
ಅಂಗನವಾಡಿ ಕೇಂದ್ರದಲ್ಲಿ ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆ!
ಗಜೇಂದ್ರಗಡ : ಸತ್ಯಮಿಥ್ಯ (ಮಾ -25).
ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆಣಚಮಟ್ಟಿ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರದಲ್ಲಿ ಕಳೆಪೆ ಆಹಾರವನ್ನು ದಿನನಿತ್ಯ ಮಕ್ಕಳು ಸೇವಿಸುತ್ತಿದ್ದಾರೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಕಳಪೆ ಗುಣಮಟ್ಟದ ಮತ್ತು ಕೊಳೆತು ಹೊಗಿರುವ ಮೊತ್ತಗಳನ್ನು ವಿತರಿಸುತ್ತಿದ್ದಾರೆ ಎಂದು ಎಸ್ ಎಫ್ ಐ ನ ಗದಗ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಆರೋಪಿಸುತ್ತಿದ್ದಾರೆ.
ಈ ಕುರಿತು ಅವರು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ರೋಣ (ಸಿಡಿಪಿಒ)ಅವರಿಗೆ ಮನವಿ ಮುಖಾಂತರ. ಬೆಣಚಮಟ್ಟಿ ಗ್ರಾಮದ ರೇಷ್ಮಾ ಕಳಕಪ್ಪ ರಾಠೋಡ್ ಅವರಿಗೆ ಕಳಪೆ ಗುಣಮಟ್ಟದ ಆಹಾರ ಮತ್ತು ಕೊಳೆತ ಮೊಟ್ಟೆಗಳನ್ನು ವಿತರಿಸಿದ್ದಾರೆ ಅಲ್ಲದೇ ಇಂದಿನ ಮಕ್ಕಳೇ ನಾಳೆಯ ಭಾರತದ ಭವಿಷ್ಯ ಎಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಒಂದು ಕಡೆ ಹೇಳುತ್ತಾರೆ ಆದರೆ ಇನ್ನೋಂದು ಕಡೆ ಈ ತರಹದ ಕಳಪೆ ಗುಣಮಟ್ಟದ ವಿಷ ಪೂರಿತ ಮೊಟ್ಟೆ ಆಹಾರಗಳನ್ನು ಸೇವಿಸಲು ಕೊಡುತ್ತಿದ್ದಾರೆ, ಬಾಣಂತಿಯರ ಆರೋಗ್ಯ ದೃಷ್ಟಿಯಿಂದ ಪೌಷ್ಟಿಕ ಆಹಾರವನ್ನು ಕೂಡ ಸರಿಯಾಗಿ ಸಿಗುತ್ತಿಲ್ಲ, ಕೂಡಿಯುವ ನೀರಿನ ವ್ಯವಸ್ಥೆ ಇಲ್ಲ, ಶಾಲೆಯ ಹತ್ತಿರ ಮಾದಕ ವಸ್ತುಗಳು ಸಿಗುತ್ತವೆ. ಚರಂಡಿ ನೀರು ನೇರವಾಗಿ ಅಂಗನವಾಡಿ ಕೇಂದ್ರದ ಮುಂದೆ ಇದೆ ಅದು ಸ್ವಚ್ಛವಾಗಿ ಇಲ್ಲ ಇತರಹದ ವ್ಯವಸ್ಥೆಯಿಂದ ಮಕ್ಕಳ ಮತ್ತು ಗರ್ಭಿಣಿಯರು ತುಂಬಾ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಕಳಪೆ ಆಹಾರ ವಿತರಣೆ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿ ಕೊಂಡಿದ್ದಾರೆ.
ವರದಿ : ಚನ್ನು ಎಸ್