭೇಟಿ.
ಪ್ರಯಾಗರಾಜ್ : ಸತ್ಯಮಿಥ್ಯ (ಜ -19)
ಉತ್ತರ ಪ್ರದೇಶದ ಪ್ರಯಾಗರಾಜನಲ್ಲಿ ನಡೆದರು ಮಹಾ ಕುಂಭಮೇಳದ ಒಂದು ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಘಟನೆ ನಡೆದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೆಂಟ್ ನಲ್ಲಿ ಅಡಿಗೆ ಮಾಡಲು ಇರಿಸಿದ್ದ ಸಿಲೆಂಡರ್ ಸ್ಫೋಟದಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಯಾವುದೇ ರೀತಿಯ ಜೀವ ಹಾನಿಯಾದ ವರದಿಯಾಗಿಲ್ಲ.
ಕೂಡಲೇ ಪೊಲೀಸ್ ಸಿಬ್ಬಂದಿ ಜನರನ್ನ ಸುರಕ್ಷಿತ ಸ್ಥಳಗಳಿಗೆ ಕಳುಹಿಸುತ್ತಿದ್ದಾರೆ.