ಜಿಲ್ಲಾ ಸುದ್ದಿ

ದಣಿವರಿಯದ ನಾಯಕನಿಗೆ 78 ರ ಸಂಭ್ರಮ.

Share News

ದಣಿವರಿಯದ ನಾಯಕನಿಗೆ 78 ರ ಸಂಭ್ರಮ.

ಜಿ,ಎಸ್ ಪಾಟೀಲ್ 78ನೇ ಜನ್ಮದಿನದ ಅಂಗವಾಗಿ ವಿಶೇಷ ಲೇಖನ

ರೋಣ ಮತಕ್ಷೇತ್ರದ ಅಭಿವೃದ್ಧಿಯ ಹರಿಕಾರ ಸಾಮಾಜಿಕ ಸೇವಾ ಮೂರ್ತಿ ಸಾವಿರ ಕೆರೆಗಳ ಸರದಾರ ಯುವಕರ ಕಣ್ಮಣಿ ರೋಣದ ಮಾಣಿಕ್ಯ ದಣಿವರಿಯದ ನಾಯಕ ಜನರ ಕಷ್ಟಗಳಿಗೆ ಸದಾ ಸ್ಪಂದಿಸುವ ಮೂಲಕ ಜನನಾಯಕರಾದ ಜಿ,ಎಸ್ ಪಾಟೀಲರ 78 ನೇಯ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಲೇಖನ

ಜನನಾಯಕ ಎಂದರೆ ಪೋಸ್ಟರ್ ಶೂರರೇ ತುಂಬಿರುವ ಈ ಕಾಲದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಯನ್ನು ತನ್ನ ಸಮಸ್ಯೆ ಎಂಬಂತೆ ಬಗೆಹರಿಸುವ ನಾಯಕ ಎಂದರೆ ಅದುವೇ ನಾಡು ಮೆಚ್ಚಿದ ಹಿರಿಯ ರಾಜಕಾರಣಿ ರೋಣ ಮತಕ್ಷೇತ್ರದ ಜನರ ಅಚ್ಚುಮೆಚ್ಚಿನ ಜನನಾಯಕ ಶಾಸಕ ಜಿ,ಎಸ್ ಪಾಟೀಲ್ ಸಾಹೇಬ್ರು ಎನ್ನುತ್ತಾರೆ ಅವರ ಅಭಿಮಾನಿ ಬಳಗ.

ರೋಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತ ರಾಜಕೀಯದ ಅಧಿಕಾರ ಇರಲಿ ಇರದೇ ಇರಲಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತಾ ಜನರ ಪ್ರೀತಿಗೆ ಪಾತ್ರರಾಗಿರುವ ಅವರು ಯುವ ಅಭಿಮಾನಿಗಳಿಗೆ ಆದರ್ಶಮಯವಾಗಿ ಕಾಣುತ್ತಿದ್ದಾರೆ.

ಗುರುಪಾದಗೌಡ ಸಂಗನಗೌಡ ಪಾಟೀಲರು 1948ರ ಏಪ್ರಿಲ್ 10 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕಲಾ ವಿಭಾಗ ಪದವಿಯನ್ನು ಪಡೆದಿದ್ದಾರೆ.

ರೋಣ ಮತಕ್ಷೇತ್ರದ ಶಾಸಕರಾಗಿರುವ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಂಕಲ್ಪವನ್ನು ಹೊಂದಿದ್ದು ಜನಪರ ಕಾರ್ಯ ಹಾಗೂ ಬಡವರ ದೀನದಲಿತರ ಆಶಾಕಿರಣವಾಗಿ ಕಾರ್ಯವನ್ನು ಮಾಡುತ್ತಾ ಹಲವಾರು ಯೋಜನೆಗಳನ್ನು ಮತಕ್ಷೇತ್ರದಲ್ಲಿ ಮಾಡಿದ್ದಾರೆ.ಜಿಲ್ಲೆಯ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡರೂ ಸಹಿತ ಜನರ ಪರವಾಗಿ ಹಾಗೂ ಜಿಲ್ಲೆಯ ಅಭಿವೃದ್ಧಿಯ ಕುರಿತಂತೆ  ತಮ್ಮ ಕಾರ್ಯವನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿ ರಾಜಕಾರಣವನ್ನು ಮಾಡುತ್ತಿದ್ದಾರೆ.

ರೋಣ ಮತಕ್ಷೇತ್ರದ ಅಭಿವೃದ್ಧಿಯ ಹರಿಕಾರನಾಗಿ ಸದಾ ರೈತರ ಪರ ಕೆಲಸಗಳನ್ನು ಮಾಡುತ್ತ ರೈತರ ಕಷ್ಟಗಳಿಗೆ ಸ್ಪಂದಿಸುವ ನಾಯಕನಾಗಿ ಕುಡಿಯುವ ನೀರಿನ ಅಭಾವವಿರುವ ರೋಣ ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರಿಗೆ ನೀರಾವರಿ ಬೇಸಾಯವನ್ನು ಮಾಡುವಂತಹ ಅಭಿವೃದ್ಧಿಪರ ಕೆಲಸಗಳನ್ನು ಮಾಡಿರುವುದರಿಂದಾಗಿ ರೈತರು ಅವರನ್ನು ಮಣ್ಣಿನ ಮಗ ಎನ್ನುವಂತೆ ಅಭಿಮಾನದಿಂದ ಹೇಳುತ್ತಿದ್ದಾರೆ.

ರೋಣ ಮತಕ್ಷೇತ್ರದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ನಾಯಕನಾಗಿ ತಮ್ಮ ಕಡೆಗೆ ಯಾವುದೇ ವ್ಯಕ್ತಿ ಸಮಸ್ಯೆ ಎಂದು ಬಂದರೆ ತಮ್ಮ ಸಮಸ್ಯೆ ಎನ್ನುವಂತೆ ಅವರನ್ನು ಅಭಿಮಾನದಿಂದ ಆತ್ಮೀಯವಾಗಿ ಮಾತನಾಡಿಸುತ್ತಾ ಅವರ ಕಷ್ಟಗಳಿಗೆ ಸ್ಪಂದಿಸುವ ನಾಯಕರಾಗಿ ಅವರನ್ನು ರೋಣ ಮತಕ್ಷೇತ್ರದ ರತ್ನ ಎನ್ನುವಂತೆ ಹೇಳುತ್ತಿದ್ದಾರೆ.

ಶಿಕ್ಷಣ ಕ್ಷೇತ್ರ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಹಲವಾರು ರೀತಿಯಾದಂತಹ ಅಭಿವೃದ್ಧಿಪರ ಕೆಲಸಗಳನ್ನು ಅವರು ರೋಣದಲ್ಲಿ ಮಾಡಿದ್ದು.ಕಡು-ಬಡವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರದೇ ಆದ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣವನ್ನು ನೀಡುವುದರೊಂದಿಗೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ.

ಅವರ ಸರಳ ಹಾಗೂ ಸಜ್ಜನಿಕೆಯ ಮಾತುಗಳಿಂದಾಗಿ ಹಿರಿಯರು ಕಿರಿಯರು ಎನ್ನದೆ ಗೌರವವನ್ನು ಕೊಡುತ್ತಾ ಅವರ ಗೌರವವನ್ನು ಉನ್ನತ ಸ್ಥಾನದಲ್ಲಿ ಇರಿಸುವಂತಹ ವ್ಯಕ್ತಿತ್ವವನ್ನು ಶಾಸಕ ಜಿ,ಎಸ್ ಪಾಟೀಲ್ ಅವರ ಸರಳತೆಯನ್ನು ರೋಣದ ಮಾಣಿಕ್ಯ ಎಂದು ರೋಣ ಮತಕ್ಷೇತ್ರದ ಜನತೆ ಹೇಳುತ್ತಿದ್ದಾರೆ.

ರಾಜಕಾರಣದಲ್ಲಿ ಒಬ್ಬ ಪ್ರಬುದ್ಧ ಹಿರಿಯ ರಾಜಕಾರಣಿಯಾಗಿರುವ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದರಿಂದಾಗಿ ಅವರ ಅಭಿಮಾನಿ ಬಳಗ ಸಚಿವ ಸ್ಥಾನವನ್ನು ನೀಡುವಂತೆ ಹಲವಾರು ಬಾರಿ ಹೋರಾಟ ಹಾಗೂ ಮನವಿಯನ್ನು ಸಲ್ಲಿಸಿರುವುದು ಸನ್ಮಾನ್ಯ ಶಾಸಕ ಜಿ,ಎಸ್ ಪಾಟೀಲ್ ಅವರಿಗೆ ಸಚಿವರಾಗುವ ಎಲ್ಲಾ ಅರ್ಹತೆಗಳು ಇದ್ದರೂ ಸಚಿವ ಸ್ಥಾನ ಸಿಗದೇ ಇರುವುದರಿಂದ ಅವರು ಸಚಿವರಾಗದೆ ಇದ್ದರೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿಂದೆಬೀಳದೆ ರೋಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ರೋಣ ಮತಕ್ಷೇತ್ರದ ಬಡ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದರೊಂದಿಗೆ ಜಿಲ್ಲೆ ರಾಜ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಅವರಿಗೆ ಸಹಾಯ ಮಾಡುವುದಲ್ಲದೆ ಮಾರ್ಗದರ್ಶಿಗಳಾಗಿ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸುವಂತೆ ಹೇಳುತ್ತಾರೆ.

ರೋಣ ಮತಕ್ಷೇತ್ರದಲ್ಲಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿರುವ ಅವರು ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ ಆರೋಗ್ಯ ತಪಾಸಣಾ ಶಿಬಿರ ರಾಷ್ಟ್ರೀಯ ದಿನಾಚರಣೆಗಳ ಕುರಿತು, ಶುದ್ಧ ನೀರಿನ ಘಟಕಗಳು ಪಟ್ಟಣದ ಸ್ವಚ್ಛತಾ ಕಾರ್ಯಕ್ರಮಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಪಟ್ಟಣದ ಉದ್ಯಾನವನಗಳ ನಿರ್ವಹಣೆಗಳ ಕುರಿತಂತೆ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಸುತ್ತಾ ಅಭಿಮಾನಿ ಬಳಗದ ಪ್ರತಿಯೊಬ್ಬ ವ್ಯಕ್ತಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಸಾಮಾಜಿಕ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ.

78ನೇ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿ ಬಳಗ ಸೇರಿದಂತೆ ರೋಣ ಮತಕ್ಷೇತ್ರದ ಜನರು ಹಲವಾರು ಸಾಮಾಜಿಕ ಕಾರ್ಯಗಳನ್ನು ಅಂದು ಹಮ್ಮಿಕೊಳ್ಳುತ್ತಿದ್ದು ಅವರ ಆದರ್ಶಕ್ಕೆ ಸಾಕ್ಷಿಯಾಗಿದೆ.

ಈ ಲೇಖನದ ಮೂಲಕ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುವುದರೊಂದಿಗೆ ಮುಂದಿನ ದಿನಮಾನದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಲೆಂದು ಆಶಿಸುತ್ತೇವೆ.

ಲೇಖನ: ಮುತ್ತು ಗೋಸಲ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!