ಜಿಲ್ಲಾ ಸುದ್ದಿ

ಅನೇಕ ಮಹನೀಯರ ತ್ಯಾಗಬಲಿದಾನದಿಂದ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ – ಬಿ. ಎಂ. ಸಜ್ಜನರ.

Share News

ಅನೇಕ ಮಹನೀಯರ ತ್ಯಾಗಬಲಿದಾನದಿಂದ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ – ಬಿ. ಎಂ. ಸಜ್ಜನರ.

ಗಜೇಂದ್ರಗಡ: ಸತ್ಯಮಿಥ್ಯ (ಏ-06)

ಇಂದು ಭಾರತೀಯ ಜನತಾ ಪಾರ್ಟಿ ವಿಶ್ವದಲ್ಲಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಅನೇಕ ಮಹನೀಯರ ತ್ಯಾಗ ಬಲಿದಾನವಾಗಿದೆ.ಅದರಲ್ಲಿ ಮೊದಲಿಗರು ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ ಮುಖರ್ಜಿ ಸೇರಿದಂತೆ ವಾಜಪೇಯಿ, ಎಲ್. ಕೆ. ಅಡ್ವಾಣಿ, ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಜೀ ಸೇರಿದಂತೆ ಕೋಟ್ಯಾಂತರ ಜನರ ಪರಿಶ್ರಮದಿಂದ ಬಿಜೆಪಿ ನಂಬರ್ ಒನ್ ಪಕ್ಷವಾಗಿದೆ. ಭಾಜಪ ದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ದೇಯ್ಯ ವಾಕ್ಯ ದೇಶ ಮೊದಲು ನಂತರ ಪಕ್ಷ ಎಂಬ ತತ್ವದಡಿಯಲ್ಲಿಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಬಿ. ಎಂ. ಸಜ್ಜನರ ನುಡಿದರು.

ಅವರು ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣ ಅಂಗವಾಗಿ  ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ವತಿಯಿಂದ ನಗರದ ಪಕ್ಷದ ಕಾರ್ಯಾಲಯದಲ್ಲಿ ದೀನ್ ದಯಾಳ್ ಉಪಾಧ್ಯಾಯ ಭಾರತ ಮಾತೆ ಹಾಗೂ ಶಾಮ ಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಕಸಿತ ಭಾರತ ಕಲ್ಪನೆಯನ್ನು ಕೇಂದ್ರ ಸರ್ಕಾರ ಸಾಕಾರಗೊಳ್ಳುತ್ತಿದೆ ಎಂದು ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ ಮಾತನಾಡಿದರು..

ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ರಾಜೇಂದ್ರ ಘೋರ್ಪಡೆ ,ಶಿವಾನಂದ ಮಠದ, ಸಿದ್ದಣ್ಣ ಬಳಗೇರ, ಬಸವರಾಜ ಬಂಕದ,ಶ್ರೀಕಾಂತ್ ಮಾರನ ಬಸರಿ, ಭಾಸ್ಕರ್ ರಾಯಬಾಗಿ,  ಪ್ರಧಾನ ಕಾರ್ಯದರ್ಶಿ ಬಾಲಾಜಿ ರಾವ್ ಬೋಸಲೆ ಪುರಸಭೆ ವಿರೋಧ ಪಕ್ಷದ ನಾಯಕ ಮೂಕಪ್ಪ ನಡುಗುಂದಿ ರವಿ ಸಿಂಗ್ರಿ ಸುಗುರೇಶ್ ಚೋಳಿನ ಮಲ್ಲಪ್ಪ ಕುರಿ ಶಿವಮೂರ್ತಿಪ್ಪ ನಿಡಗುಂದಿ ಬಾಳನಗೌಡ ಗೌಡರ್ ಸೇರದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ : ಸುರೇಶ ಬಂಡಾರಿ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!