ಸ್ಥಳೀಯ ಸುದ್ದಿಗಳು

ಗಜೇಂದ್ರಗಡ : ಕೆಎಸ್ಎಸ್ ನಲ್ಲಿ ಸಾಂಘಿಕ, ಸಾಂಸ್ಕೃತಿಕ ಕಾರ್ಯಕ್ರಮ.

ಕೆ ಎಸ್ ಎಸ್ ಪ್ರೌಢಶಾಲೆ ಹಾಗೂ ಪದವಿಪೂರ್ವಮಹಾವಿದ್ಯಾಲಯದ ಸಾಂಘಿಕ ಚಟುವಟಿಕೆಗಳ ಹಾಗೂ ಎಂಟನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ.

Share News

ಕೆ ಎಸ್ ಎಸ್ ಪ್ರೌಢಶಾಲೆ ಹಾಗೂ ಪದವಿಪೂರ್ವಮಹಾವಿದ್ಯಾಲಯದ ಸಾಂಘಿಕ ಚಟುವಟಿಕೆಗಳ ಹಾಗೂ ಎಂಟನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ.

ಗಜೇಂದ್ರಗಡ:ಸತ್ಯಮಿಥ್ಯ (ಜುಲೈ -26)

ಪಟ್ಟಣದ ಕೆ ಎಸ್ ಎಸ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಾಂಘಿಕ ಸಾಂಸ್ಕೃತಿಕ ಹಾಗು ಎನ್ ಎಸ್ ಎಸ್ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಎಂಟನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಮಾಡಲಾಯಿತು.

ಕಾರ್ಯಕ್ರಮವನ್ನು ಐ,ಬಿ ದಂಡಿನರವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐ,ಬಿ ದಂಡಿನರವರು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ನಡೆಯುವಂತಹ ಎಲ್ಲ ರೀತಿಯ ಸಾಂಘಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಹಾಗೂ ಕಾಲೇಜು ಪ್ರೌಢಶಾಲೆಯ ಕೀರ್ತಿಯನ್ನು ಬೆಳಗಿಸುವಂತಹ ವಿದ್ಯಾರ್ಥಿಗಳಾಗಿ ಉತ್ತಮ ಶಿಕ್ಷಣದಿಂದ ಉತ್ತಮ ಪ್ರಜೆಗಳಾಗಿ ಎಂದು ಹೇಳಿದರು,

ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಹೆಚ್ ಎನ್ ಗೌಡರವರು ವಹಿಸಿ ಮಾತನಾಡುತ್ತ.ವಿದ್ಯಾರ್ಥಿಗಳು ಕಲಿಕೆಯನ್ನು ಆಸಕ್ತಿಯಿಂದ ಕಲಿತು ಶೈಕ್ಷಣಿಕ ವರ್ಷದ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ವಿವಿಧ ಸಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಚ್ ಕೆ ನರೆಗಲ್,  ರವೀಂದ್ರ ಕವಡಿಮಟ್ಟಿ, ಪಿ ಎಸ್ ಹುಲ್ಲೂರ, ಆರ್ ವಿ ಪತ್ತಾರ್, ವಹಿಸಿದರು.

ನಿರೂಪಣೆಯನ್ನು ಎಮ್ ಎ ಮಳಗಾವಿ ಯವರು ನೆರವೆರಿಸಿದರು. ಪುಷ್ಪಾರ್ಪಣೆಯನ್ನು ಪಿ ಎಸ್ ಹಿರೇಮಠ ನೆರವೆರಿಸಿದರು ವಂದನಾರ್ಪಣೆಯನ್ನು ಎಲ್ ಕೆ ಚಂದೂಕರ ರವರು ನೆರವೆರಿಸಿದರು.

ಕಾರ್ಯಕ್ರಮದಲ್ಲಿ ಎಸ್. ಬಿ. ಪೂಜಾರ, ಎಸ್. ಎ.ನದಾಫ, ಕಾವ್ಯಾಶ್ರೀ ಬೇವಿನಕಟ್ಟಿ, ಬಿ.ಕೆ. ಜಾಲಕ್ಕನವರು, ಎಂ.ಎಂ. ಕೆಲೂರು,  ಸಿಗ್ಲಿಯವರು ಪದವಿ ಪೂರ್ವ ಕಾಲೇಜಿನ ಹಾಗೂ ಪ್ರೌಢಶಾಲೆಯ ಸಿಬ್ಬಂದಿಗಳು ಪ್ರೌಢಶಾಲೆಯ ಮಕ್ಕಳು ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!