ಜಿಲ್ಲಾ ಸುದ್ದಿ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ – ಸವಿತಾ ಬಿದರಳ್ಳಿ ಅಭಿಮತ.

ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲರ 78 ನೇ ಜನುಮದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ.

Share News

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ – ಸವಿತಾ ಬಿದರಳ್ಳಿ ಅಭಿಮತ.

Oplus_131072

ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲರ 78 ನೇ ಜನುಮದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ.

ಗಜೇಂದ್ರಗಡ :ಸತ್ಯಮಿಥ್ಯ (ಎ-11).

ಮರಗಳ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ.ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ಬಿಸಿಲ ಬೇಗೆಗೆ ಮನುಷ್ಯ ತತ್ತರಿಸುತ್ತಿದ್ದಾನೆ.ಆದ್ದರಿಂದ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಎಂದು ಗಜೇಂದ್ರಗಡ ಪುರಸಭೆ ಉಪಾಧ್ಯಕ್ಷರಾದ ಸವಿತಾ ಬಿದರಳ್ಳಿ ನುಡಿದರು.

Oplus_131072

ಅವರು ಪಟ್ಟಣದ ಜೆ.ಟಿ.ಪಿ.ಎಸ್.ಶಾಲೆಯಲ್ಲಿ ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲರ 78ನೇ ಹುಟ್ಟುಹಬ್ಬದ ಪ್ರಯುಕ್ತ ಸಸಿನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ. ರೋಣ ಮತಕ್ಷೇತ್ರಾದ್ಯಂತ ದಾಖಲೆ ಮಟ್ಟದಲ್ಲಿ ಕೃಷಿ ಹೊಂಡಗಳ ನಿರ್ಮಾಣ ಮಾಡುವ ಮೂಲಕ ಸಾವಿರ ಕೆರೆಗಳ ಸರ್ದಾರ ಎನಿಸಿಕೊಂಡಿದ್ದಾರೆ.ಅವರು ನೂರುಕಾಲ ಚೆನ್ನಾಗಿ ಇರಲಿ ಅವರಿಂದ ಬಡವರ ದೀನ ದಲಿತರ ಏಳಿಗೆಯಾಗಲಿ ಎಂದು ಹಾರೈಸಿದರು.

ಬಳಿಕ ಕಾಂಗ್ರೆಸ್ ಯುವ ಮುಖಂಡ ಅಪ್ಪು ಮತ್ತಿಕಟ್ಟಿ ,‌ ಶಿವರಾಜ ಘೋರ್ಪಡೆ ಮಾತನಾಡಿ ಪರಿಸರವನ್ನು ಬೆಳೆಸಿ ಪೋಷಣೆ ಮಾಡಿ ಉಳಿಸಿಕೊಳ್ಳುವ ಕಾರ್ಯ ಅಷ್ಟೊಂದು ಸುಲಭವಲ್ಲ. ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು. ಅಂತಹ ಹೃದಯವಂತಿಕೆ ಇರುವ ನಮ್ಮ ಶಾಸಕರ ಜನ್ಮ ದಿನದಂದು ನಾವೆಲ್ಲಾ ಸಸಿ ನೆಡುವ ಕಾರ್ಯಕ್ರಮವು ಮಾಡಿದ್ದು ನಿಜಕ್ಕೂ ಮುಂದಿನ ಯುವ ಪೀಳಿಗೆಗೆ ಮಾದರಿ ಎಂದರು.

Oplus_131072

ನಗರದಲ್ಲಿನ ವಿವಿಧ ಶಾಲಾ‌‌ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ನೆರವೇರಿಸಿದರು.

ಇನ್ನೂ ಇದೇ ಸಂದರ್ಭದಲ್ಲಿ ಎಚ್.ಎಸ್.ಸೊಂಪೂರ, ಶ್ರೀಧರ ಬಿದರಳ್ಳಿ,ಯಲ್ಲಪ್ಪ ಬಂಕದ, ಶರಣಪ್ಪ‌ ಚಳಗೇರಿ, ಸಿದ್ದು ಗೊಂಗಡಶೆಟ್ಟಿಮಠ,ಕನಕಪ್ಪ‌ ಕಲ್ಲೊಡ್ಡರ, ಬಸಯ್ಯ ಕಲ್ಮಂಗಿಮಠ,ಶಿವು ಚವ್ಹಾಣ, ಪ್ರಕಾಶ ಕಲ್ಗುಡಿ, ಕಲ್ಲಪ್ಪ‌ ರಾಮಜಿ, ಹನಮಂತ ಕುರಿ, ಪ್ರಕಾಶ ದಿವಾಣದ‌‌ ಸೇರಿದಂತೆ ಅನೇಕರು ಇದ್ದರು.

ವರದಿ : ಸುರೇಶ ಬಂಡಾರಿ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!