ಜಿಲ್ಲಾ ಸುದ್ದಿ

ಗದಗ / ಒಂದೇ ಸೂರಿನಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟ.

Share News

ಗದಗ / ಒಂದೇ ಸೂರಿನಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟ.

ಗದಗ :ಸತ್ಯಮಿಥ್ಯ (ಆ -19).

ಗದಗ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘದ ವತಿಯಿಂದ ಈ ಬಾರಿಯೂ ನಗರದ ಎಂ.ಪಿ.ಎಮ್.ಸಿ ಮಾರುಕಟ್ಟೆಯ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸುಮಾರು 20 ಗಣೇಶ ಮೂರ್ತಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಎ.ಪಿ.ಎಂ.ಸಿ. ಆವರಣದಲ್ಲಿ ಸುಂದರ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಇರಲಿವೆ.

ಅ.21 ರಿಂದ 27 ರ ಮುಂಜಾನೆ 9 ರಿಂದ ರಾತ್ರಿ 9 ಗಂಟೆವರೆಗೆ ಮಳಿಗೆಗಳಲ್ಲಿ ಗಣೇಶ ಮೂರ್ತಿಗಳು ಲಭ್ಯ ಇರಲಿವೆ. ಸ್ಥಳೀಯ ಹಾಗೂ ನೆರೆಯ ಜಿಲ್ಲೆಗಳಿಂದ ಕಲಾವಿದರು ತಯಾರಿಸಿರುವ ಶುದ್ಧ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳ ಮಾರಾಟ ನಡೆಯಲಿದೆ.

ವಿವಿಧ ಶೈಲಿಯ ಮಣ್ಣಿನ ಸುಂದರ ಗಣೇಶ ಮೂರ್ತಿಗಳು ಇಲ್ಲಿ ದೊರೆಯುತ್ತವೆ. ಒಂದೇ ಸೂರಿನಡಿ ವಿವಿಧ ಕಲಾವಿದರು ತಯಾರಿಸಿದ ಗಣೇಶಮೂರ್ತಿಗಳು ಮಾರಾಟಕ್ಕೆ ಲಭ್ಯ ಇರಲಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ಗದಗ ಜಿಲ್ಲೆಯ ಜನರು ಸಹಕರಿಸಿ, ಪರಿಸರ ಸ್ನೇಹಿ ಗಣೇಶ ವಿಗ್ರಹ ಗಳನ್ನು ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸಲು ಗಣೇಶ ಮೂರ್ತಿ ತಯಾರಕರ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9945187154 ಗೆ ಸಂಪರ್ಕಿಸಬಹುದಾಗಿದೆ. ಮುತ್ತಣ್ಣ ಭರಡಿ ಪ್ರಧಾನಕಾರ್ಯದರ್ಶಿ ಜಿಲ್ಲಾ ಮೂರ್ತಿ ತಯಾರಕರ ಸಂಘ.

ವರದಿ : ಮುತ್ತು ಗೋಸಲ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!