ಜಿಲ್ಲಾ ಸುದ್ದಿ

ಅನಧಿಕೃತ ಟೋಲ್ ಪ್ಲಾಜ್ ನಿರ್ಮಾಣ ಪರಿಶೀಲನೆಗೆ. ಸಚಿವ ಎಚ್​,ಕೆ ಪಾಟೀಲ್ ಡಿಸಿ ಗೆ ಪತ್ರ.

ಅನಧಿಕೃತ ಟೋಲ್ ಪ್ಲಾಜಾಗಳಿಂದ ಹಗಲು ದರೋಡೆ.

Share News

ಅನಧಿಕೃತ ಟೋಲ್ ಪ್ಲಾಜ್ ನಿರ್ಮಾಣ ಪರಿಶೀಲನೆಗೆ. ಸಚಿವ ಎಚ್​,ಕೆ ಪಾಟೀಲ್ ಡಿಸಿ ಗೆ ಪತ್ರ 

ಗದಗ: ಸತ್ಯಮಿಥ್ಯ (ಸ -11)

ಗದಗ ಜಿಲ್ಲೆಯಲ್ಲಿ ಅನಧಿಕೃತ ಟೋಲ್ ಪ್ಲಾಜಾ ಮೂಲಕ ವಾಹನ ಸವಾರರಿಂದ ಹಗಲು ದರೋಡೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ನಿತ್ಯ ಲಕ್ಷ ಲಕ್ಷ ರೂಪಾಯಿ ಹಣ ವಸೂಲಿ ಮಾಡುತ್ತಿರುವ ಆರೋಪ‌ ಕೇಳಿ ಬಂದಿದೆ.‌ ಗದಗ ತಾಲೂಕಿನ ಪಾಪನಾಶಿ ಗ್ರಾಮದ ಬಳಿಯ ಟೋಲ್ ಪ್ಲಾಜಾ ಅನಧಿಕೃತ ಎಂದು ವಾಹನ ಸವಾರರು ಆರೋಪ ಮಾಡಿದ್ದಾರೆ .

ಟೋಲ್ ಪ್ಲಾಜಾ ವಿರುದ್ಧ ಸಾರ್ವಜನಿಕರು ಸಾಕಷ್ಟು ಬಾರಿ ಹೋರಾಟ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಹಾದುಹೋಗುವ ಅರಭಾವಿ ಹಾಗೂ ಚಳ್ಳಿಕೇರಿ ರಾಜ್ಯ ಹೆದ್ದಾರಿಯಲ್ಲಿ ಅನಧಿಕೃತ ಟೋಲ್ ಪ್ಲಾಜಾ ಕಾರ್ಯ ನಿರ್ವಹಿಸುತ್ತಿದೆ. 40 ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳು ಇವೆ. ಒಂದು ಪಾಪನಾಶಿ ಟೋಲ್ ಪ್ಲಾಜಾ, ಇನ್ನೊಂದು ಕೊರ್ಲಹಳ್ಳಿ ಟೋಲ್ ಪ್ಲಾಜಾ.

40 ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಗೇಟ್ ಇರಬಾರದು ಎಂದು ನಿಯಮ ಇದೆ. ಆ ನಿಯಮಗಳನ್ನು ಉಲ್ಲಂಘನೆ ಮಾಡಿ, ಪಾಪನಾಶಿ ಬಳಿ ಅಕ್ರಮ ಟೋಲ್ ಪ್ಲಾಜಾ ನಿರ್ಮಾಣ ಮಾಡಿ ಹಣ ವಸೂಲಿ ಮಾಡುವ ಕೆಲಸ ನಡೆಯುತ್ತಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಪನಾಶಿ ಟೋಲ್ ಪ್ಲಾಜಾ ನಿಯಮದ ಪ್ರಕಾರ ಧಾರವಾಡ ಜಿಲ್ಲೆ ಶೆಲವಡಿ ಗ್ರಾಮದ ಬಳಿ ಅಳವಡಿಕೆ ‌ಮಾಡಬೇಕು, ಅದನ್ನು ಬಿಟ್ಟು ಪಾಪನಾಶಿ ಗ್ರಾಮದ ಬಳಿ ಟೋಲ್ ಪ್ಲಾಜಾ ಅಳವಡಿಕೆ ಮಾಡಲಾಗಿದೆ. ಹೀಗಾಗಿ ಇದರಿಂದ ವಾಹನ ಸವಾರರಿಗೆ ಬಹಳ ಹೊರೆ ಆಗುತ್ತದೆ.

ಕೂಡಲೇ ಪಾಪನಾಶಿ ಟೋಲ್ ಗೇಟ್ ತೆರವು ಮಾಡಬೇಕು ಎಂದು ಅಕ್ಕಪಕ್ಕದ ಗ್ರಾಮಸ್ಥರು, ವಾಹನ ಚಾಲಕರು ಮಾಲೀಕರು ಒತ್ತಾಯಿಸಿದ್ದಾರೆ.

ಲಾರಿ ಮಾಲೀಕರ ಸಂಘದಿಂದ ಹೋರಾಟ

ಪಾಪನಾಶಿ ಟೋಲ್ ಗೇಟ್ ಅನಧಿಕೃತ ಎಂದು ಲಾರಿ ಮಾಲೀಕರ ಸಂಘ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಸದ್ಯ ‘ಎಪಿಜೆ ಅಬ್ದುಲ್ ಕಲಾಂ ಲಾರಿ ಚಾಲಕರ ಹಾಗೂ ಮಾಲೀಕರ ಸಂಘ’ದಿಂದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್​ಕೆ ಪಾಟೀಲ್ ಅವರಿಗೆ ಮನವಿ ಮಾಡಲಾಗಿದೆ.

ಡಿಸಿಗೆ ಪತ್ರ ಬರೆದ ಸಚಿವ ಎಚ್​ಕೆ ಪಾಟೀಲ್

ಪಾಪನಾಶಿ ಟೋಲ್ ಗೇಟ್ ಅನಧಿಕೃತ ಎಂಬ ಆರೋಪಗಳು ಕೇಳಿಬಂದಿದೆ. ಆ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸದ್ಯ ಸಚಿವ ಎಚ್​ಕೆ ಪಾಟೀಲ್ ಗದಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಮಾಡಿ ಕೂಡಲೇ ಕ್ರಮ ಕೈಗೊಳ್ಳವುದಾಗಿ ಗದಗ ಡಿಸಿ ಗೋವಿಂದರೆಡ್ಡಿ ಹೇಳಿದ್ದಾರೆ.

ಕಾನೂನು ಉಲ್ಲಂಘನೆ ಮಾಡಿ, ಹಗಲು ದರೋಡೆ ಮಾಡಲಾಗುತ್ತಿದೆ. ಅನಧಿಕೃತ ಟೋಲ್ ಗೇಟ್​​ ಮೂಲಕ ವಾಹನ ಸವಾರರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಇದರಿಂದ ಗದಗ ಹಾಗೂ ಮುಂಡರಗಿ ಬಸ್ ದರ ಕೂಡಾ ಹೆಚ್ಚಾಗಿದೆ. ಬಡ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇನಾದ್ರು ಜಿಲ್ಲಾಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಂಡು, ಅನಧಿಕೃತ ಟೋಲ್ ಗೇಟ್ ತೆರವು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ : ಮುತ್ತು ಗೋಸಲ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!